ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬುಡಗಾಂ ಜಿಲ್ಲೆಯಲ್ಲಿ ಮಂಗಳವಾರ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆಯುತ್ತಿರುವ ಗುಂಡಿನ ಕಾಳಗದಲ್ಲಿ, ಯುವಕನೊಬ್ಬನಿಗೆ ಗುಂಡು ತಗಲಿ ಸಾವನ್ನಪ್ಪಿದ್ದಾರೆ.
"ಈ ಗುಂಡಿನ ಕಾಳಗ ನಡೆಯುತ್ತಿರುವ ಪ್ರದೇಶದ ಬಳಿಯಿರುವ ದರ್ಭಗ್ ಗ್ರಾಮದ ಬಳಿ ಗುಂಡು ಹೊಡೆದಿದ್ದರಿಂದ ಈ ಯುವಕ ಮೃತಪಟ್ಟಿದ್ದಾರೆ ಮತ್ತು ಅವರನ್ನು ಜಾಹಿದ್ ರಶೀದ್ ಘನೈ ಎಂದು ಗುರುತಿಸಲಾಗಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
"ಗುಂಡು ತಗುಲಿದ ನಂತರ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ನಂತರ ಅವರು ಮೃತಪಟ್ಟಿದ್ದಾರೆ" ಎಂದು ಅವರು ಹೇಳಿದ್ದಾರೆ.
ಈ ಗುಂಡಿನ ಕಾಳಗದಲ್ಲಿ ಯುವಕನಿಗೆ ಗುಂಡು ತಗಲಿದ್ದು ಹೇಗೆ ಎಂಬ ಪ್ರಶ್ನೆಗೆ, ಈ ವೇಳೆಯಲ್ಲಿ ಆ ಪ್ರದೇಶದಲ್ಲಿ ಪ್ರತಿಭಟನೆಗಳು ಪ್ರಾರಂಭವಾದವು ಎಂದು ಅಧಿಕಾರಿ ಹೇಳಿದ್ದಾರೆ.
ಪ್ರತಿಭಟನಾ ನಿರತ ಯುವಕರು ಸಿ ಆರ್ ಪಿ ಎಫ್ ಅರೆ ಮಿಲಿಟರಿ ವಾಹನಗಳ ಮೇಲೆ ಕಲ್ಲುಗಳನ್ನು ಎಸೆದಿದ್ದಾಗಿಯೂ ಅವರು ಹೇಳಿದ್ದಾರೆ. ಈ ಗುಂಡಿನ ಕಾಳಗದಲ್ಲಿ ಭದ್ರತಾ ಪಡೆಗಳ ಬಲವನ್ನು ಹೆಚ್ಚಿಸಲು ಸಿ ಆರ್ ಪಿ ಎಫ್ ಅರೆ ಮಿಲಿಟರಿ ಪಡೆ ಧಾವಿಸುತ್ತಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos