ಸುಪ್ರೀಂ ಕೋರ್ಟ್ 
ಪ್ರಧಾನ ಸುದ್ದಿ

ತ್ರಿವಳಿ ತಲಾಖ್: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ಮುಸ್ಲಿಮರಲ್ಲಿರುವ ವಿವಾದಾತ್ಮಕ ತ್ರಿವಳಿ ತಲಾಖ್‌ ನ ಸಂವಿಧಾನಾತ್ಮಕ ಮಾನ್ಯತೆ ಕುರಿತು ವಾದ-ಪ್ರತಿ ಆಲಿಸಿರುವ....

ನವದೆಹಲಿ: ಮುಸ್ಲಿಮರಲ್ಲಿರುವ ವಿವಾದಾತ್ಮಕ ತ್ರಿವಳಿ ತಲಾಖ್‌ ನ ಸಂವಿಧಾನಾತ್ಮಕ ಮಾನ್ಯತೆ ಕುರಿತು ವಾದ-ಪ್ರತಿ ಆಲಿಸಿರುವ ಸುಪ್ರೀಂ ಕೋರ್ಟ್ ನ ಪಂಚ ಸದಸ್ಯ ಪೀಠ ಗುರುವಾರ ತೀರ್ಪು ಕಾಯ್ದರಿಸಿದೆ.
ತ್ರಿವಳಿ ತಲಾಖ್ ಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೆಹರ್ ನೇತೃತ್ವದ ಸುಪ್ರೀಂ ಪೀಠ ಕಳೆದ ಆರು ದಿನಗಳಿಂದ ವಿಚಾರಣೆಯನ್ನು ಇಂದು ಅಂತ್ಯಗೊಳಿಸಿದ್ದು, ತೀರ್ಪು ಕಾಯ್ದಿರಿಸಿದೆ.
ನಿನ್ನೆ ತ್ರಿವಳಿ ತಲಾಖ್‌ ವಿರುದ್ಧ ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಅಟಾರ್ನಿ ಜನರಲ್‌ ಮುಕುಲ್‌ ರೋಹಟಗಿ, ಮುಸ್ಲಿಂ ಕಾನೂನು ಮಂಡಳಿ ಪರ ನ್ಯಾಯವಾದಿ ಕಪಿಲ್‌ ಸಿಬಲ್‌ ಎತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸುವ ರೀತಿಯಲ್ಲೇ ಪ್ರತಿಕ್ರಿಯಿಸಿತು. ತ್ರಿವಳಿ ತಲಾಖ್ ಅನ್ನು ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ನಡುವಿನ ತಾರತಮ್ಯ ಎಂದು ನೋಡಬೇಡಿ. ಇದು ಉಳ್ಳವರು (ಪುರುಷರು) ಮತ್ತು ಇಲ್ಲದವರು (ಮಹಿಳೆಯರ) ನಡುವಿನ ಹೋರಾಟ. 25 ಇಸ್ಲಾಮಿಕ್‌ ರಾಷ್ಟ್ರಗಳಲ್ಲಿ ಈ ಪದ್ಧತಿ ಇಲ್ಲ ಎಂದಾದ ಮೇಲೆ ಅದು ಇಸ್ಲಾಂನಲ್ಲಿ ಕಡ್ಡಾಯ ಎಂದು ಹೇಳಲಾಗದು ಎಂದಿದ್ದರು.
ಮಂಗಳವಾರವಷ್ಟೇ ವಾದಿಸಿದ್ದ ಸಿಬಲ್‌, ಹಿಂದೂಗಳು ಅಯೋಧ್ಯೆ ಹೇಗೆ ರಾಮಜನ್ಮಭೂಮಿ ಎಂದು ನಂಬಿದ್ದಾರೋ, ತ್ರಿವಳಿ ತಲಾಖ್‌ ಕೂಡ ಮುಸ್ಲಿಮರ ನಂಬಿಕೆಯ ಪ್ರಶ್ನೆ. ಅದನ್ನು 1400 ವರ್ಷಧಿಗಳಿಂದಲೂ ಆಚರಿಸಲಾಗುತ್ತಿದೆ ಎಂದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT