ಮಾಜಿ ಆರ್ ಜೆ ಡಿ ಸಂಸದ ಶಹಾಬುದ್ದೀನ್ 
ಪ್ರಧಾನ ಸುದ್ದಿ

ಮಾಜಿ ಆರ್ ಜೆ ಡಿ ಸಂಸದ ಶಹಾಬುದ್ದೀನ್ ನನ್ನು ವಶಕ್ಕೆ ತೆಗೆದುಕೊಂಡ ಸಿಬಿಐ

ಬಿಹಾರ ಮೂಲದ ಪತ್ರಕರ್ತ ರಾಜದೇವ್ ರಂಜನ್ ಅವರ ಕೊಲೆ ಪ್ರಕರಣದ ಸಂಬಂಧದಲ್ಲಿ ಮಾಜಿ ಆರ್ ಜೆ ಡಿ ಸಂಸದ ಮೊಹಮದ್ ಶಹಾಬುದ್ದೀನ್ ನನ್ನು ಸಿಬಿಐ ಸೋಮವಾರ ವಶಕ್ಕೆ ತೆಗೆದುಕೊಂಡಿರುವುದಾಗಿ

ನವದೆಹಲಿ: ಬಿಹಾರ ಮೂಲದ ಪತ್ರಕರ್ತ ರಾಜದೇವ್ ರಂಜನ್ ಅವರ ಕೊಲೆ ಪ್ರಕರಣದ ಸಂಬಂಧದಲ್ಲಿ ಮಾಜಿ ಆರ್ ಜೆ ಡಿ ಸಂಸದ ಮೊಹಮದ್ ಶಹಾಬುದ್ದೀನ್ ನನ್ನು ಸಿಬಿಐ ಸೋಮವಾರ ವಶಕ್ಕೆ ತೆಗೆದುಕೊಂಡಿರುವುದಾಗಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಶಹಾಬುದ್ದೀನ್ ಸದ್ಯಕ್ಕೆ ತಿಹಾರ್ ಜೈಲಿನಲ್ಲಿ ಬಂಧಿತರಾಗಿದ್ದಾರೆ. 
ಬಿಹಾರದ ಸಿವಾನ್ ಜಿಲ್ಲೆಯ ರಂಜನ್ ಕೊಲೆ ಆರೋಪದಲ್ಲಿ ಹೆಸರಿಸಲಾಗಿರುವ ೧೦ ಜನರಲ್ಲಿ ಶಹಾಬುದ್ದೀನ್ ಕೂಡ ಒಬ್ಬರು. ಸಾಕ್ಷ್ಯಾಧಾರಗಳನ್ನು ಸಿಬಿಐ ಕಲೆಹಾಕಿದ್ದು, ಶಹಾಬುದ್ದೀನ್ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಸಿದ್ಧವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈ ಕೊಲೆಯ ಹಿಂದೆ ಶಹಾಬುದ್ದೀನ್ ಇದ್ದಾರೆ ಎಂದು ಸಂತ್ರಸ್ತನ ಪತ್ನಿ ಆಶಾ ರಂಜನ್ ಮತ್ತು ತಂದೆ ರಾಧೇ ಕೃಷ್ಣ ಚೌಧರಿ ಹಲವು ಬಾರಿ ಆರೋಪಿಸಿದ ಮೇಲೆ ಈ ಪ್ರಕರಣವನ್ನು ಸೆಪ್ಟೆಂಬರ್ ನಲ್ಲಿ ಸಿಬಿಐ ತನಿಖೆಗೆ ನೀಡಲಾಗಿತ್ತು. ತನಿಖೆಯ ವೇಳೆಯಲ್ಲಿ ಅವನ ಸಹಚರರಾದ ಮೊಹಮದ್ ಕೈಫ್ ಮತ್ತು ಮೊಹಮದ್ ಜಾವೇದ್ ಅವರುಗಳ ಹೆಸರು ಮುನ್ನಲೆಗೆ ಬಂದದ್ದರಿಂದ ಶಹಾಬುದ್ದೀನ್ ಕೈವಾಡದ ಬಗ್ಗೆ ಸಂಶಯ ದಟ್ಟವಾಗಿತ್ತು. 
ಜಾವೇದ್ ಮತ್ತು ಕೈಫ್ ಸದ್ಯಕ್ಕೆ ಜಾಮೀನಿನ ಮೇಲಿದ್ದು, ಶಹಾಬುದ್ದೀನ್ ಅವರನ್ನು ೧೦ ನೇ ಆರೋಪಿಯನ್ನಾಗಿಸಲಾಗಿದೆ. 
ಈ ಮೊದಲು ಕೊಲೆಯ ತನಿಖೆ ಮಾಡಿದ್ದ ಬಿಹಾರದ ಪೊಲೀಸರು ಇದನ್ನು ಪೂರ್ವನಿಯೋಜಿತ ಕೊಲೆ ಎಂದು ಬಗೆದಿದ್ದರು. 
ಸಿವಾನ್ ನಲ್ಲಿ ಹದಗೆಟ್ಟಿದ್ದ ಕಾನೂನು ಸುವ್ಯವಸ್ಥೆಯನ್ನು ವರದಿ ಮಾಡುತ್ತಿದ್ದ ಕೊಲೆಯಾದ ಪತ್ರಕರ್ತ ಈ ಅಪರಾಧಿಗಳಿಗೆ ಸಿಂಹಸ್ವಪ್ನವಾಗಿದ್ದರು ಎಂದು ಮೂಲಗಳು ತಿಳಿಸಿವೆ. 
ಮೇ ೧೩, ೨೦೧೬ ರಲ್ಲಿ ಪತ್ರಕರ್ತ, ಕಚೇರಿಯಿಂದ ಮನೆಗೆ ಹಿಂದಿರುಗುವಾಗ ಗುಂಡೇಟಿಗೆ ಬಲಿಯಾಗಿ ಕೊಲೆಯಾಗಿದ್ದರು. ಆ ಸಮಯದಲ್ಲಿ ಶಹಾಬುದ್ದೀನ್ ಜೈಲಿನಲ್ಲಿ ಬಂಧಿತರಾಗಿದ್ದರು. 
ಅಪಹರಣ, ಕೊಲೆ ಇತ್ಯಾದಿಯಾಗಿ ೩೯ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ಶಹಾಬುದ್ದೀನ್ ಅವರನ್ನು ಫೆಬ್ರವರಿ ೧೮ ರಂದು ತಿಹಾರ ಜೈಲಿಗೆ ಸ್ಥಳಾಂತರಿಸಲಾಗಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT