ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಭಾರತ ಮತ್ತು ಬಾಂಗ್ಲಾದೇಶ ನಡುವೆ ಜಂಟಿ ಸೇನಾ ಸಮರಾಭ್ಯಾಸ ಇಂದು ಆರಂಭ

ಮಿಜೋರಂನಲ್ಲಿರುವ ವೈರಂಗ್ಟೆಯಲ್ಲಿರುವ ಭಾರತದ ಒಳನುಸುಳುಕೋರರ ನಿಗ್ರಹ ಮತ್ತು ಅರಣ್ಯ ....

ನವದೆಹಲಿ: ಮಿಜೋರಂನಲ್ಲಿರುವ ವೈರಂಗ್ಟೆಯಲ್ಲಿರುವ ಭಾರತದ ಒಳನುಸುಳುಕೋರರ ನಿಗ್ರಹ ಮತ್ತು ಅರಣ್ಯ ಯುದ್ಧ ಶಾಲೆಯಲ್ಲಿ ನಡೆಯಲಿರುವ ಜಂಟಿ ಸೇನಾ ಸಮರಾಭ್ಯಾಸದಲ್ಲಿ ಭಾರತ ಮತ್ತು ಬಾಂಗ್ಲಾದೇಶದ ಸೇನೆಗಳು ಭಾಗಿಯಾಗಲಿವೆ.
ಇಂದಿನಿಂದ ಇದೇ ತಿಂಗಳು 18ರವರೆಗೆ ಸಂಪ್ರಿತಿ ಸಮರಾಭ್ಯಾಸ ನಡೆಯಲಿದೆ. ಎರಡೂ ದೇಶಗಳ ದ್ವಿಪಕ್ಷೀಯ ಮಿಲಿಟರಿ ಸಂಬಂಧವನ್ನು ಉತ್ತೇಜಿಸುವ ಸಲುವಾಗಿಯಾಗಿ ಈ ಸಮರಾಭ್ಯಾಸವನ್ನು ನಡೆಸಲಾಗುತ್ತಿದ್ದು, ಬಂಡುಕೋರರ ನಿಗ್ರಹ ಮತ್ತು ಭಯೋತ್ಪಾದನೆ ಕಾರ್ಯಚರಣೆಯನ್ನು ನಿಗ್ರಹಿಸಲು ಅರೆ ಪರ್ವತದ ಕಾಡಿನ ಭೂಪ್ರದೇಶದಲ್ಲಿ ಇದು ನಡೆಯಲಿದೆ. 
ವೈರಂಗ್ಟೆಯಲ್ಲಿ ಕ್ಷೇತ್ರ ತರಬೇತಿ, ಮೇಘಾಲಯದ ಉಮ್ರೊಯ್ ಕಂಟೋನ್ ಮೆಂಟ್ ನಲ್ಲಿ ಕಮಾಂಡ್ ಪೋಸ್ಟ್ ತರಬೇತಿಯನ್ನು ಸಂಪ್ರಿತಿ ತರಬೇತಿ ಒಳಗೊಂಡಿದೆ.
ಇದರ ಹೊರತಾಗಿ, ಇದೇ 13ರಿಂದ ಡಿಸೆಂಬರ್ 10ರವರೆಗೆ ಬಿಹಾರದ ದಾನಾಪುರ್ ಕಂಟೋನ್ ಮೆಂಟ್ ನಲ್ಲಿ ಭಾರತ ಹಾಗೂ ಬಾಂಗ್ಲಾದೇಶಗಳ ಮಿಲಿಟರಿ ನಡುವೆ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ ಕುರಿತು ಜಂಟಿ ತರಬೇತಿ ನಡೆಯಲಿದೆ. 
ಕಳೆದ ವರ್ಷ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಜಂಟಿ ಸಮರಾಭ್ಯಾಸ ಮತ್ತು 2015ರಲ್ಲಿ ಪಶ್ಚಿಮ ಬಂಗಾಳದ ಬಿನ್ನಗುರಿಯಲ್ಲಿ ಈ ಜಂಟಿ ಸಮರಾಭ್ಯಾಸ ನಡೆದಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT