ನಾರಾಯಣ ರಾಣೆ 
ಪ್ರಧಾನ ಸುದ್ದಿ

ಪಕ್ಷ ಸೇರ್ಪಡೆ ಸಂಬಂಧ ರಾಣೆ ಕಡೆಯಿಂದ ಯಾವುದೇ ಮಾತುಕತೆಯಿಲ್ಲ: ಬಿಜೆಪಿ

ಕಾಂಗ್ರೆಸ್ ತೊರೆದಿರುವ ನಾರಾಯಣ ರಾಣೆ ಅವರ ಕಡೆಯಿಂದ ಪಕ್ಷ ಸೇರ್ಪಡೆ ಸಂಬಂಧ ಯಾವುದೇ ಪ್ರಸ್ತಾವನೆ ಅಥವಾ ಔಪಚಾರಿಕ ಮಾತುಕತೆ ನಡೆದಿಲ್ಲ ಎಂದು ...

ಮುಂಬಯಿ/ ಪುಣೆ: ಕಾಂಗ್ರೆಸ್ ತೊರೆದಿರುವ ನಾರಾಯಣ ರಾಣೆ ಅವರ ಕಡೆಯಿಂದ ಪಕ್ಷ ಸೇರ್ಪಡೆ ಸಂಬಂಧ ಯಾವುದೇ ಪ್ರಸ್ತಾವನೆ ಅಥವಾ ಮಾತುಕತೆ ನಡೆದಿಲ್ಲ ಎಂದು ಭಾರತೀಯ ಜನತಾ ಪಕ್ಷ ಹೇಳಿದೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ನಾಯಕ ನಾರಾಯಣ ರಾಣೆ ಅವರು ಪಕ್ಷ ತೊರೆಯುವುದಾಗಿ ಗುರುವಾರ ಘೋಷಿಸಿದ್ದಾರೆ.
ನಾರಾಯಣ ರಾಣೆ ಬಿಜೆಪಿ ಸೇರ್ಪಡೆ ಸಂಬಂದ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಕಂದಾಯ ಸಚಿವ ಚಂದ್ರಕಾಂತ ಪಾಟೀಲ್, ಪಕ್ಷ ಸೇರುವಂತೆ ಆಹ್ವಾನಿಸಲು ನನಗೆ ಯಾವುದೇ ಹಕ್ಕಿಲ್ಲ, ನನಗೆ ಈ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ, ರಾಣೆ ಮುಖ್ಯಮಂತ್ರಿಯಾಗಿದ್ದವರು,ಈ ಸಂಬಂಧ ಅಮಿತ್ ಶಾ ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ.
ರಾಣೆ ಬಿಜೆಪಿ ಸೇರುವ ಸಂಬಂಧ ಪಕ್ಷದ ಕೋರ್ ಕಮಿಟಿ ಸಭೆಯಲ್ಲೂ ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳಿದ್ದಾರೆ. ರಾಣೆ ಒಂದು ವೇಳೆ ಬಿಜೆಪಿ ಸೇರಿದರೆ ತಮ್ಮ ಸಚಿವ ಖಾತೆಯನ್ನು ಅವರಿಗೆ ಬಿಟ್ಟು ಕೊಡುವುದಾಗಿ ಈ ಹಿಂದೆ ಪಾಟೀಲ್ ಘೋಷಿಸಿದ್ದರು.
ಇನ್ನೂ ಈ ಸಂಬಂಧ ಪ್ರತಿಕ್ರಿಯಿಸಿರುವ ಪಕ್ಷದ ವಕ್ತಾರ ಮಾಧವ್ ಭಂಡಾರಿ, ಸ್ವತಃ ರಾಣೆ ಅವರೇ ಈ ಬಗ್ಗೆ ಯಾವುದೇ ಹೇಳಿಕೆ ನೀಡದಿರುವಾಗ ನಾವು ಏಕೆ ಪ್ರತಿಕ್ರಿಯೆ ನೀಡಬೇಕು ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

2025 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ನಟ ಪ್ರಕಾಶ್‌ ರಾಜ್‌ ಸೇರಿ 70 ಮಂದಿ ಆಯ್ಕೆ

ಡಿಕೆಶಿ, ತೇಜಸ್ವಿ ಸೂರ್ಯ ಜಟಾಪಟಿ; ಬೆಂಗಳೂರಿನಲ್ಲಿ ಟನಲ್ ರಸ್ತೆ ಬಗ್ಗೆ ಕೇಂದ್ರ ಸಚಿವ ಖಟ್ಟರ್ ಹೇಳಿದ್ದೇನು?

ಕೇಂದ್ರದ ಬೆಳೆ ವಿಮಾ ಯೋಜನೆ: ಅನ್ನದಾತನಿಗೆ 'ಅಪಹಾಸ್ಯ'; ಕೇವಲ 3 ರೂ. ಪರಿಹಾರ, ಚೆಕ್ ಗಳ ಮೂಲಕ ಹಿಂತಿರುಗಿಸಿದ ಮಹಾರಾಷ್ಟ್ರ ರೈತರು!

ಚಿತ್ತಾಪುರದಲ್ಲಿ ಪಥ ಸಂಚಲನ: ಮತ್ತೊಂದು ಶಾಂತಿ ಸಭೆ ನಡೆಸುವಂತೆ ಹೈಕೋರ್ಟ್ ಸೂಚನೆ; RSSಗೆ ಹಿನ್ನಡೆ

ಟನಲ್ ರಸ್ತೆ ಬೇಡ ಎನ್ನಲು ಈ ತೇಜಸ್ವಿ ಸೂರ್ಯ ಯಾರು?, ಗೌರವ ಕೊಟ್ಟು ಕರೆದು ಮಾತಾಡಿದರೆ ಬಾಯಿಗೆ ಬಂದಂತೆ ವದರುತ್ತಿದ್ದಾನೆ: DK Shivakumar; Video

SCROLL FOR NEXT