ಸಾಂದರ್ಭಿಕ ಚಿತ್ರ 
ಪ್ರವಾಸ-ವಾಹನ

ಇನ್ಮುಂದೆ ಬೈಕ್ ಗಳ ಹೆಡ್ ಲ್ಯಾಂಪ್ ಆಫ್ ಆಗುವುದೇ ಇಲ್ಲ!

ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದ್ದು, 2017 ಏಪ್ರಿಲ್ ನಿಂದ ಆ್ಯಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್ ವ್ಯವಸ್ಥೆ ಜಾರಿ ಮಾಡಲು ಹೊರಟಿದೆ.

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಣಯ ಕೈಗೊಂಡಿದ್ದು, 2017 ಏಪ್ರಿಲ್ ನಿಂದ ಆ್ಯಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್ ವ್ಯವಸ್ಥೆ ಜಾರಿ ಮಾಡಲು ಹೊರಟಿದೆ.

ಹೌದು..ಇದೇ ಏಪ್ರಿಲ್ ನಿಂದ ಜಾರಿಗೆ ಬರುವಂತೆ ಕೇಂದ್ರದ ಸಾರಿಗೆ ಸಚಿವಾಲಯ ಆ್ಯಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಈ ನೂತನ ಯೋಜನೆ ಅನ್ವಯ ಏಪ್ರಿಲ್ ನಿಂದ ಈಚೆಗೆ ಮಾರುಕಟ್ಟೆಗೆ  ಬರುವ ಹೊಸ ಬೈಕುಗಳಲ್ಲಿ ಸ್ವಯಂಚಾಲಿತ ಹೆಡ್ ಲೈಟ್ ಆನ್ ವ್ಯವಸ್ಥೆ ಇರಲಿದೆ. ಅಂದರೆ ಹಗಲಾಗಲೀ ಅಥವಾ ರಾತ್ರಿಯಾಗಲೀ ಬೈಕ್ ಗಳ ಹೆಡ್ ಲೈಟ್ ಗಳು ಸದಾ ಆನ್ ಆಗಿರುತ್ತವೆ.

ಏನಿದು ಯೋಜನೆ, ಇದರಿಂದ ಹೇಗೆ ಪ್ರಯೋಜನ?
ಕೇಂದ್ರ ಸರ್ಕಾರದ ನೂತನ ಯೋಜನೆ ಅನ್ವಯ ಏಪ್ರಿಲ್ ನಿಂದ ಮಾರುಕಟ್ಟೆಗೆ ಬರುವ ಪ್ರತೀ ಬೈಕುಗಳಿಗೂ ಸ್ವಯಂಚಾಲಿತ ಹೆಡ್ ಲೈಟ್ ಆನ್ ವ್ಯವಸ್ಥೆ ಅಳವಡಿಸುವಂತೆ ಬೈಕ್ ತಯಾರಿಕಾ ಸಂಸ್ಥೆಗಳಿಗೆ ಸೂಚಿಸಲಾಗಿದೆ.  ಅದರಂತೆ ಏಪ್ರಿಲ್ ನಿಂದ ಈಚೆಗೆ ಗ್ರಾಹಕ ಖರೀದಿಸುವ ಪ್ರತೀ ಬೈಕ್ ಗಳ ಹೆಡ್ ಲೈಟ್ ಗಳು ಎಂಜಿನ್ ಆನ್ ಆಗುತ್ತಿದ್ದಂತೆಯೇ ಅವು ಕೂಡ ಆನ್ ಆಗುತ್ತವೆ. ಬೈಕ್ ಸವಾರ ಅದನ್ನು ಆಫ್ ಮಾಡಲು ಯತ್ನಿಸಿದರೂ ಅವು  ಸ್ಥಗಿತಗೊಳ್ಳುವುದಿಲ್ಲ.

ಏಕೆ ಈ ನಿರ್ಧಾರ?
2015ರ ಕರ್ನಾಟಕದಲ್ಲಿನ ಅಪಘಾತಗಳ ಕುರಿತ ದತ್ತಾಂಶಗಳ ವರದಿಯನ್ವಯ, 2015ರಲ್ಲಿ ಕರ್ನಾಟಕದಲ್ಲಿ ಒಟ್ಟು 44,011 ಅಪಘಾತಗಳು ಸಂಭವಿಸಿದ್ದು, ಈ ಪೈಕಿ ಶೇ.30ರಷ್ಟು ಅಂದರೆ 13,155 ಅಪಘಾತಗಳಲ್ಲಿ ಬೈಕ್  ಅಪಘಾತಗಳು ಸೇರಿವೆ. ಈ ಪೈಕಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ 1.4 ಲಕ್ಷ ಮಂದಿಯ ಪೈಕಿ 32,524 ಮಂದಿ ದ್ವಿಚಕ್ರ ವಾಹನ ಅಪಘಾತದಲ್ಲಿ ಮೃತಪಟ್ಟವರಾಗಿದ್ದಾರೆ. ಬೈಕ್ ಗಳಲ್ಲಿ ಸ್ವಯಂ ಚಾಲಿತ ಹೆಡ್ ಲೈಟ್ ಆನ್ ವ್ಯವಸ್ಥೆ  ಅಳವಡಿಸುವುದರಿಂದ ಎದುರಿಗೆ ಬರುವ ವಾಹನ ಅಥವಾ ವ್ಯಕ್ತಿಗಳ ಗಮನವನ್ನು ಈ ಹೆಡ್ ಲೈಟ್ ಗಳು ಸೆಳೆದು ಎದುರಿಗೆ ಬರುವ ವಾಹನ ಅಥವಾ ವ್ಯಕ್ತಿ ಜಾಗರೂಕನಾಗುವಂತೆ ಮಾಡುತ್ತದೆ. ಈಗಾಗಲೇ ಈ ವ್ಯವಸ್ಥೆ ಕಾರಿನಲ್ಲಿ  ಅಳವಡಿಸಿ ಪರೀಕ್ಷಾರ್ಥ ಪ್ರಯೋಗ ಮಾಡಲಾಗಿದ್ದು, ಅದು ಯಶಸ್ಸು ಕೂಡ ಆಗಿದೆ. ಇದೇ ಕಾರಣಕ್ಕೆ ಬೈಕ್ ಗಳಲ್ಲಿ ಇದೇ ವ್ಯ.ವಸ್ಥೆ ಅಳವಡಿಸುವ ಮೂಲಕ ರಸ್ತೆ ಅಪಘಾತಗಳ ಪ್ರಮಾಣ ತಗ್ಗಿಸುವುದು ಕೇಂದ್ರ ಸರ್ಕಾರದ  ಚಿಂತನೆಯಾಗಿದೆ.

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಕೂಡ ಈ ಯೋಜನೆ ಜಾರಿಗೆ ಒಲವು ತೋರಿದ್ದು, ಈ ಹಿಂದೆ ಜಸ್ಟಿಸ್ ರಾಧಾಕೃಷ್ಣನ್ ಸಮಿತಿ ಕೂಡ ಹೆಡ್ ಲೈಟ್ ಆನ್ ವ್ಯವಸ್ಥೆ ಅಪಘಾತ ನಿಯಂತ್ರಿಸುವ ವ್ಯವಸ್ಥೆಗಳಲ್ಲಿ ಒಂದಾಗಿದೆ  ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಏಪ್ರಿಲ್ ನಿಂದ ಈ ಯೋಜನೆ ಜಾರಿಗೆ ತರಲು ನಿರ್ಧರಿಸಿದ್ದು, 2017ರ ಏಪ್ರಿಲ್ ನಿಂದ ಈ ಯೋಜನೆ ಜಾರಿಯಾಗುವ ಸಾಧ್ಯತೆ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT