ಅಶೋಕ ಸಿದ್ದಾಪುರ, ಬ್ರಹ್ಮಗಿರಿ 
ಪ್ರವಾಸ-ವಾಹನ

ಬ್ರಹ್ಮಗಿರಿಯಲ್ಲಿನ ಅಶೋಕ ಸಿದ್ದಾಪುರ; ಅಶೋಕನ ಶಾಸನಗಳ ಕೆತ್ತನೆ!

ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿನಲ್ಲಿರುವ ಅಶೋಕ ಸಿದ್ದಾಪುರ ಮಹತ್ವದ ಪುರಾತತ್ತ್ವ ಶಾಸ್ತ್ರದ ಸ್ಥಳವಾಗಿದ್ದು, ಇಲ್ಲಿ ಅಶೋಕ ಚಕ್ರವರ್ತಿಗೆ ಸೇರಿದ ಶಾಸನಗಳನ್ನು ಕಾಣಬಹುದು.

ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿನಲ್ಲಿರುವ ಅಶೋಕ ಸಿದ್ದಾಪುರ ಮಹತ್ವದ ಪುರಾತತ್ತ್ವ ಶಾಸ್ತ್ರದ ಸ್ಥಳವಾಗಿದ್ದು, ಇಲ್ಲಿ ಅಶೋಕ ಚಕ್ರವರ್ತಿಗೆ ಸೇರಿದ ಶಾಸನಗಳನ್ನು ಕಾಣಬಹುದು.

ಅಶೋಕನ ಶಾಸನವನ್ನು ಕಲ್ಲು ಬಂಡೆಗಳ ಮೇಲೆ ಕೆತ್ತಲಾಗಿದೆ. ಇದು 22 ಸಾಲುಗಳನ್ನು ಒಳಗೊಂಡಿದೆ ಮತ್ತು ಬಂಡೆಯ ಸಮತಲ ಮೇಲ್ಮೈಯಲ್ಲಿ ಕೆತ್ತಲಾಗಿದೆ. ಈ ಶಾಸನವು ಸುವರ್ಣಗಿರಿ ಎಂಬ ಸ್ಥಳದ ಹೆಸರನ್ನು ಉಲ್ಲೇಖಿಸುತ್ತದೆ.

ಅಶೋಕ ಮಹಾರಾಜನ ಆಡಳಿತ ಕಾಲದಲ್ಲಿ ಈ ಸ್ಥಳದಲ್ಲಿ 'ಇಸಿಲಾ' ಎಂಬ ಪಟ್ಟಣ ಇತ್ತು ಎಂಬುದಾಗಿ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಇದು ಇಸಿಲಾದಲ್ಲಿ ಬೀಡುಬಿಟ್ಟಿದ್ದ ಮಹಾಮಾತ್ರಸ್ ಎಂಬ ಅಧಿಕಾರಿಗಳಿಗೆ ದೇವನಾಮಪ್ರಿಯರು ನೀಡಿದ ಸಂದೇಶವನ್ನು ಹೊಂದಿದೆ. ಸಿದ್ದಾಪುರ ಶಾಸನದ ಪಠ್ಯವು ಬ್ರಹ್ಮಗಿರಿಗೆ ಹೋಲುತ್ತದೆ.

ಇಸಿಲಾ ಎಂಬ ಸ್ಥಳವನ್ನು ಸಾಮಾನ್ಯವಾಗಿ ಬ್ರಹ್ಮಗಿರಿಯೊಂದಿಗೆ ಗುರುತಿಸಲಾಗುತ್ತದೆ. ಧರ್ಮನಿಷ್ಠ ಕರ್ತವ್ಯಗಳನ್ನು ಪ್ರಚೋದಿಸುವಂತೆ ಎಲ್ಲಾ ವರ್ಗದ ಜನರನ್ನು ಒತ್ತಾಯಿಸುವುದು ಶಾಸನದ ಉದ್ದೇಶವಾಗಿದೆ.

ಬೆಂಗಳೂರು-ಬಳ್ಳಾರಿ ರಾಜ್ಯಹೆದ್ದಾರಿಯಲ್ಲಿ ಸಿಗುವುದೇ ಅಶೋಕ ಸಿದ್ದಾಪುರ ಕ್ರಾಸ್. ಹೆದ್ದಾರಿಯಿಂದ 8 ಕಿ.ಮೀ. ದೂರ ಸಾಗಿದರೆ ಅಶೋಕ ಶಾಸನ ಇರುವ ಕಲ್ಲಿನ ಕಟ್ಟಡವನ್ನು ಕಾಣಬಹುದು.

ಬನ್ನಿ, ಅಶೋಕನ ಶಾಸನಗಳ ಕೆತ್ತನೆಯನ್ನು ಈ ಮುಂದಿನ ವಿಡಿಯೋದಲ್ಲಿ ನೋಡಿ ಬರೋಣ.

ಮಾಹಿತಿ-ವಿಡಿಯೋ: ಪಿ. ಸುರೇಶ್ ಕುಮಾರ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT