ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನವಾದ ಬಳಿಕ ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಷಡ್ಯಂತ್ರ ನಡೆಯಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬೇಸರ ವ್ಯಕ್ತಪಡಿಸಿದರು.
ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆ ಉದ್ಘಾಟಿಸಿ ವಿಜಯೇಂದ್ರ ಭಾಷಣ ಮಾಡಿದರು.
ಯೋಗ್ಯ ವ್ಯಕ್ತಿಗಳು ವಿಧಾನಪರಿಷತ್ ಗೆ ಬರಬೇಕು. ಆದ್ರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಚಪಲ ತೀರಿಸಿಕೊಳ್ಳಲು ವಿಧಾನಪರಿಷತ್ ಗೆ ಬರ್ತಿದ್ದಾರೆ. ರಾಜಕೀಯ ಚಟಕ್ಕಾಗಿ ಬರ್ತಿದ್ದಾರೆ.
ಹಣದ ಅಹಂನಿಂದ, ಚುನಾವಣೆ ಗೆಲ್ತೀವಿ ಅನ್ನೋ ಭ್ರಮೆಯಿಂದ ಬರ್ತಿದ್ದಾರೆ. ವಿಧಾನ ಸೌಧ ಪ್ರಜಾಪ್ರಭುತ್ವದ ದೇಗುಲ, ಅಲ್ಲಿಗೆ ಯೋಗ್ಯ ವ್ಯಕ್ತಿಗಳು ಬರಬೇಕು ಎಂದು ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.