ವಿಡಿಯೋ

Watch | ಮಲ್ಲಿಕಾರ್ಜುನ್, ಬಿ.ಪಿ ಹರೀಶ್ 'ಕೆಟ್ಟ ಭಾಷೆ' ಬಳಕೆ; ಇದುನ್ನೇ ನಾವು ಕಲೀಬೇಕಾ?

ದಾವಣಗೆರೆ ಜಿಲ್ಲೆಯ ರಾಜಕೀಯ ನಾಯಕರ ನಡುವೆ ನಡೆದ ವೈಯಕ್ತಿಕ ವಾಗ್ದಾಳಿ ಹಾಗೂ ಕೆಟ್ಟ ಪದಗಳ ಬಳಕೆಯಿಂದ ಮನಸ್ಸಿಗೆ ತೀವ್ರ ನೋವಾಗಿದೆ ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಬೇಸರ ವ್ಯಕ್ತಪಡಿಸಿದರು.

ಹರಿಹರ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅಸಂಸದೀಯ ಪದಗಳನ್ನು ಬಳಕೆ ಮಾಡಿ ಟೀಕಿಸಿದ್ದಾರೆ ಎಂಬ ಹೇಳಿಕೆಗೆ ಅವರು ಕಳವಳ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಹಿರಿಯ ರಾಜಕೀಯ ನಾಯಕರು ಪರಸ್ಪರ ವೈಯಕ್ತಿಕವಾಗಿ ನಿಂದಿಸುವ ರೀತಿಯಲ್ಲಿ ಮಾತನಾಡುತ್ತಿರುವುದು ವಿಷಾದನೀಯ.

ದಾವಣಗೆರೆ ಜಿಲ್ಲೆಯಲ್ಲಿ ಈ ಹಿಂದೆ ಇಂತಹ ಕೆಟ್ಟ ರಾಜಕೀಯ ಸಂಸ್ಕೃತಿ ಇರಲಿಲ್ಲ. ಇದೀಗ ರಾಜಕೀಯ ವಾತಾವರಣ ಕಲುಷಿತಗೊಳ್ಳುತ್ತಿರುವುದು ನೋವಿನ ಸಂಗತಿ.

ರಾಜಕೀಯ ನಾಯಕರ ಮಾತುಗಳನ್ನು ಜನರು, ಅದರಲ್ಲೂ ಯುವಜನತೆ ಗಮನಿಸುತ್ತಾರೆ. ಇಂತಹ ಭಾಷೆ ಮುಂದಿನ ಪೀಳಿಗೆಗೆ ಕೆಟ್ಟ ಸಂದೇಶ ನೀಡುತ್ತದೆ ಎಂದು ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.

37 ವರ್ಷ ನಿಷೇಧದ ಬಳಿಕ ಮತ್ತೆ ಕಾಲೇಜು, ವಿವಿಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ; ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

3,260 ನಕಲಿ ಪಕ್ಷಗಳ ಮೂಲಕ 10,000 ಕೋಟಿ ಕಪ್ಪುಹಣ ಅಕ್ರಮ ವರ್ಗಾವಣೆ; ಬಿಜೆಪಿಯ 'ಸಿ' ಟೀಮ್: ಕಾಂಗ್ರೆಸ್ ಆರೋಪ!

ಡಿಕೆಶಿ ಸರ್ಕಾರಕ್ಕೆ ನಾಳೆ 100 ದಿನದ ಸಂಭ್ರಮ: ಬಡವರಿಗೆ ಬಂಪರ್ ಗಿಫ್ಟ್! 15 ಲಕ್ಷ ಉಚಿತ ಸೈಟ್ ಹಂಚಿಕೆಗೆ ಸಂಪುಟ ಅಸ್ತು!

ಚೀನಾ ನಿರ್ಮಿಸಿದ್ದ ಟ್ಯಾಂಕರ್ ಬಾಂಗ್ಲಾದಲ್ಲಿ ಪರೀಕ್ಷೆ: ಸೇನಾ ವ್ಯಾಯಾಮದ ವೇಳೆ ಸ್ಫೋಟಗೊಂಡು ಇಬ್ಬರು ಸೈನಿಕರು ಸಾವು, Video

ವೇದಿಕೆ ಮೇಲೆ ಫಿಲಿಪೈನ್ಸ್ ನಾಯಕನಿಗೆ ಚೀನಾದ ಬೆದರಿಕೆ; ಸಭ್ಯತೆ, ಸರಿಯಾದ ನಡವಳಿಕೆ ಕಲಿಯಿರಿ- ಬೀಜಿಂಗ್ ಗೆ ದ್ವೀಪರಾಷ್ಟ್ರದ ತಪರಾಕಿ!