BRICS, SCO, G20, QUAD ಶೃಂಗಸಭೆಗಳಿಂದ ಭಾರತಕ್ಕೇನೂ ಲಾಭವಾಗಿಲ್ಲ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ನಾಯಕ ಎಂ ಚಿದಂಬರಂ ಹೇಳಿದ್ದಾರೆ.
ದೆಹಲಿಯಲ್ಲಿ ಸೆಪ್ಟೆಂಬರ್ 12 ಮತ್ತು 13ರಂದು ನಡೆಯಲಿರುವ ಮಹತ್ವದ BRICS ಶೃಂಗಸಭೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ.
ಇದರ ಬೆನ್ನಲ್ಲೇ, ಕಾಂಗ್ರೆಸ್ನ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಪಿ. ಚಿದಂಬರಂ ಅವರು BRICSನಿಂದ ಭಾರತಕ್ಕೆ ಸಿಕ್ಕಿರುವ ಸ್ಪಷ್ಟ ಪ್ರಯೋಜನಗಳೇನು? ಎಂದು ಪ್ರಶ್ನಿಸಿದ್ದಾರೆ.
ಕಳೆದ ಎರಡು-ಮೂರು BRICS ಶೃಂಗಸಭೆಗಳಿಂದ ಭಾರತಕ್ಕೆ ಯಾವುದೇ ಗಮನಾರ್ಹ ಅಥವಾ ಸ್ಪಷ್ಟ ಫಲಿತಾಂಶಗಳು ದೊರೆತಿರುವುದು ತಮ್ಮ ಗಮನಕ್ಕೆ ಬಂದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
BRICS ಮಾತ್ರವಲ್ಲದೆ ಶಾಂಘೈ ಸಹಕಾರ ಸಂಘಟನೆ (SCO), G20 ಮತ್ತು QUAD ಸೇರಿದಂತೆ ಭಾರತವು ಹಲವು ಬಹುಪಕ್ಷೀಯ ಸಂಘಟನೆಗಳ ಭಾಗವಾಗಿದೆ.
ಆದರೆ, ಇವುಗಳಿಂದ ದೇಶಕ್ಕೆ ಸಿಕ್ಕಿರುವ ಸ್ಪಷ್ಟ ಪ್ರಯೋಜನಗಳೇನು ಎಂಬುದು ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಚಿದಂಬರಂ ಅವರ ಹೇಳಿಕೆಗೆ ಬಿಜೆಪಿ ತೀವ್ರವಾಗಿ ಪ್ರತಿಕ್ರಿಯಿಸಿದೆ. ವಿಡಿಯೋ ಇಲ್ಲಿದೆ ನೋಡಿ.