ಮಹಿಳೆ-ಮನೆ-ಬದುಕು

ನಿಂಬೆ ನಂಬಿ

ನಿಂಬೆ ವರ್ಷ ಪೂರ್ತಿ ಸಿಗುವ ಹಣ್ಣು. ಹೆಚ್ಚಾಗಿ ಅಡುಗೆಯೊಂದಿಗೆ ಬಳಸುವ ಇದಕ್ಕೆ ಔಷಧೀಯವಾಗಿಯೂ...

ನಿಂಬೆ ವರ್ಷ ಪೂರ್ತಿ ಸಿಗುವ ಹಣ್ಣು. ಹೆಚ್ಚಾಗಿ ಅಡುಗೆಯೊಂದಿಗೆ ಬಳಸುವ ಇದಕ್ಕೆ ಔಷಧೀಯವಾಗಿಯೂ ಬಹುಬೇಡಿಕೆ ಇದೆ. ಪೂಜೆಗಳಲ್ಲೂ ಬಳಸುವ ಈ ಹಳದಿ ಹಣ್ಣಿಗೆ ಋಣಾತ್ಮಕ ಶಕ್ತಿಯನ್ನು ಹೊಡೆದೋಡಿಸುವ ಮಹಾನ್ ಶಕ್ತಿಯಿದೆ.

ಸಿಟ್ರಸ್ ಆವ್‌ರಾಂಟಿ ಪೋಲಿಯಾ ಎಂಬ ವೈಜ್ಞಾನಿಕ ಹೆಸರಿರುವ ಲಿಂಬೆ ರೊಟೇಸಿ ಎಂಬ ಸಸ್ಯ ವರ್ಗಕ್ಕೆ ಸೇರಿದೆ. ಜೇರುನಾರಂಗಿ, ಇಲಿಮಿಚ್ಛೆ ಎಂದೂ ಕರೆಯುವ ಇದರ ತವರೂರು ಪೂರ್ವ ಏಷ್ಯಾ ದ್ವೀಪಗಳು. ಹೆಚ್ಚಾಗಿ ಉತ್ತರ ಭಾರತದ ಕಾಡುಗಳಲ್ಲಿ ವಿಶೇಷವಾಗಿ ಗುರುತಿಸಿದ್ದರಿಂದ ಇದರ ತವರೂರು ಭಾರತವೇ ಆಗಿದೆ.

ವೈದ್ಯ ಕ್ಷೇತ್ರದಲ್ಲಿ ವಿಫುಲವಾಗಿ ಬಳಸುವ ಈ ನಿಂಬೆ ಹಣ್ಣಲ್ಲಿ 'ಸಿ' ಜೀವಸತ್ವ ಯಥೇಚ್ಛವಾಗಿದೆ. ದೈನಂದಿನ ಅಡುಗೆಯಲ್ಲಿ ಬಳಸುವುದರಿಂದ ಜೀರ್ಣಕ್ರಿಯೆಯನ್ನು ಹೆಚ್ಚಿಸುವುದರೊಂದಿಗೆ ಸ್ಕರ್ವಿ ಎಂಬ ಮೂಳೆ ರೋಗ ಬರದಂತೆ ತಡೆಬಲ್ಲದು. ಸೌಂದರ್ಯ ವರ್ಧಕವಾಗಿ ಬಳಸುವುದರಿಂದ ವಿಶೇಷವಾಗಿ ಸ್ತ್ರೀ ಪ್ರೀತಿಗೆ ಪಾತ್ರವಾಗಿದೆ.

ಒಣಗಿದ ನಿಂಬೆ ಸಿಪ್ಪೆಯನ್ನು ಪುಡಿಯೊಂದಿಗೆ ಅರಿಶಿನ ಬೆರೆಸಿ ಹಚ್ಚುವುದರಿಂದ ಮೊಡವೆ, ಇಸುಬು ಮೊದಲಾದ ಚರ್ಮ ರೋಗಗಳು ನಿವಾರಣೆಯಾಗುತ್ತವೆ. ಚರ್ಮದ ಕಾಂತಿಯೂ ಹೆಚ್ಚುತ್ತದೆ. ತಲೆ ಕೂದಲು ಉದುರುವುದು ಮತ್ತು ತಲೆ ಹೊಟ್ಟು ಸಮಸ್ಯೆ ಗಂತೂ ರಾಮಬಾಣ.

ಪಾನಕ ಮಾಡಿ ಕುಡಿದರೆ ಟೈಫಾಯಿಡ್, ನ್ಯೂಮೋನಿಯಾದಂಥ ಅನೇಕ ಅಪಾಯಕಾರಿ ಕಾಯಿಲೆಗಳು ಗುಣಮುಖಗೊಳ್ಳುವುದರೊಂದಿಗೆ ರೋಗಿಯಲ್ಲಿ ಚೇತರಿಕೆ ಕಂಡು ಬರುತ್ತದೆ. ಅಲ್ಲದೇ ಇದರ ರಸ ದೇಹದಲ್ಲಿ ಉತ್ಪತ್ತಿಯಾಗುವ ಸೂಕ್ಷ್ಮ ವಿಷಕ್ರಿಮಿಗಳನ್ನು ನಾಶ ಪಡಿಸುವುದಲ್ಲದೇ ಅನೇಕ ಚರ್ಮ ರೋಗಗಳಿಗೆ ಪರಿಣಾಮಕಾರಿ ಮದ್ದು.

-ಲತಾ ಶ್ರೀ ಅರೋಲಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT