ಮಹಿಳೆ-ಮನೆ-ಬದುಕು

ಶ್ವಾನ ಸೂರು

ನಾಯಿ ಯಾರಿಗೆ ಇಷ್ಟ ಇಲ್ಲ ಹೇಳಿ? ಈ ನಿಯತ್ತಿನ ಪ್ರಾಣಿಯನ್ನು ಕಂಡರೆ ಎಲ್ಲರಿಗೂ ಅಚ್ಚು- ಮೆಚ್ಚು!...

ಹಾಗಾಗಿಯೇ ಬಹುತೇಕರು ನಾಯಿಗಳನ್ನೂ ಮಕ್ಕಳಂತೆಯೇ ನೋಡಿಕೊಳ್ಳುತ್ತಾರೆ. ಹಾಗಂತ ಅವುಗಳನ್ನು ನಿಮ್ಮ ಬೆಡ್‍ರೂಂನಲ್ಲೇ ಮಲಗಿಸುವಂತಿಲ್ಲ. ಕಾರಣ ರೋಗದ ಭಯ. ಜೊತೆಗೆ ಸ್ವಚ್ಛತೆಯನ್ನು ಹಾಳು ಮಾಡುತ್ತದೆ ಎಂಬ ಭಯ. ಅದಕ್ಕಾಗಿ ಕೆಲವರು ಪ್ರತ್ಯೇಕ ಶ್ವಾನದ ಮನೆಯನ್ನೂ ಕಟ್ಟಲು ಬಯಸುತ್ತಾರೆ. ಇದು ಕೂಡ ತಮ್ಮ ಸ್ವಂತ ಮನೆಯಷ್ಟೇ ಸುಂದರವಾಗಿರಬೇಕೆಂಬುದು ಅವರ ಬಯಕೆ!

ಸಾಮಾನ್ಯವಾಗಿ ಶ್ವಾನದ ಮನೆ ಎಂದ ಕೂಡಲೇ ಬಹುತೇಕರಲ್ಲಿ `ದುಬಾರಿ' ಎನ್ನುವ ಭಾವನೆ ಇದೆ. ಆದರೆ, ಅದು ತೀರ ಖರ್ಚಿನ ಸಂಗತಿಯೇನಲ್ಲ. ನಮ್ಮಲ್ಲಿ ಶ್ವಾನಕ್ಕಾಗಿಯೇ ಪ್ರತ್ಯೇಕ ಮನೆ ಕಟ್ಟುವ ಸಂಪ್ರದಾಯ ಜಾಸ್ತಿ ಇಲ್ಲ. ಮಾರುಕಟ್ಟೆಯಲ್ಲೂ ಇಂಥ ಮನೆ ಸಿಗುವುದು ಅಪರೂಪ. ಅಲ್ಲೋ, ಇಲ್ಲೋ ಕಣ್ಣಿಗೆ ಬಿದ್ದರೆ ಕೆಲವರು ಕೊಂಡುಕೊಳ್ಳುವುದುಂಟು. ಆದರೆ, ಈ ರೆಡಿಮೇಡ್ ಮನೆಗಳ ಬೆಲೆ ಕೊಂಚ ಜಾಸ್ತಿನೇ.

ಶ್ವಾನದ ಮನೆಯನ್ನು ನಾವೇ ನಿರ್ಮಿಸಿಕೊಳ್ಳಬಹುದಾ?
ಹೌದು. ಶ್ವಾನಕ್ಕೊಂದು ಸ್ವಂತ ಸೂರನ್ನು ನಾವೇ ನಿರ್ಮಿಸಿಕೊಡಬಹುದು. ಶ್ವಾನದ ಮನೆಯನ್ನು ಹೊರಗಿನಿಂದಲೇ, ದುಬಾರಿ ಹಣ ಕೊಟ್ಟು ತರಬೇಕೆಂದೇನೂ ಇಲ್ಲ. ನಾವು ಬಯಸಿದಂತೆ, ನಮಗೆ ಬೇಕಾದ ಆಕಾರದಲ್ಲೂ ಶ್ವಾನದ ಮನೆಯನ್ನು ನಿರ್ಮಿಸಿಕೊಳ್ಳಬಹುದು. ಇದಕ್ಕೆ ತಗಲುವ ವೆಚ್ಚ ಕೂಡ ಕಡಿಮೆ. ಹಳೆಯ ಮರದ ತುಂಡುಗಳು, ಫ್ಲೈವುಡ್, ಒಂದಷ್ಟು ಮೊಳೆಗಳು ಇದ್ದರೆ ಸಾಕು.

ನಿಮಗೆ ಬೇಕಾದ ಆಕೃತಿಯ, ನಿಮಗೆ ಬೇಕಾದ ರೀತಿಯ ಶ್ವಾನದ ಮನೆಕಟ್ಟಬಹುದು. ಈ ಕುರಿತು http://www.wikihow.com/Make-a-Doghouse ಈ ವೆಬ್‍ಸೈಟ್ ನೋಡಿ.

ಮನೆ ಹೇಗಿರಬೇಕು?

  • ನೀವು ಮನೆ ಕಟ್ಟುವುದು ನಿಮ್ಮ ಅನುಕೂಲಕ್ಕೆ ತಕ್ಕಂತೆ ಇರುತ್ತೆ. ಅದೇ ರೀತಿ ಶ್ವಾನದ ಮನೆಗಳೂ ನಿಮ್ಮ ಪ್ರೀತಿಪಾತ್ರ ನಾಯಿಯ ಅನುಕೂಲಕ್ಕೆ, ಅವಶ್ಯಕತೆಗೆ ತಕ್ಕಂತಿರಬೇಕು.
  • ಆ ಮನೆಯಲ್ಲಿ ನಿಮ್ಮ ನಾಯಿಗೆ ಮೈ, ಕಾಲು ಚಾಚಿ ಮಲಗುವಷ್ಟು ಜಾಗವಿರಬೇಕು.
  • ನಿಮ್ಮ ನಾಯಿಗಿಂತ ಎತ್ತರವಾಗಿರಬೇಕು.
  • ಕೆಲವರು ಇಂಥ ಶ್ವಾನದ ಮನೆಗಳಿಗೆ ಬಾಗಿಲು ಮಾಡಿಸುವುದೂ ಉಂಟು. ಆದರೆ, ನಾಯಿಗಳು ಇತರೆ ಪ್ರಾಣಿಗಳಂಥಲ್ಲ. ಅವು ಸದಾ ಜನರ ನಡುವಿರಲು ಬಯುಸುತ್ತವೆ. ಹಾಗಾಗಿ ಆ ರೀತಿ ಬಾಗಿಲುಗಳನ್ನು ಮಮಾಡಿದಾಗ ಕನಿಷ್ಠ ಅವುಗಳಿಗೆ ತಲೆ ಹೊರಹಾಕುವಷ್ಟಾದರೂ ಜಾಗ ಇಟ್ಟಿರಬೇಕು.
  • ಗಾಳಿಯಾಡಲು ಕಿಟಕಿ ಇದ್ದರೆ ಚೆನ್ನ.
  • ಶ್ವಾನದ ಮನೆ ಅಂದವಾಗಿರಬೇಕೆಂದೇನೂ ಇಲ್ಲ. ಆದರೆ, ಅವು ಅಂದವಾಗಿದ್ದರೆ ನಿಮ್ಮ ಮನೆಗೂ ಒಂದು ಶೋಭೆ ಎನ್ನುವುದು ನೆನಪಿರಲಿ.
ಶುಚಿತ್ವ ಹೇಗೆ?

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT