ಸಾಂದರ್ಭಿಕ ಚಿತ್ರ 
ಮಹಿಳೆ-ಮನೆ-ಬದುಕು

ಆನ್‌ಲೈನ್‌ನಲ್ಲಿ ಮಹಿಳೆಯರಿಗೆ ದೌರ್ಜನ್ಯವೆಸಗಿದರೆ ದೂರು ದಾಖಲಿಸಲು ಪೋರ್ಟಲ್ ವ್ಯವಸ್ಥೆ

ಸಾಮಾಜಿಕ ತಾಣಗಳ ಮೂಲಕ ಅಥವಾ ಇನ್ಯಾವುದೇ ಆನ್‌ಲೈನ್ ಮಾಧ್ಯಮಗಳ ಮೂಲಕ ಮಹಿಳೆಯರಿಗೆ ಕಿರುಕುಳ ನೀಡಿದರೆ, ಅಪಹಾಸ್ಯ ಮಾಡಿದರೆ...

ನವದೆಹಲಿ: ಸಾಮಾಜಿಕ ತಾಣಗಳ ಮೂಲಕ ಅಥವಾ ಇನ್ಯಾವುದೇ ಆನ್‌ಲೈನ್ ಮಾಧ್ಯಮಗಳ ಮೂಲಕ ಮಹಿಳೆಯರಿಗೆ ಕಿರುಕುಳ ನೀಡಿದರೆ, ಅಪಹಾಸ್ಯ ಮಾಡಿದರೆ ಅಥವಾ ಇನ್ಯಾವುದೇ ರೀತಿಯ ದೌರ್ಜನ್ಯವೆಸಗಿದರೆ ಈ ಬಗ್ಗೆ ಮಹಿಳೆಯರು ದೂರು ದಾಖಲಿಸಲು ಪೋರ್ಟಲ್‌ವೊಂದನ್ನು ಆರಂಭಿಸಲು ಕೇಂದ್ರ ಸರ್ಕಾರ ಯೋಜನೆ ಸಿದ್ಧಪಡಿಸಿದೆ. 
ಮಹಿಳೆ ಮತ್ತು ಮಕ್ಕಳ ಮೇಲಿನ ಸೈಬರ್ ಅಪರಾಧ ನಿಯಂತ್ರಣ (ಸಿಸಿಪಿಡಬ್ಲ್ಯುಸಿ) ಎಂಬ ಯೋಜನೆಯಡಿಯಲ್ಲಿ ಇಂಥದೊಂದು ಪೋರ್ಟಲ್ ಆರಂಭಿಸಲು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಮುಂದಾಗಿದೆ. ಈ ಎಲ್ಲ ಯೋಜನೆಗಳು ನಿರ್ಭಯಾ ನಿಧಿಯಡಿಯಲ್ಲಿ ಕಾರ್ಯವೆಸಗಲಿದೆ.
ಈ ಪೋರ್ಟಲ್‌ನಲ್ಲಿ ಆನ್‌ಲೈನ್‌ನಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆ ದೂರು ದಾಖಲಿಸಬಹುದಾಗಿದೆ.  ಗೃಹಸಚಿವಾಲಯದ ಸೈಬರ್ ಸೆಲ್ ಈ ಪೋರ್ಟಲ್ ಮೇಲೆ ನಿಗಾ ಇರಿಸಿ, ದೂರುಗಳನ್ನು ಸ್ವೀಕರಿಸಿ, ಕ್ರಮ ಕೈಗೊಳ್ಳುತ್ತದೆ ಎಂದು ಮಹಿಳಂ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವಾಲಯ ಹೇಳಿದೆ.
ಸಿಸಿಪಿಡಬ್ಲ್ಯುಸಿ ಯೋಜನೆಗೆ ರು. 244.32 ಕೋಟಿ ವೆಚ್ಚ ಅವಶ್ಯಕವಾಗಿದ್ದು, ಇದನ್ನು ನಿರ್ಭಯಾ ಫಂಡ್‌ನಿಂದ ಬಳಸಲಾಗುತ್ತದೆ. 
ಮಹಿಳೆಯರನ್ನು ಆನ್‌ಲೈನ್‌ನಲ್ಲಿ ಟ್ರೋಲ್ (ಅಪಹಾಸ್ಯ) ಮಾಡುವುದು ಕೂಡಾ ಅಪರಾಧ ಎಂದು ಪರಿಗಣಿಲ್ಪಡುವುದು ಎಂದು ಮಂಗಳವಾರ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಮನೇಕಾ ಗಾಂಧಿ ಹೇಳಿದ್ದರು. ಅದೇ ವೇಳೆ ಮ್ಯಾಟ್ರಿಮೋನಿಯಲ್ ಸೈಟ್ (ವಧುವರರ ಅನ್ವೇಷಣಾ ವೆಬ್‌ಸೈಟ್ )ಗಳಲ್ಲಿ ನಡೆಯುವ ಆನ್‌ಲೈನ್ ದೌರ್ಜನ್ಯಗಳ ಬಗ್ಗೆಯೂ ಕ್ರಮ ತೆಗೆದುಕೊಳ್ಳಲು ಸಚಿವಾಲಯ ಮುಂದಾಗಿದೆ ಎಂದು ಮನೇಕಾ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT