ಗಂಗೆ 
ನನ್ನ ಸ್ಫೂರ್ತಿ

ಗಂಗಾ ಮಾತೆಯೇ ಪ್ರೇರಣೆ

ನಾನು ಹೇಳಹೊರಟಿರುವದು ಏಕ ವ್ಯಕ್ತಿಗೆ ಪ್ರೇರಣೆಯಾದ ಮಹಿಳೆಯ ಕುರಿತಲ್ಲ, ಭರತವರ್ಷಕ್ಕೆ ಪ್ರೇರಣೆಯಾದ ಪವಿತ್ರ ಪ್ರವಾಹಿನಿಯದ...

ನಾನು ಹೇಳಹೊರಟಿರುವದು ಏಕ ವ್ಯಕ್ತಿಗೆ ಪ್ರೇರಣೆಯಾದ ಮಹಿಳೆಯ ಕುರಿತಲ್ಲ, ಭರತವರ್ಷಕ್ಕೆ ಪ್ರೇರಣೆಯಾದ ಪವಿತ್ರ ಪ್ರವಾಹಿನಿಯದ ನಾರಿಯ ಕುರಿತು.
ಭರತಖಂಡದ ಸಮೃದ್ಧಿಯ ಪ್ರತೀಕ, ಭರತಖಂಡದ ಸಂಸ್ಕೃತಿ ಪ್ರತೀಕ ಈ ಗಂಗೆ. ಈ ಪುಣ್ಯವಾಹಿನಿ ಅದೆಷ್ಟು ಜನರ ಕಣ್ಣೀರನ್ನು ಕಂಡು ತಾನು ಮರಗಿದ್ದಾಳೋ. ಗಂಗೆಯ ನೀರಿನ ಜೊತೆ ಅದೆಷ್ಟು ರಕ್ತದ ಹೊಳೆ ಸೇರಿ ಹರಿದಿದ್ದವೋ.
ಗಂಗೆಯ ಕಣ ಕಣದಲ್ಲೂ ವಿಷವನ್ನು ಬೆರೆಸಿದರೂ ಇಂದಿಗೂ ಪರಮ ಔಷದೀಯ ತೋಯವಾಗಿ ಹರಿಯುತ್ತಿದ್ದಾಳೆ ಗಂಗಾ ಮಾತೆ. ಋಷಿಯ ತೊಡೆಯಿಂದ ಜನಿಸಿದ ಪುಣ್ಯವಾಹಿನಿ ಅದೆಷ್ಟು ವಿಭಿನ್ನ ಪಂಥೀಯ ಸಂನ್ಯಾಸಿಗಳ ವೈರಾಗ್ಯವನ್ನು ಕಂಡಳೋ.
ಬದುಕು ಎನ್ನುವುದಕ್ಕೆ ನದಿ ಎಂಬ ಅರ್ಥವೂ ಇದೆ. ಹುಟ್ಟುವಾಗ ಸಣ್ಣ ಜಲಧಾರೆಗಿ ಹುಟ್ಟಿ ಬೆಟ್ಟ-ಕಣಿವೆಗಳನ್ನು, ಕಾಡು-ಬಯಲುಗಳನ್ನು ದಾಟಿ ಸಾಗರವನ್ನು ಸೇರುವುದೇ ಜೀವನ. ನಿತ್ಯ ನಿರಂತರ ಬದುಕಿನ ಮಾರ್ಗದರ್ಶಕಳು ಈ ಗಂಗೆ ತಾನೆ..?
ಗಂಗಾ ತಟಾಕದಲ್ಲಿ ಪುರಾಣ ಮತ್ತು ಇತಹಾಸದ ಕಾಲದಿಂದ ಇಂದಿನವರೆಗೆ ಅನೇಕ ಸಂಸ್ಕೃತಿಗಳು ಆವಿಶ್ಕಾರ ಮತ್ತು ಅವನತಿಯ ಪುನರಾವರ್ತತನೆಗೊಂಡವು.
ಝುಳುಝುಳನೆ ಕಲರವದಿಂದ ಹರಿವ ಗಂಗೆಯ ಮಡಿಲಲ್ಲಿ ಯಾವುದೋ ಅರೆಬೆಂದ ಶವ ತೇಲಿಬರುತ್ತದೆ, ಮತ್ತೆ ಯಾವುದೋ ಘಾಟ್ಗಳಲ್ಲಿ ನಿರಂತರ ಚಿತೆಯಿಂದ ತೆಗೆದ ಬೂದಿಯನ್ನು ಚೆಲ್ಲುತ್ತಾರೆ, ಗಂಗೆ ಮಾತ್ರ ಎಲ್ಲ ನೋವನ್ನು ತನ್ನೊಳಗೆ ಸಹಿಸಿಕೊಂಡು ಪ್ರವಾಹಿಸುತ್ತಾಳೆ.
ಅಸಂಖ್ಯ ಲಕ್ಷ ಕುಟುಂಬಗಳಿಗೆ ನೇರವಾಗಿ ಅಥವ ಪರೋಕ್ಷವಾಗಿ ಇಂದಿಗೂ ಅನ್ನವನ್ನು ನೀಡುತ್ತಿದ್ದಳೆ ಈ ಪುಣ್ಯವಾಹಿನಿ.
ಭರತವರ್ಷ ಪುಣ್ಯಭೂಮಿಯಲ್ಲಿ ಅನೇಕ ಪತಿವ್ರತಾ ಶಿರೋಮಣಿಗಳು, ಸಾದ್ವಿಯರು ಜನಿಸಿದ್ದರೆ. ಅಂತವರ ಸಾಲಿನಲ್ಲಿ ಪ್ರಪಂಚಕ್ಕೆ ಆದರ್ಶವಾದ ನಾರಿ ಈ ಗಂಗೆ. ಗಂಗೆ ಎಂದರೆ ಕೆವಲ ನದಿಯಲ್ಲ, ಸಾವಿರ ಸಾವಿರ ವರ್ಷಗಳಿಂದ ಹರಿದುಬಂದ ಈ ನೆಲದ ಜನರ ಭಾವ, ಗಂಗೆ ಎಂದರೆ ಕೇವಲ ನದಿಯಲ್ಲ, ಈ ಪುಣ್ಯಭೂಮಿಯಲ್ಲಿ ಹರಿಯುವ ಮಹಾತಾಯಿ ಆಕೆ.

- ಹರ್ಷ ವರ್ಧನ ಹೆಗ್ಡೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ನಿರ್ಣಯಕ್ಕೆ ಒಪ್ಪಬೇಕು, ವರಿಷ್ಠರು ಹೇಳಿದಾಗ ದೆಹಲಿಗೆ ಹೋಗುವೆ: ಖರ್ಗೆ ಭೇಟಿ ಬಳಿಕ ಸಿದ್ದರಾಮಯ್ಯ ಪ್ರತಿಕ್ರಿಯೆ; ಡಿಕೆಶಿ ಆಪ್ತರ ನಡೆಗೆ CM ತೀವ್ರ ಅಸಮಾಧಾನ

ರಾಜ್ಯದಲ್ಲಿ ಯಾರೂ ನಿರೀಕ್ಷಿಸದಂತಹ "ಸ್ಫೋಟಕ" ರಾಜಕೀಯ ಬೆಳವಣಿಗೆ: ಕುಮಾರಸ್ವಾಮಿ ಭವಿಷ್ಯ

'ಸಿಎಂ ಕುರ್ಚಿ' ಕದನದ ನಡುವೆ ವರದಿಗಾರರ ಪ್ರಶ್ನೆಗೆ ಕೆರಳಿದ ಡಿಕೆಶಿ! ಹೇಳಿದ್ದೇನು?

ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ: ನಾಯಕ ಯಾರು? ರಿಷಭ್ ಪಂತ್ ಅಥವಾ ಕೆಎಲ್ ರಾಹುಲ್! ನಾಳೆ ನಿರ್ಧಾರ

"ನಾವೂ ಕಲಿಯಬೇಕು": ಮಾಮ್ದಾನಿ-ಟ್ರಂಪ್ ಭೇಟಿಯ ಬಗ್ಗೆ ತರೂರ್ ಪೋಸ್ಟ್; ನೀವು ಹೇಳಿದ್ದು ಸರಿ ಆದರೆ ರಾಹುಲ್ ಗೆ ಇದೆಲ್ಲಾ ಅರ್ಥ ಆಗತ್ತಾ?: BJP

SCROLL FOR NEXT