ಚೈನಾದ ಬಂದರು ನಗರ ತೈಂಜಿನ್ ನಲ್ಲಿ ಗೋದಾಮು ಸ್ಫೋಟ 
ವಿದೇಶ

ಚೈನಾದಲ್ಲಿ ಗೋದಾಮು ಸ್ಫೋಟ; ಕನಿಷ್ಠ ೧೭ ಸಾವು

ಚೈನಾದ ಬಂದರು ನಗರ ತೈಂಜಿನ್ ನಲ್ಲಿನ ಒಂದು ಗೋದಾಮು ಸ್ಫೋಟಗೊಂಡು, ಬೆಂಕಿ ಬೆಂಕಿ ಚೆಂಡುಗಳನ್ನು ಆಕಾಶಕ್ಕೆ ಉಗುಳಿದ ಕಾರಣ ಕನಿಷ್ಠ ೧೭ ಜನ

ತೈಂಜಿನ್: ಚೈನಾದ ಬಂದರು ನಗರ ತೈಂಜಿನ್ ನಲ್ಲಿನ ಒಂದು ಗೋದಾಮು ಸ್ಫೋಟಗೊಂಡು, ಬೆಂಕಿ ಬೆಂಕಿ ಚೆಂಡುಗಳನ್ನು ಆಕಾಶಕ್ಕೆ ಉಗುಳಿದ ಕಾರಣ ಕನಿಷ್ಠ ೧೭ ಜನ ಮೃತಪಟ್ಟು ನೂರಾರು ಜನ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ೩೨ ಜನರ ಸ್ಥಿತಿ ಗಂಭೀರ ಎನ್ನಲಾಗಿದೆ.

ಸ್ಫೋಟಕ ಸಾಮಗ್ರಿಗಳ ದಾಸ್ತಾನು ಗೋದಾಮಿನಲ್ಲಿ ಉಂಟಾದ ಸ್ಫೋಟದಿಂದ ಅಕ್ಕಪಕ್ಕದ ಕಟ್ಟಡಗಳ ಕಿಟಕಿ ಬಾಗಿಲುಗಳು ಮುರಿದು ನಾಶವಾಗಿವೆ ಎಂದು ತಿಳಿದುಬಂದಿದೆ.

"ನಾನು ಭೂಕಂಪ ಎಂದು ತಿಳಿದೆ. ಆದುದರಿಂದ ಶು ಕೂಡ ಧರಿಸದೆ ಮನೆಯ ಹೊರಗೆ ಬಂದು ಕೆಳಗೆ ಓಡಿ ಹೋದೆ ಎಂದು" ಸ್ಫೋಟಗೊಂಡ ಸ್ಥಳದಿಂದ ಕಿಲೋಮೀಟರ್ ದೂರದಲ್ಲಿರುವ ವಸತಿ ಸಮುಚ್ಚಯದ ಮನೆಯ ನಿವಾಸಿ ಜ್ಯಾಂಗ್ ಸಿಯು ಹೇಳಿದ್ದಾರೆ.

ಈ ಸ್ಫೋಟದ ಕಾರಣ ತಿಳಿದುಬಂದಿಲ್ಲ, ಹಾಗೆಯೇ ಗಾಳಿಗೆ ಸೇರಿರಬಹುದಾದ ಮಾರಣಾಂತಿಕ ರಾಸಾಯನಿಕಗಳ ಸುಳಿವೂ ಇನ್ನು ದೊರೆತಿಲ್ಲ. ಈ ಸ್ಫೋಟದಿಂದ ಗೋದಾಮಿಗೆ ಹತ್ತಿರವಿದ್ದ ಹಲವಾರು ಅಪಾರ್ಟ್ಮೆಂಟ್ ಗಳು, ಕಟ್ಟಡಗಳು ಕುಸಿದಿವೆ ಮತ್ತು ಅಲ್ಲಿ ನಿಲ್ಲಿಸಲಾಗಿದ್ದ ೧೦೦೦ ರೆನಾಲ್ಟ್ ಕಾರುಗಳು ಸುಟ್ಟು ಬೂಧಿಯಾಗಿವೆ ಎಂದು ತಿಳಿದುಬಂದಿದೆ.

ತೈಂಜಿನ್ ಜನಸಂಖ್ಯೆ ಸುಮಾರು ೧೫ ದಶಲಕ್ಷ ಇದ್ದು, ಬೀಜಿಂಗ್ ನಿಂದ ೧೨೦ ಕಿಮೀ ದೂರದಲ್ಲಿದೆ. ಇದು ಪ್ರಮುಖ ಬಂದರು ನಗರವಾಗಿದ್ದು, ಬಹಳ ಆಧುನಿಕ ನಗರವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel