ನಾಪತ್ತೆಯಾದ ಮಲೇಷ್ಯಾ ಏರ್ ಲೈನ್ಸ್ ನ ಎಂಎಚ್ 370 ವಿಮಾನ (ಸಂಗ್ರಹ ಚಿತ್ರ) 
ವಿದೇಶ

ಮಾರಿಷಸ್ ಸಮೀಪ ದ್ಪೀಪದಲ್ಲಿ ಶಂಕಿತ ಎಂಹೆಚ್ 370 ವಿಮಾನದ ಅವಶೇಷ ಪತ್ತೆ

ನಿಗೂಢವಾಗಿ ನಾಪತ್ತೆಯಾಗಿದ್ದ ಮಲೇಷ್ಯಾ ವಿಮಾನಯಾನ ಸಂಸ್ಥೆಗೆ ಸೇರಿದ ಎಂಎಚ್ 370 ವಿಮಾನದ ಅವಶೇಷಗಳು ಮಾರಿಷಸ್ ನ ಸಮೀಪದ ದ್ವೀಪವೊಂದರಲ್ಲಿ ಪತ್ತೆಯಾಗಿದೆ ಎಂದು ಹೇಳಾಗುತ್ತಿದೆ.

ಪೋರ್ಟ್ ಲೂಯಿಸ್: ನಿಗೂಢವಾಗಿ ನಾಪತ್ತೆಯಾಗಿದ್ದ ಮಲೇಷ್ಯಾ ವಿಮಾನಯಾನ ಸಂಸ್ಥೆಗೆ ಸೇರಿದ ಎಂಎಚ್ 370 ವಿಮಾನದ ಅವಶೇಷಗಳು ಮಾರಿಷಸ್ ನ ಸಮೀಪದ ದ್ವೀಪವೊಂದರಲ್ಲಿ  ಪತ್ತೆಯಾಗಿದೆ ಎಂದು ಹೇಳಾಗುತ್ತಿದೆ.

ಮಾರಿಷಸ್ ನ ಸಮೀಪವಿರುವ ದ್ವೀಪಕ್ಕೆ ಮಾರ್ಚ್ 30ರಂದು ದಂಪತಿಗಳು ವಿಹಾರಕ್ಕೆಂದು ತೆರಳಿದ್ದಾಗ ವಿಮಾನದ ಅವಶೇಷಗಳನ್ನು ಹೋಲುವ ಕೆಲ ವಸ್ತುಗಳು ಪತ್ತೆಯಾಗಿದ್ದವು. ಈ  ವಿಚಾರವನ್ನು ದಂಪತಿಗಳು ಕೂಡಲೇ ತಾವು ತಂಗಿದ್ದ ಹೊಟೆಲ್ ಮ್ಯಾನೇಜರ್ ಗೆ ತಿಳಿಸಿದ್ದಾರೆ. ಮ್ಯಾನೇಜರ್ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದೌಡಾಯಿಸಿರುವ  ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇನ್ನು ದ್ವೀಪದಲ್ಲಿ ವಿಮಾನದ ಅವಶೇಷ ಪತ್ತೆಯಾದ ವಿಚಾರ ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು 2014ರಲ್ಲಿ ನಾಪತ್ತೆಯಾಗಿದ್ದ ಮಲೇಷ್ಯಾದ ಎಂಎಚ್ 370 ವಿಮಾನದ  ಅವಶೇಷಗಳೇ ಎಂದು ಕೆಲವರು ವಾದ ಮಾಡುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಎಂಎಚ್ 370 ವಿಮಾನದ ಭಾಗಗಳನ್ನು ಹೋಲುವಂತಹ ಅವಶೇಷಗಳು ಪತ್ತೆಯಾಗಿರುವುದು ಹಲವು  ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.

ಪ್ರಸ್ತುತ ಮಾರಿಷಸ್ ಸರ್ಕಾರ ಕೆಲ ಹಿರಿಯ ಅಧಿಕಾರಿಗಳನ್ನು ಘಟನಾ ಸ್ಥಳಕ್ಕೆ ರವಾನಿಸಿದ್ದು, ಅಧಿಕಾರಿಗಳಿಂದ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ಸುಮಾರು 12 ಸಿಬ್ಬಂದಿಗಳ ಸಹಿತ 227 ಮಂದಿಯನ್ನು ಹೊತ್ತಿದ್ದ ಎಂಎಚ್ 370 ಬೋಯಿಂಗ್ ವಿಮಾನ 2014 ಮಾರ್ಚ್ 8ರಂದು ಮಲೇಷ್ಯಾದಿಂದ ಚೀನಾ ರಾಜಧಾನಿ ಬೀಜಿಂಗ್ ಗೆ ಹಾರಿತ್ತು.  ಆದರೆ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ವಾಯುಗೋಪುರದ ಸಂಪರ್ಕ ಕಡಿದುಕೊಂಡಿತ್ತು. ಮಲೇಷ್ಯಾ ಮತ್ತು ಇತರೆ ದೇಶಗಳ ಅತ್ಯಾಧುನಿಕ ರಾಡಾರ್ ಗಳು ನೀಡಿದ  ಮಾಹಿತಿಯನ್ವಯ ವಿಮಾನ ವಿಯೆಟ್ನಾಂ ಬಳಿ ದಕ್ಷಿಣ ಚೀನಾದ ಸಮುದ್ರದಲ್ಲಿ ಪತನವಾಗಿರಬಹುದು ಎಂದು ಶಂಕಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಮಹಾತ್ಮ ಗಾಂಧಿ ಸಂದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ: ಸಬರಮತಿ ಆಶ್ರಮದಲ್ಲಿ ಜರ್ಮನ್ ಚಾನ್ಸೆಲರ್!

'sir' ವಿವಾದ ಕೊನೆಗೂ ಅಂತ್ಯ: 'ಸರ್.. ನೀವು ನನ್ನ ಹಿರಿಯರು': ಕಿಚ್ಚಾ ಸುದೀಪ್ ಗೆ ಧನ್ಯವಾದ ಹೇಳಿದ ನಟ ಯಶ್!

SCROLL FOR NEXT