ಡೊನಾಲ್ಡ್ ಟ್ರಂಪ್ 
ವಿದೇಶ

ಭಾರತದ ಕಾಲ್ ಸೆಂಟರ್ ಗಳ ಬಗ್ಗೆ ಟ್ರಂಪ್ ಅಣಕ

ಭಾರತೀಯ ಉಚ್ಚಾರಣಾ ಶೈಲಿಯನ್ನು ಅನುಕರಣೆ ಮಾಡಿ ಭಾರತದ ಕಾಲ್ ಸೆಂಟರ್ ಕಾಲ್ ಸೆಂಟರ್ ಪ್ರತಿನಿಧಿಯನ್ನು ಅಣಕಿಸಿದ್ದಾರೆ.

ವಾಷಿಂಗ್ ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್, ಭಾರತೀಯ ಉಚ್ಚಾರಣಾ ಶೈಲಿಯನ್ನು ಅನುಕರಣೆ ಮಾಡಿ ಭಾರತದ ಕಾಲ್ ಸೆಂಟರ್ ಪ್ರತಿನಿಧಿಯನ್ನು ಅಣಕಿಸಿದ್ದಾರೆ.
ತಮ್ಮ ಕ್ರೆಡಿಟ್ ಕಾರ್ಡ್ ನ ಗ್ರಾಹಕ ಸೇವೆ ಅಮೆರಿಕದ ಮೂಲದ್ದೋ ಅಥವಾ ಬೇರೆ ರಾಷ್ಟ್ರಗಳಲ್ಲಿದೆಯೋ ಎಂಬುದನ್ನು ಪತ್ತೆ ಮಾಡಲು ಗ್ರಾಹಕ ಸೇವೆ ವಿಭಾಗಕ್ಕೆ ಕರೆ ಮಾಡಿದ ಘಟನೆಯನ್ನು ವಿವರಿಸಿರುವ ಡೊನಾಲ್ಡ್ ಟ್ರಂಪ್, ಭಾರತೀಯ ಕಾಲ್ ಸೆಂಟರ್ ನ್ನು ಗೇಲಿ ಮಾಡುವುದರ ಜೊತೆಗೇ, ಭಾರತವನ್ನು ಅದ್ಭುತ ರಾಷ್ಟ್ರ ಎಂದು ಬಣ್ಣಿಸಿದ್ದಾರೆ.
ತಮ್ಮ ಕ್ರೆಡಿಟ್ ಕಾರ್ಡ್ ನ ಗ್ರಾಹಕ ಸೇವೆ ಭಾರತದಿಂದ ನಿರ್ವಹಿಸಲ್ಪಡುತ್ತಿದ್ದು, ಬೆಂಬಲಿಗರೆದುರು ಗ್ರಾಹಕ ಸೇವಾ ವಿಭಾಗದಿಂದ ಬಂದ ಪ್ರತಿಕ್ರಿಯೆಯನ್ನು ಭಾರತದ ಶೈಲಿಯಲ್ಲಿಯೇ ಅನುಕರಣೆ ಮಾಡಿರುವ ಟ್ರಂಪ್, "ಭಾರತ ಅದ್ಭುತ ರಾಷ್ಟ್ರ, ಅಲ್ಲಿರೊಉವ ನಾಯಕರ ಬಗ್ಗೆ ಅಸಮಾಧಾನ ಇಲ್ಲ. ಆದರೆ ಅಮೆರಿಕಾದಲ್ಲಿರುವ ನಾಯಕರು ಅವಿವೇಕಿಗಳಾಗಿರುವ ಬಗ್ಗೆ ಅಸಮಾಧಾನ ಇದೆ ಎಂದು ಹೇಳಿದ್ದಾರೆ.
ಚೀನಾ, ಜಪಾನ್, ವಿಯೆಟ್ನಾಮ್, ಭಾರತ ಈ ದೇಶಗಳ ಬಗ್ಗೆ ಅಥವಾ ಅಲ್ಲಿನ ನಾಯಕರ ಬಗ್ಗೆ ಅಸಮಾಧಾನ ಇಲ್ಲ ಎಂದು ಟ್ರಂಪ್ ತಿಳಿಸಿದ್ದಾರೆ. ಡೆಲಾವೇರ್ ನಲ್ಲಿ ಬೆಂಬಲಿಗರೊಂದಿಗೆ ಮಾತನಾಡುತ್ತಿರಬೇಕಾದರೆ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಯುಎಸ್ ನ ಡೆಲಾವೇರ್ ಅಮೆರಿಕಾದ ಬ್ಯಾಂಕಿಂಗ್ ಹಾಗೂ ಕ್ರೆಡಿಟ್ ಕಾರ್ಡ್ ಉದ್ಯಮದ ಕೇಂದ್ರವಾಗಿದೆ. " ಭಾರತ, ಚೀನಾ, ಜಪಾನ್ ನಂತಹ ದೇಶಗಳು ಇಲ್ಲಿನ ಉದ್ಯೋಗಗಳನ್ನು ಪಡೆದು ಹಣ ಸಂಪಾದಿಸುತ್ತಿದ್ದಾರೆ. ಮಕ್ಕಳಿಂದ ಸಿಹಿ ತಿನಿಸುಗಳನ್ನು ಕಿತ್ತುಕೊಳ್ಳುವಂತೆ ಅಮೆರಿಕಾದಿಂದ ಉದ್ಯೋಗಗಳನ್ನು ಕಿತ್ತುಕೊಳ್ಳಲು ಚೀನಾ, ಮೆಕ್ಸಿಕೋ, ಜಪಾನ್, ವಿಯೆಟ್ನಾಂ, ಭಾರತಕ್ಕೆ ಅನುವು ಮಾಡಿಕೊಡುವ ನೀತಿಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ನಮ್ಮ ಉದ್ಯೋಗಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಇದು ಉತ್ತಮ ಬೆಳವಣಿಗೆ ಅಲ್ಲ. ದೇಶದಲ್ಲಿರುವ ಕಾರ್ಖಾನೆಗನ್ನು ಮುಚ್ಚಲಾಗುತ್ತಿದೆ, ಇನ್ನೆಂದೂ ಇಂತಹ ಬೆಳವಣಿಗೆಗಳನ್ನು ಸಹಿಸುವುದಿಲ್ಲ ಎಂದು ಟ್ರಂಪ್ ಎಚ್ಚರಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT