ಸಾಂದರ್ಭಿಕ ಚಿತ್ರ 
ವಿದೇಶ

ದಿನವಿಡೀ ಎಸ್ ಯು ವಿನಲ್ಲಿ ಬಿಟ್ಟಿದ್ದರಿಂದ ಮಗು ಸಾವು; ಟೆಕ್ಸಾಸ್ ನಲ್ಲಿ ಬೇಜವಾಬ್ದಾರಿ ಘಟನೆ

ಸ್ಯಾನ್ ಅಂಟೋನಿಯಾ ಪ್ರದೇಶದ ವಾಲ್ಮಾರ್ಟ್ ನಿಲುಗಡೆ ಪ್ರದೇಶದಲ್ಲಿ ಎಸ್ ಯು ವಿ ಕಾರಿನಲ್ಲಿ ಇಡೀ ದಿನ ಏಳು ತಿಂಗಳ ಮಗುವೊಂದನ್ನು ಬಿಟ್ಟು ಹೋದ ಪರಿಣಾಮ ಮಗು ಮೃತಪಟ್ಟಿರುವ ಘಟನೆ ನಡೆದಿದೆ

ಹಿಲಾಟ್ಸ್:  ಸ್ಯಾನ್ ಅಂಟೋನಿಯಾ ಪ್ರದೇಶದ ವಾಲ್ಮಾರ್ಟ್ ನಿಲುಗಡೆ ಪ್ರದೇಶದಲ್ಲಿ ಎಸ್ ಯು ವಿ ಕಾರಿನಲ್ಲಿ ಇಡೀ ದಿನ ಏಳು ತಿಂಗಳ ಮಗುವೊಂದನ್ನು ಬಿಟ್ಟು ಹೋದ ಪರಿಣಾಮ ಮಗು ಮೃತಪಟ್ಟಿರುವ ಘಟನೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 
ಹಿಲಾಟ್ಸ್ ನ ವಾಲ್ಮಾರ್ಟ್ ಅಂಗಡಿಯಲ್ಲಿ ಕೆಲಸ ಮಾಡುವ ಮಗುವಿನ ತಂದೆ, ಶುಕ್ರವಾರ ಬೆಳಗ್ಗೆ 6:15 ಕ್ಕೆ ಕೆಲಸಕ್ಕೆ ತೆರಳುವ ಮುಂಚಿತವಾಗಿ ಮಗುವನ್ನು ಡೇ ಕೇರ್ ನಲ್ಲಿ ಬಿಡುವುದನ್ನು ಮರೆತಿರುವುದಾಗಿ ಅಧಿಕಾರಿಗಳಿಗೆ ತಿಳಿಸಿದ್ದಾನೆ ಎಂದು ಹಿಲಾಟ್ಸ್ ನ ಪೊಲೀಸ್ ಕ್ಯಾಪ್ಟನ್ ಆಂಟನಿ ಬರ್ಗೆಸ್ ಹೇಳಿದ್ದಾರೆ. ಕೆಲಸ ಮುಗಿಸಿ ತನ್ನ ಎಸ್ ಯು ವಿ ಗೆ ಹಿಂದಿರುಗಿದಾಗ ಮಗು ಮೃತಪಟ್ಟಿರುವುದನ್ನು ತಂದೆ ನೋಡಿದ್ದಾನೆ. ತಂದೆ ಎದೆ ನೋವು ಎಂದು ದೂರಿದ್ದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಬರ್ಗೆಸ್ ಹೇಳಿದ್ದಾರೆ. 
ಇನ್ನು ಯಾವುದೇ ಪ್ರಕರಣವನ್ನು ದಾಖಲಿಸಲಾಗಿಲ್ಲ ಮತ್ತು ತಂದೆ ಮಗುವಿನ ಗುರುತನ್ನು ಇನ್ನು ಪೊಲೀಸರು ಬಹಿರಂಗಗೊಳಿಸಿಲ್ಲ. ಈ ಪ್ರದೇಶಗಳಲ್ಲಿ ಮಧ್ಯಾಹ್ನದ ವೇಳೆ ಉಷ್ಣಾಂಶ 100 ಡಿಗ್ರಿ ಫ್ಯಾರನ್ ಹೀಟ್ ವರೆಗೂ ಏರುತ್ತದೆ. 
ಅಮೇರಿಕಾದಲ್ಲಿ ಬಿಸಿ ಕಾರುಗಳಲ್ಲಿ ಸಿಲುಕಿ ಮೃತ ಪಟ್ಟ ಮಕ್ಕಳ ಸಂಖ್ಯೆ ಇದರಿಂದ್ 27 ಕ್ಕೆ ಏರಿದ್ದು, ಟೆಕ್ಸಾಸ್ ನಲ್ಲಿಯೇ ಆರು ಮಕ್ಕಳು ಮೃತಪಟ್ಟಿದ್ದಾರೆ ಎಂದು ಕಿಡ್ಸ್ಅಂಡ್ ಕಾರ್ಸ್[ಡಾಟ್]ಆರ್ಗ್ ಸಂಸ್ಥೆಯ ಅಧ್ಯಕ್ಷ ಜಯಾನೆಟ್ ಫೆನ್ನೆಲ್ ಹೇಳಿದ್ದಾರೆ. 
ಮಕ್ಕಳನ್ನು ಕಾರುಗಳಲ್ಲಿ ಬಿಟ್ಟು ಹೋಗುವಾಗ ಪೋಷಕರು ಹಿಂದಿನ ಬಾಗಿಲನ್ನು ತೆಗೆದುಹೋಗುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಫೆನ್ನೆಲ್ ಹೇಳಿದ್ದಾರೆ. ಹಿಂದಿನ ಸೀಟಿನಲ್ಲಿ ಫೋನುಗಳನ್ನು ಬಿಟ್ಟರು ಸಹಕಾರಿಯಾಗುತ್ತದೆ ಎಂದು ಕೂಡ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸಿ: ಮುಖ್ಯಮಂತ್ರಿಗೆ ಪ್ರಿಯಾಂಕ್ ಖರ್ಗೆ ಪತ್ರ

SCROLL FOR NEXT