ನಯೀಲಾ ಖಾರ್ದಿ ಬಲೂಚ್ 
ವಿದೇಶ

ಪಾಕ್ ಸೇನೆ ನಮ್ಮನ್ನು ಹತ್ಯೆ ಮಾಡುವ, ಅತ್ಯಾಚಾರ ನಡೆಸುವ ಪರವಾನಗಿಯನ್ನು ಹೊಂದಿದೆ: ನಯೀಲಾ ಬಲೂಚ್

ಬಲೂಚಿಸ್ತಾನದ ಜನರನ್ನು ಹತ್ಯೆ ಮಾಡುವ ಹಾಗೂ ಮಹಿಳೆಯರ ಮೇಲೆ ಅತ್ಯಾಚಾರ ಮಾಡುವ ಎಲ್ಲಾ ಪರವಾನಗಿಯನ್ನು ಪಾಕಿಸ್ತಾನ ಹೊಂದಿದ್ದು, ಜನರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ವಿಶ್ವಸಂಸ್ಥೆ ಮಾತ್ರ ಮೌನವನ್ನುವಹಿಸಿದೆ...

ನವದೆಹಲಿ: ಬಲೂಚಿಸ್ತಾನದ ಜನರನ್ನು ಹತ್ಯೆ ಮಾಡುವ ಹಾಗೂ ಮಹಿಳೆಯರ ಮೇಲೆ ಅತ್ಯಾಚಾರ ಮಾಡುವ ಎಲ್ಲಾ ಪರವಾನಗಿಯನ್ನು ಪಾಕಿಸ್ತಾನ ಹೊಂದಿದ್ದು, ಜನರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ವಿಶ್ವಸಂಸ್ಥೆ ಮಾತ್ರ ಮೌನವನ್ನು ವಹಿಸಿದೆ ಎಂದು ಬಲೂಚಿಸ್ತಾನ ಹೋರಾಟಗಾರ್ತಿ ನಯೀಲಾ ಖಾರ್ದಿ ಬಲೂಚ್ ಅವರು ಹೇಳಿದ್ದಾರೆ.

ಪಾಕಿಸ್ತಾನ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ನಮ್ಮನ್ನು ಹತ್ಯೆ ಮಾಡುವ ಪರವಾನಗಿಯನ್ನು ಹೊಂದಿದೆ, ಅತ್ಯಾಚಾರ ನಡೆಸುವ ಪರವಾನಗಿಯನ್ನು ಹೊಂದಿದೆ, ದೌರ್ಜನ್ಯ ಎಸಗುವ ಪರವಾನಗಿಯನ್ನು ಹೊಂದಿದೆ ಹಾಗೂ ಜನರ ಅಂಗಾಂಗಗಳನ್ನು ತೆಗೆದುಕೊಂಡು ಹೋಗಿ ಅವುಗಳ ಮಾರಾಟವನ್ನು ಮಾಡುತ್ತಿದೆ. ಪಾಕಿಸ್ತಾನ ಸೇನೆ ಈದಿ ಫೌಂಡೇಷನ್ ಜೊತೆಗೆ ಕೈಜೋಡಿಸಿದ್ದು, ಬಲೂಚಿಸ್ತಾನ ಜನತೆಯನ್ನು ಅಪಹರಿಸಿ ಅವರ ದೇಹದ ಅಂಗಾಂಗಳನ್ನು ಮಾರಾಟ ಮಾಡುತ್ತಿದೆ. ಮಹಿಳೆಯನ್ನು ಅಪಹರಿಸಿ ಅವರ ಮೇಲೆ ಅತ್ಯಾಚಾರ ಮಾಡಲಾಗುತ್ತಿದೆ. ಬಲೂಚಿಸ್ತಾನ ಜನತೆಯ ಮೇಲೆ ಪಾಕಿಸ್ತಾನ ಸೇನೆ ಊಹಿಸಿಕೊಳ್ಳಲು ಅಸಾಧ್ಯವಾದಷ್ಟು ದೌರ್ಜನ್ಯವನ್ನು ಎಸಗುತ್ತಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನ ಚೀನಾ ರಾಷ್ಟ್ರದೊಂದಿಗೆ ಕೈಜೋಡಿಸಿ ಬಲೂಚಿಸ್ತಾನದಲ್ಲಿ ನರಮೇಧವನ್ನು ನಡೆಸುತ್ತಿದೆ. ವಿಶ್ವಸಂಸ್ಥೆಯಲ್ಲಿ ಮಾನವ ಹಕ್ಕುಗಳ ದಿನವನ್ನು ಘೋಷಣೆ ಮಾಡಲಾಗಿದೆ. ಆದರೆ, ಬಲೂಚಿಸ್ತಾನ ಜನರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಮೌನವನ್ನು ಮುಂದುವರೆಸುತ್ತಿದೆ. ಪ್ರಾಣಿಗಳಿಗಿರುವ ಹಕ್ಕಿಗಿಂತಲೂ ಬಲೂಚಿಸ್ತಾನ ಜನತೆಯ ಹಕ್ಕು ಹೀನಾಯವಾಗಿದೆ.

100ಕ್ಕೂ ಹೆಚ್ಚು ಸಾಮೂಹಿಕ ಸಾಮಾಧಿಗಳನ್ನು ಮಾಡಲಾಗಿದ್ದು, ಒಂದೊಂದು ಸಾಮಾಧಿಯಲ್ಲಿ 100 ಜನರನ್ನು ಇರಿಸಲಾಗಿದೆ. ಸಮಾಧಿ ಮಾಡುವಾಗ ಬಹುತೇಕ ಮಂದಿ ಬದುಕಿದ್ದರೂ, ಆದರೂ, ಅವರನ್ನು ಸಮಾಧಿ ಮಾಡಲಾಗಿದ್ದು ಎಂದು ವೈದ್ಯರು ಹೇಳಿದ್ದರು.

ಇಂದೂ ಬಲೂಚಿಸ್ತಾನದ ಪರಿಸ್ಥಿತಿಯನ್ನು ಹೃದಯವಿರುವ ಮನುಷ್ಯರು ಯಾರೇ ನೋಡಿದರೂ ಸುಮ್ಮನೆ ಇರುವುದಿಲ್ಲ. ಆದರೆ, ವಿಶ್ವಸಂಸ್ಥೆಯ ಮೌನವನ್ನು ನೋಡಿದರೆ ಆಶ್ಚರ್ಯವಾಗುತ್ತಿದೆ ಎಂದು ನಯೀಲಾ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT