ಕೆಎಫ್ ಸಿ ಚಿಕನ್ ನಲ್ಲಿ ಮೊಟ್ಟೆ, ಜೀವಂತ ಹುಳು ಪತ್ತೆ 
ವಿದೇಶ

ಕೆಎಫ್ ಸಿಯ ಮತ್ತೊಂದು ಎಡವಟ್ಟು: ಚಿಕನ್ ನಲ್ಲಿ ಜೀವಂತ ಹುಳಗಳು ಪತ್ತೆ

ಕೆ.ಎಫ್.ಸಿ, ಚಿಕನ್ ಚಿಕನ್ ಸರ್ವ್ ಮಾಡುವ ಬದಲು ಇಲಿ ಸರ್ವ್ ಮಾಡಿದ್ದ ಇತ್ತೀಚಿನ ಘಟನೆ ನೆನಪಿರಬೇಕಲ್ವ? ಕೆಎಫ್ ಸಿ ಇಂಥದ್ದೆ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.

ನ್ಯೂಜಿಲ್ಯಾಂಡ್: ಕೆಎಫ್ ಸಿ ಚಿಕನ್ ಸರ್ವ್ ಮಾಡುವ ಬದಲು ಇಲಿ ಸರ್ವ್ ಮಾಡಿದ್ದ ಇತ್ತೀಚಿನ ಘಟನೆ ನೆನಪಿರಬೇಕಲ್ವ? ಈ ಘಟನೆ ನಡೆದ ಕೆಲವೇ ತಿಂಗಳುಗಳಲ್ಲಿ ಕೆಎಫ್ ಸಿ ಇಂಥದ್ದೆ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.
ಅಂದು ವಾಷಿಂಗ್ಟನ್ ನಲ್ಲಿ ಕೆಎಫ್ ಸಿ ಚಿಕನ್ ಖರೀದಿಸಿದವರಿಗೆ ಚಿಕನ್ ಬದಲು ಇಲಿ ಸಿಕ್ಕಿದ್ದರೆ, ಇಂದು ನ್ಯೂಜಿಲ್ಯಾಂಡ್ ನ ಆಕ್ಲೆಂಡ್ ನಲ್ಲಿ ಕೆಎಫ್ ಸಿ ನಲ್ಲಿ ಪಾಪ್ಕಾರ್ನ್ ಚಿಕನ್ ಖರೀದಿಸಿದ ಸರಾಹ್- ಜಾನ್ ವಿಲಿಯಮ್ಸ್ ಗೆ ಚಿಕನ್ ನಲ್ಲಿ ಕೀಟಗಳ ಮೊಟ್ಟೆ ಸಿಕ್ಕಿದೆ. ಹುಳುಗಳು ಆಚೆ ಬರಲು ಸಿದ್ಧವಿದ್ದ ಮೊಟ್ಟೆಗಳನ್ನು ನೋಡಿದ ಕೂಡಲೇ ದಂಗಾದ ಸರಾಹ್- ಜಾನ್ ವಿಲಿಯಮ್ಸ್, ಕೆಎಫ್ ಸಿ ಅವಾಂತರವನ್ನು ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಸಮೇತ ಅಪ್ ಡೇಟ್ ಮಾಡಿದ್ದಾರೆ. 
ಕೆಎಫ್ ಸಿ ನಿರ್ಲಕ್ಷ್ಯದ ವಿರುದ್ಧ ಸರಾಹ್ ಜಾನ್ ವಿಲಿಯಮ್ಸ್ ದೂರು ದಾಖಲಿಸಿದ್ದು, ಆಹಾರದ ಗುಣಮಟ್ಟದ ಬಗ್ಗೆ ಆತಂಕಗೊಂಡಿದ್ದು, ಈ ಬಗ್ಗೆ ತನಿಖೆಯಾಗಬೇಕೆಂದು ಹೇಳಿದ್ದಾರೆ. ಇದೇ ರೀತಿಯ ಘಟನೆ ಭಾರತದಲ್ಲೂ ವರದಿಯಾಗಿದ್ದು ಚಿಕನ್ ನಲ್ಲಿ ಜೀವಂತ ಹುಳಗಳಿರುವುದು ಪತ್ತೆಯಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಎಫ್ ಸಿ, ಘಟನೆ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಹೇಳಿದೆ. ಕೆಎಫ್ ಸಿ ತಂಡವೊಂದು ಆಕ್ಲೆಂಡ್ ನಲ್ಲಿರುವ ಕೆಎಫ್ ಸಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೆಎಫ್ ಸಿ, ಜಾಗತಿಕವಾಗಿ ಗುಣಮಟ್ಟದ ಆಹಾರ ಪೂರೈಕೆಗೆ ಬದ್ಧವಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳಾಗದಂತೆ ಎಚ್ಚರ ವಹಿಸುವುದಾಗಿ ಭರವಸೆ ನೀಡಿದೆ.

ನಿಮಗೆ ತಿಳಿದಿರುವಂತೆ, ಇದು ನಡೆದಿರುವುದು ನ್ಯೂಜೀಲ್ಯಾಂಡ್ ನಲ್ಲಿ, ಭಾರತದಲ್ಲಿ ಅಲ್ಲ. ನಮ್ಮ ಆಹಾರ ತಯಾರಿಕಾ ಪ್ರಕ್ರಿಯೆ, ಮಾನದಂಡ ಮತ್ತು ಗುಣಮಟ್ಟಗಳ ಕುರಿತು ನಮಗೆ ಸಂಪೂರ್ಣ ವಿಶ್ವಾಸವಿದೆ. ನಮ್ಮ ಅನುಭವದಂತೆ, ಇಂತಹ ಘಟನೆ ನಮ್ಮ ಯಾವುದೇ ಮಳಿಗೆಯಲ್ಲಿ ಸಂಭವಿಸುವ ಸಾಧ್ಯತೆ ಇಲ್ಲ ಎಂಬುದನ್ನು ನಾವು ಖಾತರಿಪಡಿಸುತ್ತೇವೆ ಎಂದು ಕೆಎಫ್ ಸಿ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT