ಢಾಕಾ ಭಯೋತ್ಪಾದಕ ದಾಳಿಯ ಒಂದು ದೃಶ್ಯ 
ವಿದೇಶ

ಢಾಕಾ ಭಯೋತ್ಪಾದನೆ: ಗೆಳೆಯರನ್ನು ತೊರೆಯಲು ಒಪ್ಪದೆ ಜೊತೆಯಲ್ಲೇ ಹತ್ಯೆಯಾದ ಫರಾಜ್

ಢಾಕಾದಲ್ಲಿ ಶುಕ್ರವಾರ ಭಯೋತ್ಪಾದಕರು ನಡೆಸಿದ ಮಾರಣಹೋಮದಲ್ಲೂ ಗೆಳೆತನವನ್ನು ಮೆರೆದ ಮನಕಲಕುವ ಘಟನೆ ಸಂಭವಿಸಿದೆ.

ನವದೆಹಲಿ: ಢಾಕಾದಲ್ಲಿ ಶುಕ್ರವಾರ ಭಯೋತ್ಪಾದಕರು ನಡೆಸಿದ ಮಾರಣಹೋಮದಲ್ಲೂ ಗೆಳೆತನವನ್ನು ಮೆರೆದ ಮನಕಲಕುವ ಘಟನೆ ಸಂಭವಿಸಿದೆ. 
ಮಾಧ್ಯಮ ವರದಿಗಳ ಪ್ರಕಾರ ಹೋಲಿ ಆರ್ಟಿಸನ್ ಬೇಕರಿಯಲ್ಲಿ ಭಯೋತ್ಪಾದಕರು ದಾಳಿ ಮಾಡಿದಾಗ ತರಿಶಿ ಜೈನ್ ತನ್ನಿಬ್ಬರು ಗೆಳೆಯರೊಂದಿಗೆ ಶೌಚಾಲಯದಲ್ಲಿ ಅಡಗಿ ಕೂತಿದ್ದಳು. ತರಿಶಿ ತನ್ನ ಗೆಳೆಯರಾದ ಫರಾಜ್ ಹುಸೇನ್ ಮತ್ತು ಅಬಿಂತಾ ಕಬೀರ್ ಅವರೊಂದಿಗೆ ಭಯೋತ್ಪಾದಕರ ಕಣ್ತಪ್ಪಿಸಿ ತಪ್ಪಸಿಕೊಳ್ಳುವ ಯೋಚನೆಯಲ್ಲಿದ್ದರು ಅದೃಷ್ಟ ಅವರ ಕೈನಲ್ಲಿರಲಿಲ್ಲ. 
ಢಾಕಾ ಶಾಲೆಯಲ್ಲಿ ಒಟ್ಟಿಗೆ ಓದುತ್ತಿದ್ದ ಈ ಗೆಳೆಯರನ್ನು ಭಯೋತ್ಪಾದಕರು ಬರ್ಬರವಾಗಿ ಹತ್ಯೆ ಮಾಡಿದರು, ಗೆಳೆತನವನ್ನು ಮೆರೆದ ಮಾನವೀಯ ಘಟನೆ ಇದು. 
ಮಾಧ್ಯಮಗಳ ವರದಿ ಪ್ರಕಾರ ಭಯೋತ್ಪಾದಕರು ತನ್ನ ಗೆಳತಿಯರನ್ನು ಬಿಟ್ಟು ಹೊರಹೋಗುವಂತೆ ಫರಾಜ್ ಹುಸೇನ್ ಗೆ ತಿಳಿಸಿದ್ದರು ಅವನು ನಿರಾಕರಿಸಿದ್ದಾನೆ. 
"ತರಿಶಿ ಮತ್ತು ಅಬಿಂತಾ ಪಾಶ್ಚಿಮಾತ್ಯ ಬಟ್ಟೆಗಳನ್ನು ಧರಿಸಿದ್ದರಿಂದ ಫರಾಜ್ ಗೆ ಹೊರಹೋಗುವಂತೆ ತಿಳಿಸಿದ್ದಾರೆ. ಆದರೆ ತನ್ನ ಗೆಳೆಯರನ್ನು ತೊರೆದು ಹೋಗಲು ಫರಾಜ್ ನಿರಾಕರಿಸಿದ" ಎಂದು ಮಾಧ್ಯಮಗಳು ವರದಿ ಮಾಡಿವೆ. 
ನಂತರ ಬರ್ಬರವಾಗಿ ಹತ್ಯೆಗಯ್ಯಲಾದ 20 ಜನರಲ್ಲಿ ಈ ಮೂವರು ಸೇರಿದ್ದರು ಎಂದು ಬದುಕುಳಿದ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಹತ್ಯೆಯಾದವರಲ್ಲಿ ಎಂಟು ಇಟಾಲಿಯನ್ ನಾಗರಿಕರು, ಏಳು ಜಪಾನಿಯರು ಮತ್ತು ಒಬ್ಬ ಭಾರತೀಯ ವಿದ್ಯಾರ್ಥಿ ಸೇರಿದ್ದಾರೆ. ಬಾಂಗ್ಲಾ ಇತಿಹಾಸದ ಈ ಭೀಕರ ಭಯೋತ್ಪಾದಕ ದಾಳಿಯಲ್ಲಿ ಆರು ಭಯೋತ್ಪಾದಕರನ್ನು ಹತ್ಯೆಗೈದು ಒಬ್ಬನನ್ನು ಸಜೀವವಾಗಿ ಹಿಡಿಯಲಾಗಿದೆ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಜೊತೆ ವ್ಯವಹಾರ ನಡೆಸುವ ದೇಶಗಳ ಮೇಲೆ ಶೇ.25ರಷ್ಟು ಸುಂಕ: Donald Trump

ಯುದ್ಧಕ್ಕೂ ಸಿದ್ದ-ಮಾತುಕತೆಗೂ ಬದ್ಧ ಎಂದ ಇರಾನ್ ಸರ್ಕಾರ: ಮೃತರ ಸಂಖ್ಯೆ 648ಕ್ಕೆ ಏರಿಕೆ

SSLC ಪೂರ್ವಸಿದ್ಧತಾ ಪರೀಕ್ಷೆ: ಉತ್ತಮ Resultಗಾಗಿ ಶಿಕ್ಷಕರಿಂದಲೇ ಪ್ರಶ್ನೆಪತ್ರಿಕೆ ಲೀಕ್, 6 ಮಂದಿ ಬಂಧನ..!

ಬಾಂಗ್ಲಾದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ನಿಲ್ಲದ ದೌರ್ಜನ್ಯ: ಆಟೋ ಚಾಲಕನ ಬರ್ಬರ ಹತ್ಯೆ

ರಕ್ಷಣಾ, ಭದ್ರತಾ ಒಪ್ಪಂದ ಬಲವರ್ಧನೆ: ಭಾರತ- ಜರ್ಮನಿ ಮಹತ್ವದ ಕ್ರಮಗಳ ಘೋಷಣೆ!

SCROLL FOR NEXT