ಸಾಂದರ್ಭಿಕ ಚಿತ್ರ 
ವಿದೇಶ

ಬಾಂಗ್ಲಾ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆ; ೯೦೦ ಜನ ವಶಕ್ಕೆ

ಬಾಂಗ್ಲಾ ದೇಶ ನಡೆಸಿದ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಯ ಮೊದಲ ದಿನವಾದ ಶುಕ್ರವಾರ ಪೊಲೀಸರು ಸುಮಾರು ೯೦೦ ಜನರನ್ನು ವಶಕ್ಕೆ ಪಡೆದಿದ್ದಾರೆ.

ಢಾಕಾ: ಬಾಂಗ್ಲಾ ದೇಶ ನಡೆಸಿದ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಯ ಮೊದಲ ದಿನವಾದ ಶುಕ್ರವಾರ ಪೊಲೀಸರು ಸುಮಾರು ೯೦೦ ಜನರನ್ನು ವಶಕ್ಕೆ ಪಡೆದಿದ್ದಾರೆ.

ಒಂದು ವಾರ ನಡೆಯಲಿರುವ ಈ ಕಾರ್ಯಾಚರಣೆಯ ಮುಖ್ಯ ಧ್ಯೇಯ ಭಯೋತ್ಪಾದಕೆ ನೆಲೆಗಳ ಮೇಲೆ ದಾಳಿ ಮಾಡಿ ದೇಶದಾದ್ಯಂತ ಅವರ ಜಾಲಕ್ಕೆ ಕಡಿವಾಣ ಹಾಕುವುದು ಎಂದು ಪೊಲೀಸ್ ಇಸ್ಪೆಕ್ಟರ್ ಜನರಲ್ ಎ ಕೆ ಎಂ ಶಾಹಿದುಲ್ ಹಕ್ ಹೇಳಿದ್ದಾರೆ.

ಶುಕ್ರವಾರವಷ್ಟೇ ಢಾಕಾದಿಂದ ೨೧೬ ಕಿಮೀ ದೂರದಲ್ಲಿರುವ ಪಬ್ನಾ ಜಿಲ್ಲೆಯ ಹಿಂದು ದೇವಾಲಯದ ಸಿಬ್ಬಂದಿಯೊಬ್ಬನನ್ನು ಬರ್ಬರವಾಗಿ ಕೊಲೆಗೈಯ್ಯಲಾಗಿತ್ತು. ಈ ಕೊಲೆಗೆ ಕಾರಣ ಇನ್ನು ತಿಳಿದುಬಂದಿಲ್ಲ ಎಂದು ಜಿಲ್ಲ ಪೊಲೀಸ್ ಅಧ್ಯಕ್ಷ ಅಲಮ್ಗೀರ್ ಕಬೀರ್ ಹೇಳಿದ್ದರು.

೨೦೧೩ ರಿಂದ ಇತ್ತೀಚೆಗೆ ಇಂತಹ ಹಿಂಸೆಯ ದಾಳಿಗಳು ತೀವ್ರಗೊಂಡಿವೆ. ಹಲವಾರು ಜಾತ್ಯಾತೀತ ಬ್ಲಾಗರ್ ಗಳು, ಬರಹಗಾರರು ಮತ್ತು ಪ್ರಕಾಶಕರನ್ನು ತೀವ್ರವಾದಿಗಳು ಕೊಂದು ಹಾಕಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT