ಒಸಾಮಾ ಬಿನ್ ಲಾಡೆನ್ (ಸಂಗ್ರಹ ಚಿತ್ರ) 
ವಿದೇಶ

ಜಿಹಾದ್‌ಗಾಗಿ ಲಾಡೆನ್ 29 ಮಿಲಿಯನ್ ಡಾಲರ್ ಕೂಡಿಟ್ಟಿದ್ದ!

ಅಲ್‌ಖೈದಾ ನಾಯಕ ಒಸಾಮ ಬಿನ್ ಲಾಡೆನ್ ಜಿಹಾದ್‌ಗಾಗಿ 29 ಮಿಲಿಯನ್ ಡಾಲರ್ ಹಣವನ್ನು ಕೂಡಿಟ್ಟಿದ್ದ ಎಂಬ ಮಾಹಿತಿ ತಿಳಿದು ಬಂದಿದೆ...

ವಾಷಿಂಗ್ಟನ್: ಅಲ್‌ಖೈದಾ ನಾಯಕ ಒಸಾಮ ಬಿನ್ ಲಾಡೆನ್ ಜಿಹಾದ್‌ಗಾಗಿ 29 ಮಿಲಿಯನ್ ಡಾಲರ್ ಹಣವನ್ನು ಕೂಡಿಟ್ಟಿದ್ದ ಎಂಬ ಮಾಹಿತಿ ತಿಳಿದು ಬಂದಿದೆ.
2011ರಲ್ಲಿ ಅಮೆರಿಕದ ವಿಶೇಷ ಪಡೆ ಬಿನ್ ಲಾಡೆನ್ ಅವರ ಮೇಲೆ ದಾಳಿ ಮಾಡಿದಾಗ ಅಲ್ಲಿ ಸಿಕ್ಕಿದ ದಾಖಲೆ ಪತ್ರದಲ್ಲಿ ಈ ವಿಷಯ ಬರೆದಿಡಲಾಗಿತ್ತು ಎಂದು ಅಮೆರಿಕ ಹೇಳಿದೆ.
ಅರೆಬಿಕ್ ಭಾಷೆಯಲ್ಲಿ ಬರೆದಿದ್ದ ದಾಖಲೆ ಪತ್ರದಲ್ಲಿ ತನ್ನ ಮರಣ ನಂತರ ಜಾಗತಿಕ ಮಟ್ಟದಲ್ಲಿ ಜಿಹಾದ್ ನಡೆಸಲು 29 ಮಿಲಿಯನ್ ಡಾಲರ್ ಕೂಡಿಟ್ಟಿರುವ ಬಗ್ಗೆ ಲಾಡೆನ್ ಬರೆದಿಟ್ಟಿದ್ದಾರೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಹೇಳಿದೆ.
ಲಾಡೆನ್ ದಾಳಿ ವೇಳೆ ವಶಪಡಿಸಿಕೊಂಡ 113 ದಾಖಲೆಗಳನ್ನೆಲ್ಲಾ ಒಂದೊಂದಾಗಿ ಪರಿಶೀಲಿಸಿದ್ದು, ಇನ್ನೂ ಹಲವಾರು ದಾಖಲೆಗಳನ್ನು ಅಮೆರಿಕ ಬಿಡುಗಡೆ ಮಾಡಲಿದೆ.
1990ರಲ್ಲಿ ಸೌದಿ ಉಗ್ರರು ಬರೆದಿದ್ದಾರೆ ಎನ್ನಲಾಗುತ್ತಿರುವ ಒಂದು ಹಸ್ತಪ್ರತಿಯಲ್ಲಿ ಸುಡಾನ್‌ನಲ್ಲಿ ಲಾಡೆನ್ ಕೂಡಿಟ್ಟಿರುವ 29 ಮಿಲಿಯನ್ ಡಾಲರ್ ಹಣವನ್ನು ಹೀಗೆ ಹಂಚಬೇಕು ಎಂಬುದನ್ನು ವಿವರಿಸಲಾಗಿದೆ.
29 ಮಿಲಿಯನ್ ಡಾಲರ್‌ನ ಒಂದು ಪ್ರತಿಶತ ಹಣವನ್ನು ಅಲ್‌ಖೈದಾದ ಹಿರಿಯ ಉಗ್ರ ಮಹಫೂಜ್ ಔಲ್ದ್ ಅಲ್ ವಾಲಿದ್ ಗೆ ನೀಡಬೇಕು. ಈಗಾಗಲೇ  ಅಲ್ ವಾಲಿದ್ ಇದರಿಂದ 20,000-30,000 ಡಾಲರ್‌ಗಳನ್ನು ಸ್ವೀಕರಿಸಿದ್ದಾನೆ. ಆತ ಸುಡಾನ್ ಸರ್ಕಾರದಿಂದ ಆ ಹಣವನ್ನು ಹೊರತೆಗೆದರೆ ನಾನು ಆತನಿಗೆ ಬಹುಮಾನವನ್ನು ನೀಡುವುದಾಗಿ ಹೇಳಿದ್ದೇನೆ ಎಂದು ಲಾಡೆನ್ ಪತ್ರವೊಂದರಲ್ಲಿ ಬರೆದಿದ್ದಾರೆ. 
ಸುಡಾನ್‌ನಲ್ಲಿ ಲಾಡೆನ್ 5 ವರ್ಷಗಳ ಕಾಲ ವಾಸವಾಗಿದ್ದು, ಮೇ 1996ರಲ್ಲಿ ಅಲ್ಲಿಂದ ಸ್ಥಳಾಂತರವಾಗಿದ್ದರು. 
ಇನ್ನೊಂದು ಪ್ರತಿಶತ ಹಣವನ್ನು ಇಂಜಿನಿಯರ್ ಅಬು ಇಬ್ರಾಹಿಂ ಅಲ್ ಇರಾಖಿ ಸಾದ್ ಅವರಿಗೆ ನೀಡಬೇಕು. ಅಲ್ ಇರಾಖಿ, ಸುಡಾನ್ ನಲ್ಲಿ ಲಾಡೆನ್‌ನ ಮೊದಲ ಕಂಪೆನಿ ವಾಜಿ ಅಲ್ ಅಖೀಕ್ ಕೋ ಆರಂಭಿಸಲು ಸಹಾಯ ಮಾಡಿದ್ದನು. 
ಇನ್ನುಳಿದ ಹಣವನ್ನು ಅಲ್ಲಾಹ್‌ನ ಹೆಸರಲ್ಲಿ ಜಿಹಾದ್‌ಗಾಗಿ ಬಳಸಿಕೊಳ್ಳಿ. ನನ್ನ ಸಹೋದರರು, ಸಹೋದರಿಯರು, ಸಂಬಂಧಿಕರು ನನ್ನ ವಿಲ್ ಪ್ರಕಾರ ಸುಡಾನ್‌ನಲ್ಲಿ ಕೂಡಿಟ್ಟಿರುವ ಈ ಹಣವನ್ನು ಜಿಹಾದ್ ಗಾಗಿ ಬಳಸಿಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಪತ್ರದಲ್ಲಿ ಲಾಡೆನ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT