ಅತೀವುರ್ ರೆಹಮಾನ್ 
ವಿದೇಶ

ಬಾಂಗ್ಲಾದಲ್ಲಿ ನೆಟ್ ಬ್ಯಾಂಕಿಂಗ್ ಹ್ಯಾಕ್ ಮಾಡಿ 81 ಮಿಲಿಯನ್ ಡಾಲರ್ ದರೋಡೆ

ಇಂಟರ್‌ನೆಟ್ ಬ್ಯಾಂಕಿಂಗ್ ಮಾಹಿತಿಗಳನ್ನು ಸೋರಿಕೆ ಮಾಡಿ ಬಾಂಗ್ಲಾದೇಶದ ಸೆಂಟ್ರಲ್ ಬ್ಯಾಂಕ್‌ನ ವಿದೇಶೀ ಅಕೌಂಟ್ ನಿಂದ 81 ಮಿಲಿಯನ್ ಅಮೆರಿಕನ್ ಡಾಲರ್...

ಢಾಕಾ:  ಇಂಟರ್‌ನೆಟ್ ಬ್ಯಾಂಕಿಂಗ್ ಮಾಹಿತಿಗಳನ್ನು ಸೋರಿಕೆ ಮಾಡಿ ಬಾಂಗ್ಲಾದೇಶದ ಸೆಂಟ್ರಲ್ ಬ್ಯಾಂಕ್‌ನ ವಿದೇಶೀ ಅಕೌಂಟ್ ನಿಂದ 81 ಮಿಲಿಯನ್ ಅಮೆರಿಕನ್ ಡಾಲರ್ (ರು. 5448501450.00) ದರೋಡೆ ಮಾಡಲಾಗಿದೆ. ಬಾಂಗ್ಲಾದೇಶವನ್ನೇ ಮುಜುಗರಕ್ಕೀಡು ಮಾಡಿದ ಸೈಬರ್ ದರೋಡೆ ಇದಾಗಿದ್ದು, ಬ್ಯಾಂಕ್ ಗವರ್ನರ್ ಅತೀವುರ್ ರೆಹಮಾನ್ (64) ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಜಗತ್ತಿನಲ್ಲಿ ನಡೆದ ಅತೀ ದೊಡ್ಡ ದರೋಡೆಯಾಗಿದೆ ಇದು. ಆದಾಗ್ಯೂ, ಒಂದು ದೇಶದಲ್ಲಿ ಸೆಂಟ್ರಲ್ ಬ್ಯಾಂಕ್‌ನ ದರೋಡೆಯಾಗಿದ್ದು ಇದೇ ಮೊದಲ ಬಾರಿಯಾಗಿದೆ.
ಬಾಂಗ್ಲಾದೇಶ್ ಬ್ಯಾಂಕ್‌ನ ಫೆಡರಲ್ ರಿಸರ್ವ್ ಬ್ಯಾಂಕ್ ಆಫ್ ನ್ಯೂಯಾರ್ಕ್‌ನ ಅಕೌಂಟಿನಿಂದ ಫೆಬ್ರವರಿ ಮೊದಲ ವಾರದಲ್ಲಿ ಆಗಂತುಕರು ಕೋಟಿಗಳಷ್ಟು ದುಡ್ಡು ದರೋಡೆ ಮಾಡಿದ್ದರು. ದರೋಡೆ ಮಾಡಿದ ದುಡ್ಡಿನಿಂದ 8.1 ಕೋಟಿ ಡಾಲರ್ ಫಿಲಿಫೇನ್ಸ್‌ನ ಅಕೌಂಟಿಗೂ ಬಾಕಿ ದುಡ್ಡನ್ನು ಶ್ರೀಲಂಕಾದ ಅಕೌಂಟ್‌ಗೂ ರವಾನಿಸಲಾಗಿದೆ. ಈ ಘಟನೆ ನಡೆದು ವಾರಗಳಾಗಿದ್ದರೂ ಬಾಂಗ್ಲಾದೇಶದ ವಿತ್ತ ಸಚಿವರಿಗೆ ಈ ವಿಷಯ ಗೊತ್ತಾಗಲೇ ಇಲ್ಲ. ಪತ್ರಿಕೆಗಳಲ್ಲಿನ ವರದಿ ನೋಡಿ ತಾನು ಗವರ್ನರ್‌ಗೆ ಹೇಳಿರುವುದರಿಂದ ಅವರು ರಾಜೀನಾಮೆ ನೀಡಿದ್ದಾರೆ ಎಂದು ವಿತ್ತ ಸಚಿವ ಎಎಂಎ ಮುಹೀತ್ ಹೇಳಿದ್ದಾರೆ. ಇದೀಗ ವಿತ್ತ ಸಚಿವಾಲಯದ ಮಾಜಿ ಕಾರ್ಯದರ್ಶಿ ಫಸ್ಲ್ ಕಬೀರ್ ಅವರನ್ನು ಗವರ್ನರ್ ಆಗಿ  ನೇಮಕ ಮಾಡಲಾಗಿದೆ. 
ಒಂದು ಅಕೌಂಟ್‌ನಿಂದ ಮತ್ತೊಂದು ಅಕೌಂಟ್‌ಗೆ ಹಣ ವರ್ಗಾವಣೆ ಮಾಡುವ ಇಂಟರ್‌ನೆಟ್ ಬ್ಯಾಂಕಿಂಗ್‌ಗಾಗಿ ಬಳಸಲ್ಪಡುವ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿ ಈ ದರೋಡೆ ಮಾಡಲಾಗಿದೆ. 
ವಾರಾಂತ್ಯ ರಜೆ ಕೂಡಾ ದರೋಡೆಗೆ ಸಹಾಯವಾಯಿತು 
ಫೆಬ್ರವರಿ 4 ಮತ್ತು 5 ರಂದು ಸೈಬರ್ ದರೋಡೆ ನಡೆದಿತ್ತು. ಫೆಬ್ರವರಿ 5 ಶುಕ್ರವಾರ ಬಾಂಗ್ಲಾದೇಶದಲ್ಲಿ ಬ್ಯಾಂಕ್ ರಜೆ. ಶನಿವಾರ ಮತ್ತು ಭಾನುವಾರ ನ್ಯೂಯಾರ್ಕ್ ರಿಸರ್ವ್ ಬ್ಯಾಂಕ್‌ಗೂ ರಜೆಯಾಗಿದೆ. ಫಿಲಿಫೇನ್ಸ್‌ನಲ್ಲಿ ಚೈನೀಸ್ ಹೊಸ ವರುಷದ ಕಾರಣ ಸೋಮವಾರ ಬ್ಯಾಂಕ್‌ಗೆ ರಜೆಯಾಗಿತ್ತು. ಹೀಗೆ ಒಂದರ ಹಿಂದೆ ಒಂದು ಎಂಬಂತೆ ಸಿಕ್ಕಿದ ರಜೆಗಳು ದರೋಡೆಕೋರರಿಗೆ ವರದಾನವೂ ಆಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT