ಮೌಂಟ್ ಎವರೆಸ್ಟ್ 
ವಿದೇಶ

ಮೌಂಟ್ ಎವರೆಸ್ಟ್ ಪರ್ವತದಲ್ಲಿ ಬಿರುಕು; ಪರ್ವತಾರೋಹಿಗಳಲ್ಲಿ ಆತಂಕ

ನೇಪಾಳದಲ್ಲಿ ಕಳೆದ ವರ್ಷ ಸಂಭವಿಸಿದ ಭಾರಿ ಭೂಕಂಪದ ನಂತರದ ನಿರಂತರ ಕಂಪನಗಳ ಪರಿಣಾಮವಾಗಿ ಎವರೆಸ್ಟ್‌ ಪರ್ವತ ಪ್ರದೇಶದ ಅನೇಕ ಕಡೆ ಬಿರುಕುಗಳು ..

ಕಠ್ಮಂಡು: ಕಳೆದ ವರ್ಷ ನೇಪಾಳದಲ್ಲಿ   ಸಂಭವಿಸಿದ ಭಾರಿ ಭೂಕಂಪದ ನಂತರದ ನಿರಂತರ ಕಂಪನಗಳ ಪರಿಣಾಮವಾಗಿ ಎವರೆಸ್ಟ್‌ ಪರ್ವತ ಪ್ರದೇಶದ ಅನೇಕ ಕಡೆ ಬಿರುಕುಗಳು ಕಾಣಿಸಿಕೊಂಡಿವೆ ಎಂದು ಎವರೆಸ್ಟ್‌ ಪರ್ವತಾರೋಹಣ ಮಾರ್ಗ ನಿರ್ವಹಣೆಯ ಹೊಣೆ ಹೊತ್ತಿರುವ ತಜ್ಞರ ತಂಡ ನೇಪಾಳ ಸರ್ಕಾರಕ್ಕೆ ಈ ಮಾಹಿತಿ ನೀಡಿದೆ.

ಕಳೆದ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಸಂಭವಿಸಿದ ಭೂಕಂಪದಲ್ಲಿ 9 ಸಾವಿರ ಜನ ಸಾವಿಗೀಡಾಗಿದ್ದರು. ಇದರ ನಂತರದ ಹಲವಾರು ಕಂಪನಗಳ ಪರಿಣಾಮವಾಗಿ ಎವರೆಸ್ಟ್‌ ಪರ್ವತಕ್ಕೆ ಕೊಂಚ ಹಾನಿ ಉಂಟಾಗಿದೆ ಎಂದು ನೇಪಾಳ ಪರ್ವತಾರೋಹಿಗಳ ಸಂಘದ ಅಧ್ಯಕ್ಷ ಆಂಗ್‌ ತಷೆರಿಂಗ್‌ ಶೆರ್ಪಾ ತಿಳಿಸಿದ್ದಾರೆ.

ಪರ್ವತಾರೋಹಣ ಮಾರ್ಗದಲ್ಲಿ ಹಿಮಕುಸಿತವಾಗದಂತೆ ತಡೆಯುವ ಉದ್ದೇಶದಿಂದ ಪ್ರತಿ ವರ್ಷ ಪರ್ವತಾರೋಹಣದ ಆರಂಭಕ್ಕೂ ಮುನ್ನ ಏಣಿ ಹಾಗೂ ಹಗ್ಗಗಳನ್ನು ಅಳವಡಿಸಲಾಗುತ್ತದೆ. ಹಿಮಕುಸಿತ ಕುರಿತ ತಜ್ಞರ ತಂಡ ಈ ಜವಾಬ್ದಾರಿ ನಿಭಾಯಿಸುತ್ತದೆ. ಆದರೆ ಈ ಬಾರಿ ಮಾರ್ಗದಲ್ಲಿ ಬಿರುಕು ಹಾಗೂ ಕಿರು ಕಂದಕಗಳು ಹೆಚ್ಚಾಗಿ ಕಂಡುಬರುತ್ತಿವೆ. ಇದರಿಂದಾಗಿ ಹೆಚ್ಚಿನ ಅಲ್ಯೂಮಿನಿಯಂ ಏಣಿಗಳು ಹಾಗೂ ಹಗ್ಗಗಳನ್ನು ಅಳವಡಿಸುವುದು ಅನಿವಾರ್ಯವಾಗಿದೆ.

ಮೊದಲ ಭೂಕಂಪನದ ನಂತರ ಇದುವರೆಗೆ ರಿಕ್ಟರ್‌ ಮಾಪಕದಲ್ಲಿ ನಾಲ್ಕಕ್ಕಿಂತ ಹೆಚ್ಚು ತೀವ್ರತೆಯ 440 ಕಂಪನಗಳು ದಾಖಲಾಗಿವೆ. ಇದರಿಂದಾಗಿ  ಎವರೆಸ್ಟ್‌ ಹಲವು ಕಡೆ ಬಿರುಕು ಬಿಟ್ಟಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

'sir' ವಿವಾದ ಕೊನೆಗೂ ಅಂತ್ಯ: 'ಸರ್.. ನೀವು ನನ್ನ ಹಿರಿಯರು': ಕಿಚ್ಚಾ ಸುದೀಪ್ ಗೆ ಧನ್ಯವಾದ ಹೇಳಿದ ನಟ ಯಶ್!

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದಳಪತಿ ವಿಜಯ್ ಅಭಿನಯದ 'ಜನ ನಾಯಗನ್'

SCROLL FOR NEXT