ಕಿಮ್ ಕರ್ದಾಶಿಯನ್ 
ವಿದೇಶ

ಪಾರಿಸ್ ನಲ್ಲಿ ಕಿಮ್ ಕರ್ದಾಶಿಯನ್ ಗೆ ಗನ್ ತೋರಿಸಿ ದರೋಡೆ

ಬೆತ್ತಲೆಯಾಗುವ ಮೂಲಕವೇ ಸದಾ ಸುದ್ದಿಯಾಗುತ್ತಿದ್ದ ಅಮೆರಿಕಾದ ಟೆಲಿವಿಶನ್ ತಾರೆ ಕಿಮ್ ಕರ್ದಾಶಿಯನ್ ಈ ಬಾರಿ ಬೆರೆ ಕಾರಣಕ್ಕೆ...

ಪ್ಯಾರಿಸ್: ಬೆತ್ತಲೆಯಾಗುವ ಮೂಲಕವೇ ಸದಾ ಸುದ್ದಿಯಾಗುತ್ತಿದ್ದ ಅಮೆರಿಕಾದ ಟೆಲಿವಿಶನ್ ತಾರೆ ಕಿಮ್ ಕರ್ದಾಶಿಯನ್ ಈ ಬಾರಿ ಬೆರೆ ಕಾರಣಕ್ಕೆ ಸುದ್ದಿಯಾಗಿದ್ದು, ಗನ್ ತೋರಿಸಿ ಅರೆಬೆತ್ತಲೆ ಬೆಡಗಿಯಿಂದ ಮಿಲಿಯನ್ ಗಟ್ಟಲೆ ದರೋಡೆ ಮಾಡಲಾಗಿದೆ. 
ಪ್ಯಾರಿಸ್ ನಲ್ಲಿ ನಡೆಯಲಿದ್ದ ಷೋ ಒಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಕಿಮ್ ಕರ್ದಾಶಿಯನ್ ತಂಗಿದ್ದ ಖಾಸಗಿ ನಿವಾಸಕ್ಕೆ ನುಗ್ಗಿದ ಮುಸುಕುಧಾರಿಗಳಿಬ್ಬರು ಗನ್ ತೋರಿಸಿ 10 ಮಿಲಿಯನ್ ಡಾಲರ್ ಮೌಲ್ಯದ ಆಭರಣಗಳನ್ನು ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಖಾಸಗಿ ನಿವಾಸದಲ್ಲಿ ಕಿಮ್ ಕರ್ದಾಶಿಯನ್ ಒಬ್ಬರೇ ಇದ್ದ ವೇಳೆ ಇವರುಗಳು ನುಗ್ಗಿದ್ದು, ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕಿಮ್ ಕರ್ದಾಶಿಯನ್ ಗೆ ಅಪರಿಚಿತರು ಏಕಾಏಕಿ ಮನೆಗೆಯೊಳಗೆ ನುಗ್ಗುತ್ತಿದ್ದಂತೆಯೇ ಬೆಚ್ಚಿ ಬಿದ್ದಿದ್ದಾರೆ. ದುಷ್ಕರ್ಮಿಗಳು ಗನ್ ತೋರಿಸುತ್ತಿದ್ದಂತೆಯೇ ತೀವ್ರ ಭೀತಿಗೊಂಡ ಆಕೆ, ತಮ್ಮ ಬಳಿಯಿದ್ದ ಬೆಲೆಬಾಳುವ ವಸ್ತುಗಳನ್ನು ನೀಡಿದ್ದಾರೆ. ಘಟನೆಯಲ್ಲಿ ಕಿಮ್ ಕರ್ದಾಶಿಯನ್ ಅವರಿಗೆ ಯಾವುದೇ ಅಪಾಯ ಸಂಭವಿಸಿಲ್ಲವಾದರೂ ಘಟನೆಯಿಂದ ಶಾಕ್ ಗೆ ಒಳಗಾಗಿದ್ದಾರೆ. ಅಲ್ಲದೇ ತಾವು ತೆರಳಬೇಕಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆಂದು ಅವರ ವಕ್ತಾರರು ತಿಳಿಸಿದ್ದಾರೆ.
ವಾರದ ಹಿಂದಷ್ಟೇ ಅಭಿಮಾನಿಯೆಂದು ಹೇಳಿಕೊಂಡವನೊಬ್ಬ ಸಾರ್ವಜನಿಕ ಸ್ಥಳದಲ್ಲೇ ಕಿಮ್ ಕರ್ದಾಶಿಯನ್ ಅವರನ್ನು ಚುಂಬಿಸಲು ಯತ್ನಿಸಿದ್ದು, ಅದಾದ ಬಳಿಕ ಈ ಘಟನೆ ನಡೆದಿರುವುದು ಕರ್ದಾಶಿಯನ್ ರನ್ನು ದಿಗ್ಬ್ರಮೆಗೊಳ್ಳುವಂತೆ ಮಾಡಿದೆ ಎನ್ನಲಾಗಿದೆ. ನ್ಯೂಯಾರ್ಕ್ ನಲ್ಲಿ ಮತ್ತೊಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಿಮ್ ಕರ್ದಾಶಿಯನ್ ಪತಿ, ಅದನ್ನು ಅರ್ಧಕ್ಕೆ ಮೊಟಕುಗೊಳಿಸಿ ತೆರಳಿದರೆಂದು ಹೇಳಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಗಳಿವೆ; ಯಾರ ಒತ್ತಡಕ್ಕೆ ಒಳಗಾಗಿ Congress ಮರ್ಯಾದೆ ತೆಗೆಯುತ್ತಿದ್ದೀರಾ? ಚಿದಂಬರಂ ವಿರುದ್ಧ ಹೈಕಮಾಂಡ್ ಗರಂ!

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

SCROLL FOR NEXT