ಗಾಯಕ ಅದ್ಮಾನ್ ಸಮಿ ಮತ್ತು ಟ್ವೀಟ್ 
ವಿದೇಶ

ಪಾಕಿಸ್ತಾನ ಹಾಗೂ ಭಯೋತ್ಪಾದನೆ ಎರಡೂ ಒಂದೇ ಎಂದು ತಿಳಿದಿದಂತಿದೆ: ಅದ್ನಾನ್ ಸಮಿ

ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಅಲ್ಲಿ ಅಡಗಿದ್ದ ಉಗ್ರರನ್ನು ಹಾಗೂ ಅವರ ತರಬೇತಿ ಕ್ಯಾಂಪ್ ಗಳನ್ನು ಧ್ವಂಸ ಮಾಡಿದ ಭಾರತೀಯ ಸೇನೆ ಪರಾಕ್ರಮವನ್ನು ಹೊಗಳಿದ್ದ ಪಾಕ್ ಮೂಲದ ಗಾಯಕ ಅದ್ನಾನ್ ಸಮಿ ಇದೀಗ ಪಾಕಿಸ್ತಾನ ಪ್ರಜೆಗಳಿಂದ ವ್ಯಾಪಕ ವಿರೋಧ ಎದುರಿಸುತ್ತಿದ್ದಾರೆ.

ದುಬೈ: ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಅಲ್ಲಿ ಅಡಗಿದ್ದ ಉಗ್ರರನ್ನು ಹಾಗೂ ಅವರ ತರಬೇತಿ ಕ್ಯಾಂಪ್ ಗಳನ್ನು ಧ್ವಂಸ ಮಾಡಿದ ಭಾರತೀಯ ಸೇನೆ ಪರಾಕ್ರಮವನ್ನು ಹೊಗಳಿದ್ದ ಪಾಕ್  ಮೂಲದ ಗಾಯಕ ಅದ್ನಾನ್ ಸಮಿ ಇದೀಗ ಪಾಕಿಸ್ತಾನ ಪ್ರಜೆಗಳಿಂದ ವ್ಯಾಪಕ ವಿರೋಧ ಎದುರಿಸುತ್ತಿದ್ದಾರೆ.

ಭಾರತೀಯ ಸೇನೆ ಶೌರ್ಯವನ್ನು ಮೆಚ್ಚಿ ಅದ್ನಾನ್ ಸಮಿ ಮಾಡಿದ್ದ ಟ್ವೀಟ್ ವಿರೋಧಿಸಿ ಪಾಕಿಸ್ತಾನದ ವಿವಿಧ ಮೂಲೆಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಪಾಕಿಸ್ತಾನದ ಶತ್ರುರಾಷ್ಟ್ರ ಭಾರತವನ್ನು  ಹೊಗಳುತ್ತಿರುವ ಅದ್ನಾನ್ ಸಮಿ ಕೂಡ ಶತ್ರುವೇ ಎಂಬ ಧಾಟಿಯಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಅದ್ನಾನ್ ಸಮಿ ಟ್ವೀಟ್ ಪಾಕಿಸ್ತಾನ ಮಾಧ್ಯಮಗಳಲ್ಲಿಯೂ ವ್ಯಾಪಕ ಚರ್ಚೆಗೆ ಕಾರಣವಾಗುತ್ತಿದ್ದು,  ಪಾಕಿಸ್ತಾನದಲ್ಲಿ ಜನಿಸಿದ ಅದ್ನಾನ್ ಸಮಿ ಹೀಗೆ ಶತ್ರುರಾಷ್ಟ್ರವನ್ನು ಹೊಗಳುತ್ತಿರುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಆದರೆ ಪಾಕಿಸ್ತಾನದಲ್ಲಿ ತಮ್ಮ ವಿರುದ್ಧ ವ್ಯಕ್ತವಾಗುತ್ತಿರುವ ವ್ಯಾಪಕ ವಿರೋಧಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಗಾಯಕ ಅದ್ನಾನ್ ಸಮಿ ಅದೇ ಧಾಟಿಯಲ್ಲಿ ವಿರೋಧಿಗಳಿಗೆ ತಿರುಗೇಟು  ನೀಡಿದ್ದು, ತಮ್ಮನ್ನು ವಿರೋಧಿಸುತ್ತಿರುವವರು ಪಾಕಿಸ್ತಾನ ಹಾಗೂ ಭಯೋತ್ಪಾದನೆ ಎರಡನ್ನೂ ಒಂದೇ ಎಂದು ತಿಳಿದಿದ್ದಾರೆ. ಹೀಗಾಗಿ ಭಯೋತ್ಪಾದನೆ ವಿರೋಧಿಸಿ ತಾವು ಮಾಡಿದ್ದ ಟ್ವೀಟ್  ಅನ್ನು ದೇಶ ವಿರೋಧಿ ಟ್ವೀಟ್ ಎಂದು ಪರಿಗಣಿಸಿದ್ದಾರೆ ಎಂದು ಸಮಿ ಮತ್ತೆ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT