ಸಂಗ್ರಹ ಚಿತ್ರ 
ವಿದೇಶ

ಅಮೆರಿಕ ಪಾಲಿಗೆ ಆಫ್ಘಾನಿಸ್ತಾನ ಕಬರಿಸ್ಥಾನವಾಗಲಿದೆ: ಡೊನಾಲ್ಡ್ ಟ್ರಂಪ್ ಗೆ ತಾಲಿಬಾನ್ ಎಚ್ಚರಿಕೆ

ಆಫ್ಘಾನಿಸ್ತಾನಕ್ಕೆ ಅಮೆರಿಕ ಸರ್ಕಾರ ಹೆಚ್ಚುವರಿ ಸೇನಾಪಡೆಗಳನ್ನು ರವಾನಿಸುವ ಮೂಲಕ ಆಫ್ಘಾನಿಸ್ತಾನವನ್ನು ತನ್ನ ಸೈನಿಕರ ಕಬರಿಸ್ಥಾನವನ್ನಾಗಿಸಿಕೊಳ್ಳುತ್ತದೆ ಎಂದು ತಾಲಿಬಾನ್ ಉಗ್ರ ಸಂಘಟನೆ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ.

ಕಾಬುಲ್: ಆಫ್ಘಾನಿಸ್ತಾನಕ್ಕೆ ಅಮೆರಿಕ ಸರ್ಕಾರ ಹೆಚ್ಚುವರಿ ಸೇನಾಪಡೆಗಳನ್ನು ರವಾನಿಸುವ ಮೂಲಕ ಆಫ್ಘಾನಿಸ್ತಾನವನ್ನು ತನ್ನ ಸೈನಿಕರ ಕಬರಿಸ್ಥಾನವನ್ನಾಗಿಸಿಕೊಳ್ಳುತ್ತದೆ ಎಂದು ತಾಲಿಬಾನ್ ಉಗ್ರ ಸಂಘಟನೆ ಅಮೆರಿಕಕ್ಕೆ ಎಚ್ಚರಿಕೆ ನೀಡಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸರ್ಕಾರದ ದಕ್ಷಿಣ ಏಷ್ಯಾ ಬಗೆಗಿನ ನೂತನ ಭದ್ರತಾ ನೀತಿಯನ್ನು ಪ್ರಕಟಿಸಿದ ಬೆನ್ನಲ್ಲೇ ಅಮೆರಿಕಕ್ಕೆ ಎಚ್ಚರಿಕೆ ನೀಡಿರುವ ತಾಲಿಬಾನ್, ಆಫ್ಘಾನಿಸ್ತಾನಕ್ಕೆ ಹೆಚ್ಚುವರಿ ಸೈನಿಕರನ್ನು  ರವಾನೆ ಮಾಡುವ ಮೂಲಕ ಅಮೆರಿಕ ತನ್ನ ಸೈನಿಕರ ಸಮಾಧಿಯನ್ನು ಅಮೆರಿಕದಲ್ಲಿ ಸೃಷ್ಟಿ ಮಾಡುತ್ತಿದೆ ಎಂದು ಕಿಡಿಕಾರಿದೆ. ಇದೇ ವೇಳೆ ಎಷ್ಟೇ ಸೈನಿಕರು ಆಫ್ಘಾನಿಸ್ತಾನಕ್ಕೆ ಆಗಮಿಸಿದರೂ ಅವರು ತಾಲಿಬಾನ್ ಹೋರಾಟಗಾರರ  ಕೈಯಲ್ಲಿ ಹತರಾಗುತ್ತಾರೆ ಎಂದು ಎಚ್ಚರಿಕೆ ನೀಡಿದೆ.

ಈ ಬಗ್ಗೆ ಮಾತನಾಡಿರುವ ತಾಲಿಬಾನ್ ಉಗ್ರ ಸಂಘಟನೆಯ ವಕ್ತಾರ ಝೈಬುಲ್ಲಾ ಮುಜಾಹಿದ್‌, ಅಫ್ಘಾನಿಸ್ಥಾನದಿಂದ ಅಮೆರಿಕ ತನ್ನ ಸೇನೆಯನ್ನು ಹಿಂದೆಗೆಯದಿದ್ದರೆ ಅಫ್ಘಾನಿಸ್ಥಾನವು 21ನೇ ಶತಮಾನದ ಸೂಪರ್‌ ಪವರ್‌  ಎನಿಸಿರುವ ಅಮೆರಿಕದ ಪಾಲಿಗೆ ಕಬರಿಸ್ಥಾನವಾಗಲಿದೆ. ಆಫ್ಘಾನಿಸ್ಥಾನದಲ್ಲಿರುವ ಪ್ರತೀಯೊಬ್ಬ ಅಮೆರಿಕ ಸೈನಿಕ ಕೂಡ ಇಲ್ಲೇ ಸಮಾಧಿ ಸೇರುತ್ತಾನೆ. ಹೀಗಾಗಿ ಅಫ್ಘಾನಿಸ್ಥಾನದಲ್ಲಿ ಯುದ್ಧವನ್ನು ಮುಂದುವರಿಸುವ ಬದಲು ಅಮೆರಿಕ  ಇಲ್ಲಿಂದ ತನ್ನ ಸೇನೆಯನ್ನು ಹಿಂದೆಗೆಯುವ ಕ್ರಮ ಕೈಗೊಳ್ಳಬೇಕು. ನಮ್ಮ ನೆಲದಲ್ಲಿ ಅಮೆರಿಕನ್‌ ಸೈನಿಕರು ಇರುವಷ್ಟು ಕಾಲ ಮತ್ತು ಅವರು ನಮ್ಮ ಮೇಲೆ ಯುದ್ಧವನ್ನು ಹೇರುವ ತನಕ ನಾವು ಅತ್ಯುನ್ನತ ನೈತಿಕ ಸ್ಥೈರ್ಯದೊಂದಿಗೆ  ಜಿಹಾದ್‌ ಮುಂದುವರಿಸುತ್ತೇವೆ ಎಂದು ಝೈಬುಲ್ಲಾ ಗುಡುಗಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಗಳಿವೆ; ಯಾರ ಒತ್ತಡಕ್ಕೆ ಒಳಗಾಗಿ Congress ಮರ್ಯಾದೆ ತೆಗೆಯುತ್ತಿದ್ದೀರಾ? ಚಿದಂಬರಂ ವಿರುದ್ಧ ಹೈಕಮಾಂಡ್ ಗರಂ!

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

SCROLL FOR NEXT