ಚೀನಾ ವಿದೇಶಾಂಗ ಸಚಿವ ವಾಂಗ್ ಯಿ 
ವಿದೇಶ

ಡೋಕ್ಲಾಮ್ ವಿವಾದ ಭಾರತಕ್ಕೊಂದು ಪಾಠ: ಚೀನಾ

73 ದಿನಗಳ ಕಾಲ ಉಭಯ ರಾಷ್ಟ್ರಗಳ ನಡುವೆ ಸಮರದ ವಾತಾವರಣವನ್ನು ನಿರ್ಮಾಣ ಮಾಡಿದ್ದ ಡೋಕ್ಲಾಮ್ ವಿವಾದ ಭಾರತಕ್ಕೆ ಒಂದು ಪಾಠವಾಗಿದೆ ಚೀನಾ ಬುಧವಾರ ಹೇಳಿಕೊಂಡಿದೆ...

ಬೀಜಿಂಗ್: 73 ದಿನಗಳ ಕಾಲ ಉಭಯ ರಾಷ್ಟ್ರಗಳ ನಡುವೆ ಸಮರದ ವಾತಾವರಣವನ್ನು ನಿರ್ಮಾಣ ಮಾಡಿದ್ದ ಡೋಕ್ಲಾಮ್ ವಿವಾದ ಭಾರತಕ್ಕೆ ಒಂದು ಪಾಠವಾಗಿದೆ ಚೀನಾ ಬುಧವಾರ ಹೇಳಿಕೊಂಡಿದೆ. 
ಉಭಯ ರಾಷ್ಟ್ರಗಳ ನಡುವೆ ವಾಕ್ಸಮರ ಹಾಗೂ ಸೇನಾ ಮುಖಾಮುಖಿಗೆ ಕಾರಣವಾಗಿದ್ದ ಡೋಕ್ಲಾಮ್ ವಿವಾದ ಸುಖಾಂತ್ಯ ಕಂಡಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರು, ಭಾರತೀಯ ಸೇನೆ ಅತಿಕ್ರಮಣದಿಂದ ಗಡಿಯಲ್ಲಿ ಉಂಟಾಗಿದ್ದ ಪ್ರಕ್ಷುಬ್ದ ವಾತಾವರಣ ಇದೀಗ ಸ್ಥಿರಕ್ಕೆ ಬಂದಿದೆ ಎಂದು ಹೇಳಿದ್ದಾರೆ. 
ಉಭಯ ರಾಷ್ಟ್ರಗಳ ಸೇನೆ ಹಿಂದಕ್ಕೆ ಸರಿದಿದ್ದು, ವಿವಾದ ಅಂತ್ಯಕಂಡಿದೆ. ಡೋಕ್ಲಾಮ್ ವಿವಾದದಿಂದ ಭಾರತ ಪಾಠ ಕಲಿತುಕೊಂಡಿದ್ದು, ಮತ್ತೆಂದೂ ಈ ರೀತಿಯ ವರ್ತನೆಗಳನ್ನು ತೋರುವುದಿಲ್ಲ ಎಂದು ನಾವು ನಂಬಿದ್ದೇವೆಂದು ತಿಳಿಸಿದ್ದಾರೆ. 
ಚೀನಾ ವಿದೇಶಾಂಗ ಸಚಿವ ನೀಡಿರುವ ಹೇಳಿಕೆ ಕುರಿತಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನೀಡಿಲ್ಲ. 
ಸುಧೀರ್ಘ 2 ತಿಂಗಳಿಗೂ ಅಧಿಕ ಕಾಲ ನಡೆದ ಭಾರತ-ಚೀನೀ ಸೈನಿಕರ ಸಂಘರ್ಷಕ್ಕೆ ಉಭಯ ದೇಶಗಳ ಸರ್ಕಾರಗಳು ದಿನಗಳ ಹಿಂದಷ್ಟೇ ತಾರ್ಕಿಕ ಅಂತ್ಯ ನೀಡಿತ್ತು. 
ಈ ಹಿಂದೆ ಲಡಾಖ್ ನಲ್ಲಿ ಭಾರತೀಯ ಸೈನಿಕರ ಮೇಲೆ ಚೀನೀ ಸೈನಿಕರು ಹಲ್ಲೆ ಮಾಡಿತ್ತಲ್ಲದೇ ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ ಹಲವು ಸೈನಿಕರು ಗಾಯಗೊಂಡಿದ್ದರು. ಈ ವಿಡಿಯೋ ವ್ಯಾಪಕ ವೈರಲ್ ಆಗಿತ್ತು. ಈ ವಿಡಿಯೋ ಸಂಬಂಧ ವಿಶ್ವ ಸಮುದಾಯ ಸಮಸ್ಯೆ ಸಂಧಾನದ ಮೂಲಕ ಸಮಸ್ಯೆ  ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ್ದವು. ಬಳಿಕ ಭಾರತ ಸರ್ಕಾರ ರಾಜತಾಂತ್ರಿಕ ಮಾರ್ಗ ಮೂಲಕವೇ ವಿವಾದವನ್ನು ಬಗೆಹರಿಸಲು ಯತ್ನ ನಡೆಸಿತ್ತು. ಈ ಯತ್ನ ಯಶಸ್ಸು ಕಂಡಿತ್ತು. ಉಭಯ ರಾಷ್ಟ್ರಗಳು ಏಕಕಾಲದಲ್ಲಿ ವಿವಾದಿತ ಗಡಿ ಪ್ರದೇಶದಿಂದ ತಮ್ಮ ತಮ್ಮ ಸೇನೆಗಳನ್ನು ಹಿಂದಕ್ಕೆ ಕರೆಸಿಕೊಂಡಿತ್ತು. 
ಒಂದೆಡೆ ಕೇಂದ್ರ ಸರ್ಕಾರದ ರಾಜತಾಂತ್ರಿಕ ಸಂಧಾನದ ಫಲವಾಗಿ ಚೀನಾ ತನ್ನ ಸೇನೆಯನ್ನು ವಾಪಸ್ ಕರೆಸಿಕೊಂಡಿದೆ ಎಂದು ವರದಿ ಬಿತ್ತರವಾಗುತ್ತಿದ್ದರೆ ಮತ್ತೊಂದೆಡೆ ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್ ತನ್ನ ವೈಬ್ ಸೈಟಿನಲ್ಲಿ ಭಾರತ ಸರ್ಕಾರ ತನ್ನ ಸೇನೆಯನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿದೆ ಎಂದು ವರದಿ ಮಾಡಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

BBMPಯಲ್ಲಿ ಭ್ರಷ್ಟಾಚಾರ: ನಾಗಮೋಹನ ದಾಸ್ ಆಯೋಗದಿಂದ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಕೆ

7 ವರ್ಷಗಳ ನಂತರ ಚೀನಾಗೆ ಆಗಮಿಸಿದ ಮೋದಿ; ಟಿಯಾಂಜಿನ್‌ನಲ್ಲಿ ಭಾರತ ಪ್ರಧಾನಿಗೆ ಭವ್ಯ ಸ್ವಾಗತ

ನಿಜ ಜೀವನದಲ್ಲಿ 'ಜಬ್ ವಿ ಮೆಟ್': ಪ್ರಿಯಕರನ ಮದುವೆಯಾಗಲು ಮನೆ ಬಿಟ್ಟು ಹೋದ ಯುವತಿ, ಮತ್ತೊಬ್ಬನೊಂದಿಗೆ ವಾಪಸ್!

Rahul Gandhi ವಿರುದ್ಧದ ದ್ವಿಪೌರತ್ವ ಪ್ರಕರಣ: ಬಿಜೆಪಿ ಕಾರ್ಯಕರ್ತನಿಗೆ ಭದ್ರತೆ ಒದಗಿಸಲು ಅಲಹಾಬಾದ್ ಹೈಕೊರ್ಟ್ ಸೂಚನೆ

ಭಾರತ ಇನ್ನು ಮುಂದೆ ಕೇವಲ ರಕ್ಷಣಾ ಖರೀದಿದಾರನಲ್ಲ, ರಫ್ತುದಾರ; ಜಗತ್ತು ನಮ್ಮ ಸ್ವಾವಲಂಬನೆಯನ್ನು ಗಮನಿಸುತ್ತಿದೆ: ರಾಜನಾಥ್ ಸಿಂಗ್

SCROLL FOR NEXT