ಕುಲಭೂಷಣ್ ಜಾಧವ್ ಪತ್ನಿ ಧರಿಸಿದ್ದ ಶೂಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳಿಸಿದ ಪಾಕ್! 
ವಿದೇಶ

ಕುಲಭೂಷಣ್ ಜಾಧವ್ ಪತ್ನಿ ಧರಿಸಿದ್ದ ಶೂಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳಿಸಿದ ಪಾಕ್!

ಕುಲಭೂಷಣ್ ಜಾಧವ್ ಪತ್ನಿ ಧರಿಸಿದ್ದ ಬೂಟುಗಳಲ್ಲಿ ಯಾವುದೇ ಅಪಾಯಕಾರಿ ಅಂಶಗಳು ಇರಬಹುದೆಂದು ಶಂಕೆಯಿಂದ ಅದನ್ನು ವಿಧಿವಿಜ್ಞಾನ ಪರಿಕ್ಷೆಗಾಗಿ ಕಳಿಸಿಕೊಡಲಾಗಿತ್ತು ಎನ್ನುವ ವಿಚಾರವನ್ನು.......

ಇಸ್ಲಾಮಾಬಾದ್: ಕುಲಭೂಷಣ್ ಜಾಧವ್ ಪತ್ನಿ ಧರಿಸಿದ್ದ ಬೂಟುಗಳಲ್ಲಿ ಯಾವುದೇ ಅಪಾಯಕಾರಿ ಅಂಶಗಳು ಇರಬಹುದೆಂದು ಶಂಕೆಯಿಂದ ಅದನ್ನು ವಿಧಿವಿಜ್ಞಾನ ಪರಿಕ್ಷೆಗಾಗಿ ಕಳಿಸಿಕೊಡಲಾಗಿತ್ತು ಎನ್ನುವ ವಿಚಾರವನ್ನು ಮಾದ್ಯಮ ವರದಿಯೊಂದು ಬಹಿರಂಗಪಡಿಸಿದೆ. 
ಬೂಟಿನಲ್ಲಿ "ಲೋಹದ ವಸ್ತು" ಕ್ಯಾಮರಾ ಅಥವಾ ರೆಕಾರ್ಡಿಂಗ್ ಚಿಪ್ ಏನಾದರೂ ಇತ್ತೆ ಎನ್ನುವುದನ್ನು ಪರೀಕ್ಷಿಸಲು ಅಧಿಕಾರಿಗಳು ಅದನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳಿಸಲಾಗಿತ್ತು ಎಂದು ಪಾಕಿಸ್ತಾನದ  ವಿದೇಶಾಂಗ ಕಛೇರಿ (ಎಫ್ಒ) ವಕ್ತಾರ ಮೊಹಮ್ಮದ್ ಫೈಸಲ್ ಹೇಳಿದ್ದಾರೆ ಎಂದು 'ಪಾಕಿಸ್ತಾನ ಟುಡೆ' ವರದಿ ಮಾಡಿದೆ.
ಇಸ್ಲಾಮಾಬಾದ್ ನ ವಿದೇಶಾಂಗ ಕಛೇರಿಯಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ಖೈದಿಯನ್ನು ಭೇಟಿ ಮಾಡುವ ಮೊದಲು ಭದ್ರತಾ ಅಧಿಕಾರಿಗಳು ಜಾದವ್ ಅವರ ಪತ್ನಿ ಧರಿಸಿದ್ದ ಬೂಟುಗಳಲ್ಲಿ "ಲೋಹದ ವಸ್ತುವನ್ನು" ಪತ್ತೆಹಚ್ಚಲಾಗಿದೆ ಎಂದು ವಿದೇಶಾಂಗ ಕಛೇರಿ ದೃಢಪಡಿಸಿದೆ ಎಂದು ಡಾನ್ ಒಂದು ಪ್ರತ್ಯೇಕ ವರದಿಯಲ್ಲಿ ಹೇಳಿದೆ. ಜಾಧವ್ ಅವರ ಪತ್ನಿಯ ಬೂಟುಗಳನ್ನು ತಪಾಸಣೆಗಾಗಿ ತೆಗೆದುಕೊಂಡ ವೇಳೆ ಅವರಿಗೆ ಪರ್ಯಾಯ ಪಾದರಕ್ಷೆಗಳನ್ನು ನೀಡಲಾಗಿತ್ತು. ಇನ್ನು ಆಕೆ ಧರಿಸಿದ್ದ ಆಭರಣಗಳು ಸೇರಿದಂತೆ ಎಲ್ಲಾ ಇತರ ವಸ್ತುಗಳನ್ನೂ ಹಿಂತಿರುಗಿಸಲಾಗಿದೆ.
ಕಳೆದ ರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಪಾಕ್ ವಿದೇಶಾಂಗ ಸಚಿವಾಲಯವು ಬೂಟುಗಳಲ್ಲಿ "ಲೋಹದ ವಸ್ತು" ಇರುವ ಬಗೆಗೆ ಉಲ್ಲೇಖಿಸಿಲ್ಲ ಬದಲಿಗೆ ಅದರಲ್ಲಿ "ಯಾವುದೋ ವಸ್ತು" ಇತ್ತೆಂದಷ್ಟೇ ಹೇಳಿದ್ದರು.  ಪಾಕಿಸ್ತಾನ ಅಧಿಕಾರಿಗಳು ಜಾಧವ್ ಅವರ ಹೆಂಡತಿ ಮತ್ತು ತಾಯಿಗೆ ಕಿರುಕುಳ ನಿಡಿದ್ದಾರೆ ಎನ್ನುವ ಭಾರತದ ಹೇಳಿಕೆ ಆಧಾರರಹಿತವಾಗಿದೆ. ಪತ್ನಿ ಧರಿಸಿದ್ದ ಬುಟು ಹಾಗೂ ಆಭರಣಗಳನ್ನು ಪರೀಕ್ಷೆಗಾಗಿ ತೆಗೆದುಕೊಳ್ಳಲಾಗಿತ್ತು. ಅದರಲ್ಲಿ ಬೂಟಿನಲ್ಲಿ "ಯಾವುದೋ ವಸ್ತು" ಪತ್ತೆಯಾಗಿತ್ತು ಎಂದು ಪಾಕಿಸ್ತಾನ ವಿದೇಶಂಗ ಕಛೇರಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT