ದಾಳಿಗೊಳಗಾದ ಐತಿಹಾಸಿಕ ಮಸೀದಿ 
ವಿದೇಶ

ಬಗ್ದಾದಿಗೆ ಖಲೀಫಾ ಪಟ್ ಟನೀಡಿದ್ದ ಐತಿಹಾಸಿಕ ಮಸೀದಿ ಧ್ವಂಸಗೊಳಿಸಿದ ಇಸಿಸ್!

ಮತ್ತೊಂದು ಐತಿಹಾಸಿಕ ಮಸೀದಿ ಇಸ್ಲಾಮಿಕ್ ಉಗ್ರರ ಕುಕೃತ್ಯಕ್ಕೆ ಬಲಿಯಾಗಿದ್ದು, ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಮುಖ್ಯಸ್ಥ ಬಗ್ದಾದಿಗೆ ಖಲೀಫಾ ಪಟ್ಟ ನೀಡಿದ್ದ ಪ್ರಸಿದ್ಧ ಅಲ್‌-ನೂರಿ ಮಸೀದಿಯನ್ನು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳು ಧ್ವಂಸಗೊಳಿಸಿದ್ದಾರೆ.

ಮೊಸುಲ್: ಮತ್ತೊಂದು ಐತಿಹಾಸಿಕ ಮಸೀದಿ ಇಸ್ಲಾಮಿಕ್ ಉಗ್ರರ ಕುಕೃತ್ಯಕ್ಕೆ ಬಲಿಯಾಗಿದ್ದು, ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಮುಖ್ಯಸ್ಥ ಬಗ್ದಾದಿಗೆ ಖಲೀಫಾ ಪಟ್ಟ ನೀಡಿದ್ದ ಪ್ರಸಿದ್ಧ ಅಲ್‌-ನೂರಿ ಮಸೀದಿಯನ್ನು ಇಸ್ಲಾಮಿಕ್  ಸ್ಟೇಟ್ ಉಗ್ರಗಾಮಿಗಳು ಧ್ವಂಸಗೊಳಿಸಿದ್ದಾರೆ.

12ನೇ ಶತಮಾನಕ್ಕೆ ಸೇರಿದೆ ಎನ್ನಲಾದ ಮತ್ತು ಐತಿಹಾಸಿಕ ಹಿನ್ನಲೆಯುಳ್ಳ ಮೊಸುಲ್ ನಗರದ ಪ್ರಸಿದ್ಧ ಅಲ್‌-ನೂರಿ ಮಸೀದಿಯನ್ನು ಉಗ್ರರು ಧ್ವಂಸಗೊಳಿಸಿದ್ದು, ಉಗ್ರರ ದಾಳಿಯಿಂದಾಗಿ ಮಸೀದಿಯ ಅಲ್‌-ಹಬ್ದಾ ಎಂಬ ಖ್ಯಾತಿಯ  ಸ್ಥಂಬವೂ ನಾಶವಾಗಿದೆ ಎಂದು ತಿಳಿದುಬಂದಿದೆ. ಬುಧವಾರ ರಾತ್ರಿ ಕಟ್ಟಡದೊಳಗೆ ಬಾಂಬ್‌ ಇರಿಸಿ ಸ್ಫೋಟ ಮಾಡಲಾಗಿದೆ ಎಂದು ಇರಾಕ್‌ ನ ರಕ್ಷಣಾ ಸಚಿವಾಲಯ ತಿಳಿಸಿವೆ.

ಮಧ್ಯಕಾಲದಲ್ಲಿ ನಿರ್ಮಾಣಗೊಂಡಿದ್ದ ಈ ಮಸೀದಿಗೆ 800 ವರ್ಷಗಳ ಇತಿಹಾಸವಿದ್ದು, ಈ ಮಸೀದಿ ಇರಾಕ್ ದೇಶದ ಐತಿಹಾಸಿಕ ಪುರಾತನ ಸ್ಥಳಗಳಲ್ಲೊಂದಾಗಿತ್ತು. ಅಲ್-ಹದ್ಬ (ಗೂನು ಬೆನ್ನು) ಎಂಬ ಹೆಸರಿನ ಈ ಪ್ರಾಚೀನ  ಮಿನಾರೆಟ್ ಅನ್ನು 1172ರಲ್ಲಿ ನಿರ್ಮಿಸಲಾಗಿತ್ತು ಹಾಗೂ ಅದು ಮೋಸುಲ್ ನಗರದ ಪ್ರಮುಖ ಆಕರ್ಷಣೆಯಾಗಿತ್ತು. ಇಟಲಿಯ ಪೀಸಾ ಗೋಪುರದಂತೆ ಇಲ್ಲಿನ ಮಿನಾರ್‌ ಕೂಡ ಜಗತ್ ಪ್ರಸಿದ್ಧಿ ಪಡೆದಿತ್ತು. 2014 ರಲ್ಲೇ ಉಗ್ರರು ಈ  ಮಸೀದಿ ಧ್ವಂಸಕ್ಕೆ ಮುಂದಾಗಿದ್ದರು. ಇಸ್ಲಾಮ್‌ ನ ಮೂಲಭೂತ ಸಿದ್ಧಾಂತಕ್ಕನುಗುಣವಾಗಿ ಕಟ್ಟಡದ ವಿನ್ಯಾಸವಿಲ್ಲವೆಂಬುದು ಅವರ ವಾದವಾಗಿತ್ತು. ಆದರೆ ಸ್ಥಳೀಯ ನಿವಾಸಿಗಳು ಆ ಸಂದರ್ಭ ಮಾನವ ಸರಪಳಿ ನಿರ್ಮಿಸಿ, ಮಸೀದಿ  ಧ್ವಂಸ ತಡೆದಿದ್ದರು.

ಇರಾಕ್ ಸೇನೆ ತಡೆಯಲು ಸ್ಫೋಟ
ಇನ್ನು ಸ್ಫೋಟ ಸಂಭವಿಸಿದ ಸಂದರ್ಭದಲ್ಲಿ ಇರಾಕ್ ಸೇನೆ ಕೇವಲ 50 ಮೀಟರ್ ದೂರದಲ್ಲಿತ್ತು. ಅವರ ದಾಳಿ ತಡೆಯಲೆಂದೇ ಈ ಸ್ಫೋಟ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಮಸೀದಿ ಸ್ಫೋಟವನ್ನು ಅಮೆರಿಕ ಮೇಲೆ  ತಳ್ಳಿರುವ ಇಸಿಸ್ ಆಮೆರಿಕವೇ ತನ್ನ ಯುದ್ಧ ವಿಮಾನದ ಮೂಲಕ ಮಸೀದಿಯನ್ನು ಸ್ಫೋಟಿಸಿದೆ ಎಂದು ಆರೋಪಿಸಿದೆ. ಆದರೆ ಈ ಆರೋಪವನ್ನು ತಳ್ಳಿ ಹಾಕಿರುವ ಅಮೆರಿಕ, ಈ ಕುಕೃತ್ಯ ಎಸಗಿರುವುದು ಐಎಸ್ ಎಂಬುದರಲ್ಲಿ  ಅನುಮಾನವೇ ಬೇಡ. ಮೊಸುಲ್ ಮತ್ತು ಇರಾಕ್ ಜನರ ಮೇಲಿನ ದಾಳಿ ಇದು ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕ್ಸಿ ಜಿನ್‌ಪಿಂಗ್ ಜತೆ ಮಾತುಕತೆ: ಗಡಿಯಾಚೆಗಿನ ಭಯೋತ್ಪಾದನೆ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪ

ಜನರನ್ನು ಮೂರ್ಖರನ್ನಾಗಿಸುವವನೇ ಶ್ರೇಷ್ಠ ನಾಯಕ: ಕೇಂದ್ರ ಸಚಿವ ನಿತಿನ್ ಗಡ್ಕರಿ

ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುವ 'ಎಜುಕೇಟ್ ಗರ್ಲ್ಸ್' NGOಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ

Rain Alert: ರಾಜ್ಯಾದ್ಯಂತ ಮುಂದಿನ 5 ದಿನ ಭಾರಿ ಮಳೆ; ಬೆಂಗಳೂರು, ಕರಾವಳಿ ಕರ್ನಾಟಕಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ!

ಬೆಂಗಳೂರು: ಪಿಜಿಯಲ್ಲಿ ಮಲಗಿದ್ದ ಯುವತಿಗೆ ಲೈಂಗಿಕ ಕಿರುಕುಳ, ನಗದು ದೋಚಿ ಪರಾರಿ!

SCROLL FOR NEXT