ದಲೈ ಲಾಮ 
ವಿದೇಶ

ಚೀನಾ ತೀವ್ರವಾದಿಗಳ ಮೆದುಳಿನ ಕೆಲ ಭಾಗಗಳು ಕಾಣೆಯಾಗಿವೆ: ದಲೈ ಲಾಮ

ಚೀನಾ ತೀವ್ರವಾದಿಗಳ ಬಗ್ಗೆ ಬೌದ್ಧ ಧರ್ಮಗುರು ದಲೈ ಲಾಮ ಅಸಮಾಧಾನ ವ್ಯಕ್ತಪಡಿಸಿದ್ದು, ತೀವ್ರವಾದಿಗಳ ಮೆದುಳಿನ ಕೆಲ ಭಾಗಗಳು ಕಾಣೆಯಾಗಿವೆ ಎಂದು ದಲೈ ಲಾಮ ಹೇಳಿದ್ದಾರೆ.

ಬೀಜಿಂಗ್: ಚೀನಾ ತೀವ್ರವಾದಿಗಳ ಬಗ್ಗೆ ಬೌದ್ಧ ಧರ್ಮಗುರು ದಲೈ ಲಾಮ ಅಸಮಾಧಾನ ವ್ಯಕ್ತಪಡಿಸಿದ್ದು, ತೀವ್ರವಾದಿಗಳ ಮೆದುಳಿನ ಕೆಲ ಭಾಗಗಳು ಕಾಣೆಯಾಗಿವೆ ಎಂದು ದಲೈ ಲಾಮ ಹೇಳಿದ್ದಾರೆ. 
ಖಾಸಗಿ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ದಲೈ ಲಾಮ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಟಿಬೆಟ್ ನ ವಿಮೋಚನೆಗಾಗಿ ತಾವು ಹಿಂಸೆಯನ್ನು ಎಂದಿಗೂ ಉತ್ತೇಜಿಸಿಲ್ಲ ಎಂದು ದಲೈ ಲಾಮ ಸ್ಪಷ್ಟಪಡಿಸಿದ್ದು, ಟಿಬೆಟ್ ಗೆ ನಿಜವಾದ, ಸ್ವಾಭಾವಿಕ ಸ್ವಾಯತ್ತತೆ ಸಿಗಬೇಕೆಂದು ಹೇಳಿದ್ದಾರೆ. ಹಿರಿಯ ಲಾಮ ಓರ್ವರ ಆತ್ಮ ಬಾಲಕಾಗಿ ಮರುಜೀವ ಪಡೆದಿದೆ ಎಂದು ಹೇಳಿರುವ ದಲೈ ಲಾಮ, ಚೀನಾ ಈ ಪರಂಪರೆ ಮುಂದುವರಿಯಬೇಕು ಎಂದು ಹೇಳುತ್ತದೆ. ಆದರೆ ಚೀನಾದ ಅಧಿಕೃತ ನಾಸ್ತಿಕ ಕಮ್ಯುನಿಷ್ಟ್ ನಾಯಕರು ದಲೈ ಲಾಮ ಉತ್ತರಾಧಿಕಾರಿಯನ್ನು ನಿರ್ಧರಿಸುವ ಹಕ್ಕು ಹೊಂದಿದ್ದಾರೆ. ನಾನೇ ಕೊನೆಯ ದಲೈ ಲಾಮ ಆಗುವ ಸಾಧ್ಯತೆಯೂ ಇದೆ, ಕೊನೆಯ ದಲೈ ಲಾಮ ಆದರೂ ಸಹ ಸಂತೋಷವೇ ಎಂದು ದಲೈ ಲಾಮ ಹೇಳಿದ್ದಾರೆ. 
ಒಂದು ವೇಳೆ ಚೀನಾ ತನ್ನದೇ ಆದ ಧರ್ಮ ಗುರುವನ್ನು ನೇಮಕ ಮಾಡಿದರೆ..? ಎಂಬ ಪ್ರಶ್ನೆಗೆ ಉತ್ತರಿಸಿರುವ ದಲೈ ಲಾಮ, ಹಾಗೆ ಮಾಡುವುದು ಮೂರ್ಖತನ ನಮ್ಮ ಮೆದುಳಿಗೆ ಸಾಮಾನ್ಯ ಜ್ಞಾನವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿದೆ. ಆದರೆ ಚೀನಾ ತೀವ್ರವಾದಿಗಳ ಮೆದುಳಿನ ಕೆಲ ಭಾಗಗಳು ಕಾಣೆಯಾಗಿವೆ ಎಂದು ದಲೈ ಲಾಮ ಅಭಿಪ್ರಾಯಪಟ್ಟಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನಾನೇ ಲಾಸ್ಟ್, ಇನ್ನು ಇರಾನ್ ನಂಬಲ್ಲ, ಹಾರ್ಮುಜ್ ಅಮೆರಿಕ ನಿಯಂತ್ರದಣದಲ್ಲಿದೆ': Donald Trump

ಡಿಕೆ ಶಿವಕುಮಾರ್ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ: ಮುನಿಯಪ್ಪಗೆ ಸಮಾಜಕಲ್ಯಾಣ, ಜಮೀರ್ – ವಸತಿ ಖಾತೆ?

ಪತ್ನಿ ಮೇಲೆ ಅನುಮಾನ; ಜೆಲಟಿನ್ ಕಡ್ಡಿ ಇಟ್ಟು ಮಾವನ ಮನೆ ಸ್ಫೋಟಿಸಿದ ಅಳಿಯ! ಇಬ್ಬರು ಸಾವು

‘ರಾಂಗ್ ರೂಟ್’ ರಕ್ಕಸ SUVಗೆ ಯೋಧ ಬಲಿ; ಕಾರು ಗುದ್ದಿದ ರಭಸಕ್ಕೆ ಗಾಳಿಯಲ್ಲಿ ಹಾರಿ ಬಿದ್ದ ಸೈನಿಕ, ಸಿಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ

ಮುಂದುವರಿದ ಕೌತುಕ: ಅಮಾವಾಸ್ಯೆ ಕಳೆದ ಬಳಿಕವಷ್ಟೇ ಖಾತೆ ಹಂಚಿಕೆ 'ಗ್ರಹಣ ಮುಕ್ತ'!