ದಾಳಿ ನಡೆದ ಅರೇನಾ ಸ್ಟೇಡಿಯಂ 
ವಿದೇಶ

ಮ್ಯಾಂಚೆಸ್ಟರ್ ಆತ್ಮಾಹುತಿ ಬಾಂಬ್ ದಾಳಿಯ ಹೊಣೆ ಹೊತ್ತ ಇಸ್ಲಾಮಿಕ್ ಸ್ಟೇಟ್

ಇಸ್ಲಾಮಿಕ್ ಸ್ಟೇಟ್ ಆಫ್ ಇರಾನ್ ಮತ್ತು ಸಿರಿಯಾ(ಐಎಸ್ಐಎಸ್) 22 ಮಂದಿಯನ್ನು ಬಲಿ ಪಡೆದ ಮ್ಯಾಂಚೆಸ್ಟರ್​ನ ಅರೇನಾ....

ಮ್ಯಾಂಚೆಸ್ಟರ್: ಇಸ್ಲಾಮಿಕ್ ಸ್ಟೇಟ್ ಆಫ್ ಇರಾನ್ ಮತ್ತು ಸಿರಿಯಾ(ಐಎಸ್ಐಎಸ್) 22 ಮಂದಿಯನ್ನು ಬಲಿ ಪಡೆದ ಮ್ಯಾಂಚೆಸ್ಟರ್​ನ ಅರೇನಾ ಸ್ಟೇಡಿಯಂನ ಉಗ್ರ ದಾಳಿಯ ಹೊಣೆ ಹೊತ್ತುಕೊಂಡಿದೆ. 
ಕಳೆದ ರಾತ್ರಿ ಮ್ಯಾಂಚೆಸ್ಟರ್​ನ ಅರೇನಾ ಸ್ಟೇಡಿಯಂನಲ್ಲಿ ಆತ್ಮಾಹುತಿ ಬಾಂಬ್ ದಾಳಿಕೋರ ತನ್ನನ್ನು ತಾನು ಸ್ಫೋಟಿಸಿಕೊಂಡ ಪರಿಣಾಮ ಮಕ್ಕಳು, ಮಹಿಳೆಯರು ಸೇರಿದಂತೆ ಒಟ್ಟು 22 ಮಂದಿ ಮೃತಪಟ್ಟಿದ್ದು, 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಕಳೆದ 12 ವರ್ಷಗಳಲ್ಲಿ ನಡೆದಿರುವ ಅತಿ ಭೀಕರ ಸ್ಫೋಟ ಇದಾಗಿದೆ.
ಸೋಮವಾರ ರಾತ್ರಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಯುವ ಅಭಿಮಾನಿಗಳೇ ಭಾಗವಹಿಸಿದ್ದರು. ಸ್ಫೋಟ ನಡೆದ ಕೂಡಲೇ ಸ್ಟೇಡಿಯಂ ನಿಂದ ಹೆದರಿ ದಿಕ್ಕಾಪಾಲಾಗಿ ಓಡಿದ್ದರು.
ನನ್ನ ಕತ್ತಿಗೆ ಬಿಸಿ ತಾಕಿತು, ನಾನು ಅಲ್ಲಿ ತಿರುಗಿ ನೋಡಿದಾಗಿ ಎಲ್ಲೆಂದರಲ್ಲಿ ಮನುಷ್ಯರ ಶವಗಳು ಬಿದ್ದಿದ್ದವು ಎಂದು ತಮ್ಮ 17 ವರ್ಷದ ಮೊಮ್ಮಗಳಿಗಾಗಿ ಕಾಯುತ್ತಿದ್ದ ಪ್ರತ್ಯಕ್ಷದರ್ಶಿ ಎಲೆನ್ ಸೆಮಿನೋ ಹೇಳಿದ್ದಾರೆ. 
ಸುಮಾರು 21 ಸಾವಿರ ಮಂದಿ ಕೂರಲು ಈ ಸ್ಟೇಡಿಯಂನಲ್ಲಿ ಅವಕಾಶವಿದೆ. ನಾವು ಕ್ರೀಡಾಂಗಣದಿಂದ ಹೊರಗೆ ಬರುತ್ತಿದ್ದ ಸಂದರ್ಭದಲ್ಲಿ ಭಾರೀ ಸ್ಪೋಟದ ಸದ್ದು ಕೇಳಿಸಿತು. ಅದರ ಬೆನ್ನಲ್ಲೇ ಜನರು ಭಯಭೀತರಾಗಿ ಓಡುತ್ತಿದ್ದರು ಮತ್ತು ಗಾಯಗೊಂಡವರ ನರಳಾಟ ಕೇಳಿ ಬರುತ್ತಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಸ್ಫೋಟದ ರೂವಾರಿ ಆತ್ಮಹತ್ಯಾ ಬಾಂಬರ್ ಕೂಡ ಮೃತಪಟ್ಟಿದ್ದಾನೆ. ಭಯೋತ್ಪಾದಕ ಕೃತ್ಯಕ್ಕೆ ಇಸೀಸ್ ಉಗ್ರ ಸಂಘಟನೆ ಸೇರಿದಂತೆ ಯಾವುದೇ  ಉಗ್ರ ಸಂಘಟನೆ ಹೊಣೆ ಹೊತ್ತಿಲ್ಲ.
ಸ್ಥಳಕ್ಕೆ ಬಂದ ಆಂಬುಲೆನ್ಸ್ ಹಾಗೂ ಬಾಂಬ್ ನಿಷ್ಕ್ರಿಯ ದಳ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿವೆ, ಗಾಯಕಿ ಅರಿಯಾನಾ ಗ್ರಾಂಡೆ ಅವರು ಸುರಕ್ಷಿತವಾಗಿದ್ದಾರೆ. 
ಬ್ರಿಟನ್ ಪ್ರಧಾನಿ ತೆರೇಸಾ ಮೇ ಉಗ್ರರ ದುಷ್ಕೃತ್ಯವನ್ನು ಖಂಡಿಸಿದ್ದು, ತುರ್ತು ಸಭೆಗೆ ಕರೆ ನೀಡಿದ್ದಾರೆ. ಜತೆಗೆ ತಮ್ಮ ಪಕ್ಷದ ಚುನಾವಣಾ ಪ್ರಚಾರವನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಸೂಚಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT