ಸಂಗ್ರಹ ಚಿತ್ರ 
ವಿದೇಶ

'ವಿವಾದಿತ ಗಡಿ ಪ್ರದೇಶದಲ್ಲಿ ಒಬೋರ್ ಯೋಜನೆ': ಭಾರತದ ಬೆನ್ನಿಗೆ ನಿಂತ ಅಮೆರಿಕ

ಚೀನಾಗ ಬಹುಕೋಟಿ ನಿರ್ಮಾಣದ ಒನ್ ಬೆಲ್ಟ್ ಒನ್ ಯೋಜನೆಗೆ ಸಂಬಂಧಿಸಿದಂತೆ ಭಾರತದ ನಿಲುವಿಗೆ ಅಮೆರಿಕ ಬೆಂಬಲ ನೀಡಿದ್ದು, ಒಬೋರ್ ಯೋಜನೆ ವಿವಾದಿತ ಗಡಿ ಪ್ರದೇಶದಲ್ಲಿ ಸಾಗಿದೆ ಎಂದು ತನ್ನ ಅಭಿಪ್ರಾಯವ್ಯಕ್ತಪಡಿಸಿದೆ.

ವಾಷಿಂಗ್ಟನ್: ಚೀನಾಗ ಬಹುಕೋಟಿ ನಿರ್ಮಾಣದ ಒನ್ ಬೆಲ್ಟ್ ಒನ್ ಯೋಜನೆಗೆ ಸಂಬಂಧಿಸಿದಂತೆ ಭಾರತದ ನಿಲುವಿಗೆ ಅಮೆರಿಕ ಬೆಂಬಲ ನೀಡಿದ್ದು, ಒಬೋರ್ ಯೋಜನೆ ವಿವಾದಿತ ಗಡಿ ಪ್ರದೇಶದಲ್ಲಿ ಸಾಗಿದೆ ಎಂದು ತನ್ನ  ಅಭಿಪ್ರಾಯವ್ಯಕ್ತಪಡಿಸಿದೆ.
ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಅವರು, ವಿವಾದಿತ ಗಡಿ ಪ್ರದೇಶದಲ್ಲಿ ಚೀನಾ ದೇಶ ಪಾಕಿಸ್ತಾನದೊಂದಿಗೆ ಕೂಡಿ ಯೋಜನೆ ರೂಪಿಸುವ ಮೂಲಕ ತನ್ನ  ಸರ್ವಾಧಿಕಾರಿ ಧೋರಣೆಯನ್ನು ಬಿಂಬಿಸುತ್ತಿದೆ ಎಂದು ಹೇಳಿದ್ದಾರೆ.

ಕಳೆದ ವಾರವಷ್ಟೇ ಜೇಮ್ಸ್ ಮ್ಯಾಟಿಸ್ ಭಾರತ ಪ್ರವಾಸ ಮಾಡಿ ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಹಲವು ವಿಚಾರಗಳ ಕುರಿತು ಚರ್ಚಿಸಿದ್ದರು. ಬಳಿಕ ಅಮೆರಿಕಕ್ಕೆ ವಾಪಸ್ ಆಗಿದ್ದ ಮ್ಯಾಟಿಸ್  ಭಾರತದ ವಿರೋಧಕ್ಕೆ ಕಾರಣವಾಗಿರುವ ಚೀನಾ ಮತ್ತು ಪಾಕಿಸ್ತಾನ ಸಹಭಾಗಿತ್ವದ ಒನ್ ಬೆಲ್ಟ್ ಒನ್ ರೋಡ್ ಯೋಜನೆ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸೆನೆಟ್ ಆರ್ಮಿಡ್ ಸರ್ವೀಸಸ್ ಕಮಿಟಿ ಸಭೆಯಲ್ಲಿ  ಮಾತನಾಡಿರುವ ಮ್ಯಾಟಿಸ್, ಜಾಗತೀಕರಣಗೊಂಡ ವಿಶ್ವದಲ್ಲಿ ಹಲವು ರಸ್ತೆಗಳು ಹಲವು ಬೆಲ್ಟ್ ಗಳಿವೆ. ಯಾವುದೋ ಒಂದು ದೇಶ ಒನ್ ಬೆಲ್ ಒನ್ ರೋಡ್ ಎಂದು ಘೋಷಣೆ ಮಾಡುವ ಮೂಲಕ ತನ್ನನ್ನು ತಾನು ಸರ್ವಾಧಿಕಾರಿ  ಸ್ಥಾನದಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲ.

ಚೀನಾ ತನ್ನ ಯೋಜನೆಯನ್ನು ವಿವಾದಿತ ಪ್ರದೇಶದಲ್ಲಿ ರೂಪಿಸುವ ಮೂಲಕ ತನ್ನ ಸರ್ವಾಧಾಕಾರಿ ಧೋರಣೆಯನ್ನು ವಿಶ್ವಕ್ಕೇ ತೋರ್ಪಡಿಸುತ್ತಿದೆ ಎಂದು ಮ್ಯಾಟಿಸ್ ಕಿಡಿಕಾರಿದರು. ಅಂತೆಯೇ ಏಷ್ಯಾ ಭಾಗದಲ್ಲಿ ಚೀನಾ ತನ್ನನ್ನು  ತಾನು ಸರ್ವಾಧಿಕಾರಿ ಎಂದು ಬಿಂಬಿಸ ಹೊರಟಿದ್ದು, ಈ ಯೋಜನೆ ಮೂಲಕ ಆ ಭಾಗದಲ್ಲಿ ನಿಯಂತ್ರಣ ಸಾಧಿಸ ಹೊರಟಿದೆ. ಆ ಮೂಲಕ ತನ್ನ ಲಾಭಕ್ಕಾಗಿ ಆ ಭಾಗದ ನೈಸರ್ಗಿಕ ಸಂಪತ್ತನ್ನು ಬಳಕೆ ಮಾಡುವುದು ಚೀನಾದ  ಉದ್ದೇಶವೂ ಆಗಿರಬಹುದು. ಆದರೆ ಇಂತಹ ಕಾರ್ಯಗಳಿಗೆ ಅಮೆರಿಕದ ನೀತಿ ಆಸ್ಪದ ನೀಡುವುದಿಲ್ಲ ಎಂದು ನೇರವಾಗಿಯೇ ಚೀನಾದ ಒನ್ ಬೆಲ್ಟ್ ಒನ್ ರೋಡ್ ಯೋಜನೆಯನ್ನು ಅಮೆರಿಕ ವಿರೋಧಿಸುತ್ತದೆ ಎಂದು ಮ್ಯಾಟಿಸ್  ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT