ದುಬೈ ಯುವರಾಜ ಶೇಖ್ ಹಮ್ದಾನ್ ಬಿನ್ ಮುಹಮ್ಮದ್ 
ವಿದೇಶ

ದೇಶದ ಅರ್ಧದಷ್ಟು ಜನಕ್ಕೆ ಬೊಜ್ಜು: ನಾಗರೀಕರಿಗೆ 30 ದಿನಗಳ ಫಿಟ್ನೆಸ್ ಚಾಲೆಂಜ್ ನೀಡಿದ ದುಬೈ ದೊರೆ

ವಿಶ್ವದಲ್ಲಿಯೇ ಅತ್ಯಂತ ಸಕ್ರಿಯ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು, ಅ.20ರಿಂದ ನ.18ರವರೆಗೆ 30 ದಿನಗಳ ಕಾಲ ದುಬೈ ನಿವಾಸಿಗಳಿಗೆ, ಅಲ್ಲಿನ ಯುವರಾಜ ಶೇಖ್ ಹಮ್ದಾನ್ ಬಿನ್ ಮುಹಮ್ಮದ್ ಒಂದು ಹೊಸ ಟಾರ್ಗೆಟ್' ವೊಂದನ್ನು...

ಅಬುಧಾಜಿ; ವಿಶ್ವದಲ್ಲಿಯೇ ಅತ್ಯಂತ ಸಕ್ರಿಯ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು, ಅ.20ರಿಂದ ನ.18ರವರೆಗೆ 30 ದಿನಗಳ ಕಾಲ ದುಬೈ ನಿವಾಸಿಗಳಿಗೆ, ಅಲ್ಲಿನ ಯುವರಾಜ ಶೇಖ್ ಹಮ್ದಾನ್ ಬಿನ್ ಮುಹಮ್ಮದ್ ಒಂದು ಹೊಸ ಟಾರ್ಗೆಟ್' ವೊಂದನ್ನು ನೀಡಿದ್ದಾರೆ. 
30 ದಿನಗಳ ಕಾಲ ದುಬೈ ನಿವಾಸಿಗಳು ಪ್ರತಿನಿತ್ಯ ಕನಿಷ್ಠ 30 ನಿಮಿಷ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಶೇಖ್ ಹಮ್ದಾನ್ ಬಿನ್ ಮುಹಮ್ಮದ್ ನಿರ್ದೇಶಿಸಿದ್ದಾರೆ. 
ದಿನಕ್ಕೆ ಅರ್ಧ ಗಂಟೆ ನಡೆಯಿರಿ, ಸೈಕಲ್ ಹೊಡೆಯಿರಿ. ಈಜು ಹೊಡೆಯಿರಿ. ಒಟ್ಟಾರೆ ಏನನ್ನಾದರೂ ಮಾಡಿ. ಪ್ರತಿಯೊಬ್ಬ ನಾಗರೀಕರನೂ ಸಕ್ರಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿದ್ದಾರೆ. 
ಸಫಾ ಪಾರ್ಕ್ ನಲ್ಲಿ ಅ.20 ರಂದು ನಡೆಯಲಿರುವ ಉತ್ಸವದಲ್ಲಿ 30*30 ದುಬೈ ಫಿಟ್ನೆಸ್ ಚಾಲೆಂಚ್ ಗೆ ಚಾಲನೆ ದೊರೆಯಲಿದೆ. ಎಲ್ಲಾ ವಯೋಮಾನದ ಜನರನ್ನೂ ಈ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಕಾರ್ಯಕ್ರಮದಲ್ಲಿ ಉತ್ತೇಜಿಸಲಾಗುತ್ತದೆ. 
ಕಾರ್ಪೋರೇಟ್ ಉದ್ಯಮ ಸಂಸ್ಥೆಗಳು, ಶಾಲೆಗಳು, ಸರ್ಕಾರಿ ಸಂಸ್ಥೆಗಳು ಸೇರಿದಂತೆ ದುಬೈ ನಿವಾಸಿಗಳು ಕಚೇರಿ, ಮನೆಗಳಲ್ಲಿ ಅಥವಾ ಯಾವುದೇ ಪ್ರದೇಶದಲ್ಲಿ ಜೊತೆಯಾಗಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂಬುದು ಕಾರ್ಯಕ್ರಮದ ಉದ್ದೇಶ. ಒಂದು ವೇಳೆ ನೀವು ಫಿಟ್ ಆಗಬೇಕು, ಅದಕ್ಕಾಗಿ ಒಂದಷ್ಟು ವರ್ಕ್'ಔಟ್ ಮಾಡಬೇಕೆಂದು ಯೋಚಿಸುತ್ತಿದ್ದರೆ, ಅದನ್ನು ಈಡೇರಿಸಲು ಬದಲಾವಣೆಗೆ ಇಂದೊಂದು ಸುಸಂದರ್ಭ ಎಂದು ಕಾರ್ಯಕ್ರಮದ ಸಂಘಟಕರು ಹೇಳಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ನಡೆಯುವ ವಿವಿಧ ಚಟುವಟಿಕೆಗಳಿಗೆ ಬಹುಮಾನಗಳನ್ನೂ ನಿಗದಿ ಮಾಡಲಾಗಿದೆ. ಆಸಕ್ತರು ದುಬೈ ಫಿಟ್'ನೆಸ್ ಚಾಲೆಂಜ್ ಆ್ಯಪ್ ಮೂಲಕ ತಮ್ಮ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಬಹುದಾಗಿದೆ. 
ಈ ಆ್ಯಪ್ ನಲ್ಲಿ 1,500ಕ್ಕೂ ಅಧಿಕ ಉಚಿತ ತರಬೇತಿ ತರಗತಿಗಳ ಮಾಹಿತಿಯೂ ಲಭ್ಯವಿದ್ದು, ವಿವಿಧ ಫಿಟ್ ನೆಟ್ ಔಟ್'ಲೆಟ್ ಗಳಲ್ಲಿನ ಡಿಸ್ಕೌಂಟ್'ಗಳ ಬಗ್ಗೆ ಮತ್ತು ಅವುಗಳಿಗಿರುವ ಸ್ಥಳಗಳ ಬಗ್ಗೆ ಮಾಹಿತಿಯೂ ದೊರೆಯುತ್ತದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT