ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ 
ವಿದೇಶ

ಯಾವುದೇ ಕ್ಷಣ ಅಣು ಸಮರ ನಡೆಸಬಹುದು; ಮತ್ತೆ ಬೆದರಿಕೆ ಹಾಕಿದ ಉತ್ತರ ಕೊರಿಯಾ

ಪದೇ ಪದೇ ಯುದ್ಧೋತ್ಸಾಹ ತೋರುತ್ತಿರುವ ಉತ್ತರಕೊರಿಯಾ ಮತ್ತೆ ತನ್ನ ಉದ್ಧಟತನವನ್ನು ಪ್ರದರ್ಶಿಸಿದ್ದು, ಕೊರಿಯಾ ಉಪಖಂಡದಲ್ಲಿ ಯಾವುದೇ ಕ್ಷಣ ಕ್ಷಣ ಅಣು ಸಮರ ನಡೆಸಬಹುದು...

ವಿಶ್ವಸಂಸ್ಥೆ: ಪದೇ ಪದೇ ಯುದ್ಧೋತ್ಸಾಹ ತೋರುತ್ತಿರುವ ಉತ್ತರಕೊರಿಯಾ ಮತ್ತೆ ತನ್ನ ಉದ್ಧಟತನವನ್ನು ಪ್ರದರ್ಶಿಸಿದ್ದು, ಕೊರಿಯಾ ಉಪಖಂಡದಲ್ಲಿ ಯಾವುದೇ ಕ್ಷಣ ಕ್ಷಣ ಅಣು ಸಮರ ನಡೆಸಬಹುದು ಎಂದು ಮತ್ತೆ ಬೆದರಿಕೆ ಹಾಕಿದೆ. 

ವಿಶ್ವಸಂಸ್ಥೆಯ ಸಾಮಾನ್ಯ ಮಂಡಳಿ ನಿಶಸ್ತ್ರೀಕರಣ ಸಮಿತಿಗೆ ಉತ್ತರ ಕೊರಿಯಾ ಉಪ ರಾಯಭಾರಿ ಕಿಮ್-ಇನ್-ರಿಯೋಂಗ್ ಅವರು ಈ ರೀತಿಯ ಎಚ್ಚರಿಕೆ ನೀಡಿದ್ದಾರೆಂದು ತಿಳಿದುಬಂದಿದೆ. 

ಸ್ವರಕ್ಷಣೆಗಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವ ಹಕ್ಕು ಉತ್ತರ ಕೊರಿಯಾಗಿದೆ. 1970ರ ಬಳಿಕ ತೆಗೆದುಕೊಂಡಿರುವ ಅತ್ಯಂತ ಗಂಭೀರ ನಿರ್ಣಯ ಇದಾಗಿದ್ದು, ವಿಶ್ವಸಂಸ್ಥೆಯಲ್ಲಿಯೇ ಇಷ್ಟು ನೇರವಾಗಿ ಅಣು ಸಮರದ ಬೆದರಿಕೆ ಹಾಕುತ್ತಿರುವ ವಿನಾಶಕಾರಿ ದೇಶ ಉತ್ತರ ಕೊರಿಯಾ. ಅಣ್ವಸ್ತ್ರ ಬಳಕೆ, ಅಣು ಸಮರಕ್ಕೆ ನಾಂದಿ ಹಾಡಿದರೂ ಅಚ್ಚರಿ ಪಡಬೇಕಾಗಿಲ್ಲ. 

ಉತ್ತರ ಕೊರಿಯಾ ಪ್ರತೀ ವರ್ಷ ದೊಡ್ಡ ಪ್ರಮಾಣ ಸಮಾರಾಭ್ಯಾಸ ನಡೆಸುತ್ತಿದ್ದು, ನಮ್ಮ ಮೇಲುಗೈಯನ್ನು ಹತ್ತಿಕ್ಕಲು ಅಮೆರಿಕ ರಹಸ್ಯ ಕಾರ್ಯಾಚರಣೆಗೆ ಮುಂದಾಗಿದೆ. ಅಮೆರಿಕ ಮುಖ್ಯ ಭೂ ಪ್ರದೇಶಗಳು ನಮ್ಮ ಗುರಿಯಲ್ಲಿದ್ದು, ನಮ್ಮ ಪವಿತ್ರ ಗಡಿಭಾಗದ ಒಂದಿಂಚು ಭೂಮಿಯನ್ನು ಅಮೆರಿಕ ಅತಿಕ್ರಮಣ ಮಾಡುವ ದುಸ್ಸಾಹಸಕ್ಕೆ ಕೈ ಹಾಕಿದರೆ, ತಕ್ಕ ಶಾಸ್ತಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. 

ಇತ್ತೀಚೆಗಷ್ಟೇ ಉತ್ತರ ಕೊರಿಯಾ ಪದೇ ಪದೇ ಪರಮಾಣು ಬಾಂಬ್ ಮತ್ತು ಖಂಡಾಂತರ ಕ್ಷಿಪಣಿಗಳ ಪರೀಕ್ಷೆ ನಡೆಸುತ್ತಿರುವುದು ಇದೀಗ ವಿಶ್ವ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT