ವಿಶ್ವಸಂಸ್ಥೆಯಲ್ಲಿ ಭಾರತವನ್ನು ಟೀಕಿಸುವ ಭರದಲ್ಲಿ ಕಾಶ್ಮೀರ ಬದಲು ಪ್ಯಾಲೆಸ್ತೀನಿ ಮಹಿಳೆಯ ಫೋಟೋ ತೋರಿಸಿದ ಪಾಕಿಸ್ತಾನ 
ವಿದೇಶ

ಫೋಟೋ ನೆಪದಲ್ಲಿ ಭಾರತದ ಪೆಲೆಟ್ ಗನ್ ಬಳಕೆ ಮುಚ್ಚಿಡಲಾಗದು: ಪಾಕಿಸ್ತಾನ

ವಿಶ್ವಸಂಸ್ಥೆಯಲ್ಲಿ ತನ್ನಿಂದಾದ ಫೋಟೋ ಪ್ರಮಾದವನ್ನು ಮುಂದಿಟ್ಟುಕೊಂಡು ಭಾರತೀಯ ಸೇನೆ ಕಾಶ್ಮೀರದಲ್ಲಿ ಪೆಲೆಟ್ ಗನ್ ಬಳಸುತ್ತಿರುವ 'ನಿರ್ವಿವಾದ ವಾಸ್ತವ'ವನ್ನು ಮುಚ್ಚಿಡಲು ಸಾಧ್ಯವಿಲ್ಲ...

ಇಸ್ಲಾಮಾಬಾದ್: ವಿಶ್ವಸಂಸ್ಥೆಯಲ್ಲಿ ತನ್ನಿಂದಾದ ಫೋಟೋ ಪ್ರಮಾದವನ್ನು ಮುಂದಿಟ್ಟುಕೊಂಡು ಭಾರತೀಯ ಸೇನೆ ಕಾಶ್ಮೀರದಲ್ಲಿ ಪೆಲೆಟ್ ಗನ್ ಬಳಸುತ್ತಿರುವ 'ನಿರ್ವಿವಾದ ವಾಸ್ತವ'ವನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಗುರುವಾರ ಹೇಳಿದೆ. 
ಈ ಕುರಿತಂತೆ ಮಾತನಾಡಿರುವ ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಖಾತೆ ವಕ್ತಾರ ನೆಫೆಸ್ ಜಕಾರಿಯಾ ಅವರು, ಕಾಶ್ಮೀರಿಗಳ ಕುರುಡುತನಕ್ಕೆ ಭಾರತೀಯ ಸೇನೆಯೇ ಕಾರಣ ಎಂದು ಆರೋಪಿಸಿದ್ದಾರೆ. 

ಪೆಲೆಟ್ ಗನ್ ಗಳನ್ನು ಬಳಿ ಭಾರತ ಸಾವಿರಾರು ಕಾಶ್ಮೀರಿಗರನ್ನು ಗಾಯಗೊಳಿಸಿದೆ. 80 ಕಾಶ್ಮೀರಿಗರು ಸಂಪೂರ್ಣವಾಗಿ ಕಣ್ಣುಗಳನ್ನು ಕಳೆದುಕೊಂಡಿದ್ದಾರೆ. 200 ಕಾಶ್ಮೀರಿಗರ ಒಂದು ಕಣ್ಣು ಗಾಯಗೊಂಡಿದೆ. ಇದು ನಿರ್ವಿವಾದವಾದ ಸತ್ಯವಾಗಿದದ್ದು, ಈ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ಅಭಿವೃದ್ಧಿ ನೆರವಿನ ಹೆಸರಿನಲ್ಲಿ ಭಾರತ ಆಫ್ಘಾನಿಸ್ತಾನದಲ್ಲಿ  ಸುಲಿಗೆ ಮಾಡುತ್ತಿದ್ದು, ತನ್ನ ದೇಶದ ಮಣ್ಣನ್ನು ಬಳಸಿಕೊಂಡು ಪಾಕಿಸ್ತಾನದೊಳಗೆ ವಿನಾಶಕಾರಿ ಚಟುವಟಿಕೆಗಳನ್ನು ನಡೆಸುತ್ತಿದೆ. 

ಈ ಬಗ್ಗೆ ನಮ್ಮ ಬಳಿ ಸಾಕ್ಷ್ಯಾಧಾರಗಳಿದ್ದು, ಈ ಸಾಕ್ಷ್ಯಗಳನ್ನು ಅಮೆರಿಕ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ಆಫ್ಘಾನಿಸ್ತಾನದ ಅಧಿಕಾರಿಗಳಿಗೆ ನೀಡದ್ದೇವೆಂದು ಜಕಾರಿಯಾ ತಿಳಿಸಿದ್ದಾರೆ. 

ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ಭಾರತವನ್ನು ಟೀಕಿಸುವ ಭರದಲ್ಲಿ ಕಾಶ್ಮೀರ ಬದಲು ಪ್ಯಾಲೆಸ್ತೀನಿ ಮಹಿಳೆಯ ಫೋಟೋ ತೋರಿಸಿದ ಪಾಕಿಸ್ತಾನ ತೀವ್ರ ಮುಖಭಂಗವನ್ನು ಅನುಭವಿಸಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

SCROLL FOR NEXT