ಫೇಸ್ ಬುಕ್ ಸಿಇಒ ಜುಕರ್‌ಬರ್ಗ್‌ 
ವಿದೇಶ

ಕೇಂಬ್ರಿಜ್ ಅನಲಿಟಿಕಾ ಜತೆ ತನ್ನ ಮಾಹಿತಿಯನ್ನೂ ಹಂಚಿಕೊಳ್ಳಲಾಗಿದೆ: ಫೇಸ್ ಬುಕ್ ಸಿಇಒ ಜುಕರ್‌ಬರ್ಗ್‌

ಸಾಮಾಜಿಕ ಮಾದ್ಯಮಗಲಲ್ಲಿ ಉದ್ಯಮಗಳ ನಿಯಂತ್ರಣವಿರುತ್ತದೆ, ಇದು ಅನಿವಾರ್ಯ ಎಂದು ನಾನು ಭಾವಿಸುತ್ತೇನೆ.ಫೆಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ ಹೇಳಿದ್ದಾರೆ.

ವಾಷಿಂಗ್ ಟನ್: ಸಾಮಾಜಿಕ ಮಾದ್ಯಮಗಲಲ್ಲಿ ಉದ್ಯಮಗಳ ನಿಯಂತ್ರಣವಿರುತ್ತದೆ, ಇದು ಅನಿವಾರ್ಯ ಎಂದು ನಾನು ಭಾವಿಸುತ್ತೇನೆ.ಫೆಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌  ಹೇಳಿದ್ದಾರೆ.
ಮೇಲ್ವಿಚಾರಣೆ ಸಮಿತಿ ಎದುರು ಹೇಳಿಕೆ ನಿಡುವ ಸಮಯದಲ್ಲಿ ಜುಕರ್‌ಬರ್ಗ್‌  ಈ ಮಾತು ಹೇಳಿದ್ದು ಮೂರನೇ ಪಕ್ಷಗಳಿಗೆ ಮಾರಾಟವಾದ ವೈಯಕ್ತಿಕ ಮಾಹಿತಿಯಲ್ಲಿ ತನ್ನ ವೈಯುಕ್ತಿಕ ಮಾಹಿತಿಯೂ ಸೇರ್ಪಡೆಯಾಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ.
"ಅಂತರ್ಜಾಲವು ಜನರ ಜೀವನದಲ್ಲಿ ಜಾಗತಿಕ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತದೆ. ಆದರೆ ಕೆಲವೊಂದು ನಿಯಂತ್ರಣಕ್ಕೆ ಒಳಪಡುವುದು ಅನಿವಾರ್ಯವಾಗುತ್ತದೆ. ನಾನು ಯಾವ ನಿಯಂತ್ರಣಕ್ಕೆ ಹೊರತಾದವನೆಂದು ಬಾವಿಸಲಾರೆ. ಆದರೆ ನಿಮ್ಮ ನಿಯಂತ್ರಣಗಳಲ್ಲಿ ನೀವು ಇರಬೇಕು" ಹೌಸ್ ಎನರ್ಜಿ ಹಾಗೂ ವಾಣಿಜ್ಯ ಸಮಿತಿಯ ಮುಂದೆ ಸಾಕ್ಷ್ಯದ ಸಂದರ್ಭದಲ್ಲಿ ಜುಕರ್‌ಬರ್ಗ್‌  ಹೇಳಿದರು.
ಫೇಸ್ ಬುಕ್ ನಂತಹಾ ದೊಡ್ಡ ಸಂಸ್ಥೆಗಳು ಸರ್ಕಾರದ ನಿಯಂತ್ರಣದ ಜತೆಗೆ ಸಾಕಷ್ಟು ಸಂಪನ್ಮೂಲವನ್ನು ಹೊಂದಿದೆ. ಆದರೆ ಇದನ್ನು  ಸಣ್ಣ ಉದ್ಯಮ, ಅಥವಾ ಸ್ಟಾರ್ಟ್ ಅಪ್ ಗಳಿಗೆ ಅಳವಡಿಸಿಕೊಳ್ಳುವುದು ಕಷ್ಟಸಾಧ್ಯವಾಗಲಿದೆ. ಅವರು ಹೇಳಿದರು.
ಎರಡೂ ಪಕ್ಷಗಳಲ್ಲೂ ಕಾನೂನು ಸಮ್ಮತಿಸುವವರು ಫೇಸ್ ಬುಕ್ ಹಾಗು ಇತರ ಟೆಕ್ ಕಂಪೆನಿಗಳ ಸಂಭವನೀಯ ನಿಯಂತ್ರಣವನ್ನು ಗೌಪ್ಯತೆ ಹಗರಣಗಳ ಹಾಗೂ ರಷ್ಯಾದ ಹಸ್ತಕ್ಷೇಪದ ನಡುವೆ ತಾಳೆ ಹಾಕುತ್ತಿದ್ದಾರೆ.ಇದು ಹೇಗೆನ್ನುವುದನ್ನು  ಜುಕರ್‌ಬರ್ಗ್‌  ನಿಶ್ಚಿತವಾಗಿ ವಿವರಿಸಲಿಲ್ಲ.
ಕೇಂಬ್ರಿಜ್ ಅನಲಿಟಿಕಾ ಹಗರಣದ ಬಗ್ಗೆ  ಶಾಸಕರ ಸಮಿತಿಯ ಮುಂದೆ ಜುಕರ್‌ಬರ್ಗ್‌  ರೆಪ್ ಅನ್ನಾ ಇಶೂ, ಡಿ-ಕ್ಯಾಲಿಫ್ ಅವರ ಪ್ರಶ್ನೆಗೆ ಉತ್ತರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT