ಸಾಂದರ್ಭಿಕ ಚಿತ್ರ 
ವಿದೇಶ

ಎನ್ಆರ್‏ಸಿ ವರದಿಗೂ, ಬಾಂಗ್ಲಾ ವಲಸಿಗರಿಗೂ ಸಂಬಂಧವಿಲ್ಲ: ಬಾಂಗ್ಲಾದೇಶ ಸ್ಪಷ್ಟನೆ

ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್‏ಸಿ) ಕುರಿತಂತೆ ದೇಶಾದ್ಯಂತ ಬಾರೀ ಚರ್ಚೆಗಳಾಗುತ್ತಿರುವಾಗಲೇ ನೆರೆ ರಾಷ್ಟ್ರ ಬಾಂಗ್ಲಾದೇಶ ಈ ಸಂಬಂಧ ಪ್ರತಿಕ್ರಿಯೆ ನಿಡಿದೆ.

ಢಾಕಾ: ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್‏ಸಿ) ಕುರಿತಂತೆ ದೇಶಾದ್ಯಂತ ಬಾರೀ ಚರ್ಚೆಗಳಾಗುತ್ತಿರುವಾಗಲೇ ನೆರೆ ರಾಷ್ಟ್ರ ಬಾಂಗ್ಲಾದೇಶ ಈ ಸಂಬಂಧ ಪ್ರತಿಕ್ರಿಯೆ ನಿಡಿದೆ. ಅಕ್ರಮ ವಲಸಿಗರ ಸಮಸ್ಯೆಒಂದಿಗೆ ಈ ಪೌರತ್ವ ನೊಂದಣಿ ವರದಿಯನ್ನು ತಳುಕು ಹಾಕುವುದು ಸರಿಯಲ್ಲ ಎಂದಿದೆ.
ಢಾಕಾದಿಂದ ಎ ಎನ್ ಐ ಸುದ್ದಿಸಂಸ್ಥೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಬಾಂಗ್ಲಾದೇಶ  ಮಾಹಿತಿ ಮತ್ತು ಪ್ರಸಾರ ಸಚಿವ ಹಸನುಲ್ ಹಕ್ ಇನು "ಅಸ್ಸಾಂನ ರಾಜ್ಯದಲ್ಲಿ ಶತಮಾನದಷ್ಟು ಹಳೆಯ ಜನಾಂಗೀಯ ಸಂಘರ್ಷ ಇರುವುದು ಎಲ್ಲರಿಗೆ ತಿಳಿದ ವಿಚಾರವಾಗಿದೆ.ಳೆದ 48 ವರ್ಷಗಳಲ್ಲಿ ಯಾವುದೇ ಭಾರತೀಯ ಸರ್ಕಾರವು ಸಹ ಬಾಂಗ್ಲಾದೇಶದೊಡನೆ ಈ ಅಕ್ರಮ ವಲಸಿಗರ ಕುರಿತ ಸಮಸ್ಯೆಯನ್ನು ಮುನ್ನೆಲೆಗೆ ತಂದಿಲ್ಲ. ದೆಹಲಿಯ ನರೇಂದ್ರ ಮೋದಿ ಸರ್ಕಾರ ಈ ಸಮಸ್ಯೆಯನ್ನು ನ್ಯಾಯೋಚಿತವಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದೆ.ಹೀಗಾಗಿ ಇದಕ್ಕೂ ಬಾಂಗ್ಲಾದೇಶಕ್ಕೂ ಯಾವ ಸಂಬಂಧವಿಲ್ಲ" ಎಂದಿದ್ದಾರೆ.
ಭಾರತದಲ್ಲಿ ನೆಲೆಸಿರುವ ಬಾಂಗ್ಲಾ ವಲಸಿಗರನ್ನು ಹಿಂದಕೆ ಕರೆಸಿಕೊಳ್ಳುವಿರೆ ಎಂದು ಕೇಳಿದಾಗ ಇನು "ಭಾರತ ಇದುವರೆಗೆ ನಮ್ಮೊಂದಿಗೆ ಎನ್ಆರ್‏ಸಿ ವರದಿಯನ್ನು ಹಂಚಿಕೊಂಡಿಲ್ಲ. ಹಗೆಯೇ ಸಮಸ್ಯೆಯನ್ನು ಕುರಿತು ಚರ್ಚಿಸಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಹಾಗೆ ಚರ್ಚೆಗೆ ಆಹ್ವಾನಿಸುವವರೆಗೆ ನಾನು ಅದರ ಕುರಿತು ಮಾತನಾಡಲಾರೆ " ಎಂದಿದ್ದಾರೆ.
ಬಂಗಾಳಿ ಮಾತನಾಡುವ ಪ್ರತಿಯೊಬ್ಬರೂ ಬಾಂಗ್ಲಾದೇಶದೊಂದಿಗೆ ಸಂಪರ್ಕಿಸಬಾರದು ಎಂದು ಅವರು ಹೇಳಿದ್ದಾರೆ.
ಅಸ್ಸಾಂನ ಎನ್ಆರ್‏ಸಿ ಅಂತಿಮ ಕರಡು ಸೋಮವಾರ ಪ್ರಕಟವಾದಂದಿನಿಂದ ರಾಜಕೀಯ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದೆ. ಕರಡಿನಲ್ಲಿ 3.29 ಕೋಟಿ ಅರ್ಜಿದಾರರಲ್ಲಿ ಸುಮಾರು 2.89 ಕೋಟಿ ವ್ಯಕ್ತಿಗಳ ಹೆಸರು ಉಲ್ಲೇಖವಾಗಿದೆ. ಒಟ್ಟು 40 ಲಕ್ಷಕ್ಕಿಂತ ಹೆಚ್ಚು ಜನರ ಹೆಸರು ಪ್ಟ್ಟಿಯಲ್ಲಿಲ್ಲದೆ ಇರುವುದು ಚರ್ಚೆಗೆ ಗ್ರಾಸವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

SCROLL FOR NEXT