ಢಾಕಾ: ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಕುರಿತಂತೆ ದೇಶಾದ್ಯಂತ ಬಾರೀ ಚರ್ಚೆಗಳಾಗುತ್ತಿರುವಾಗಲೇ ನೆರೆ ರಾಷ್ಟ್ರ ಬಾಂಗ್ಲಾದೇಶ ಈ ಸಂಬಂಧ ಪ್ರತಿಕ್ರಿಯೆ ನಿಡಿದೆ. ಅಕ್ರಮ ವಲಸಿಗರ ಸಮಸ್ಯೆಒಂದಿಗೆ ಈ ಪೌರತ್ವ ನೊಂದಣಿ ವರದಿಯನ್ನು ತಳುಕು ಹಾಕುವುದು ಸರಿಯಲ್ಲ ಎಂದಿದೆ.
ಢಾಕಾದಿಂದ ಎ ಎನ್ ಐ ಸುದ್ದಿಸಂಸ್ಥೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಬಾಂಗ್ಲಾದೇಶ ಮಾಹಿತಿ ಮತ್ತು ಪ್ರಸಾರ ಸಚಿವ ಹಸನುಲ್ ಹಕ್ ಇನು "ಅಸ್ಸಾಂನ ರಾಜ್ಯದಲ್ಲಿ ಶತಮಾನದಷ್ಟು ಹಳೆಯ ಜನಾಂಗೀಯ ಸಂಘರ್ಷ ಇರುವುದು ಎಲ್ಲರಿಗೆ ತಿಳಿದ ವಿಚಾರವಾಗಿದೆ.ಳೆದ 48 ವರ್ಷಗಳಲ್ಲಿ ಯಾವುದೇ ಭಾರತೀಯ ಸರ್ಕಾರವು ಸಹ ಬಾಂಗ್ಲಾದೇಶದೊಡನೆ ಈ ಅಕ್ರಮ ವಲಸಿಗರ ಕುರಿತ ಸಮಸ್ಯೆಯನ್ನು ಮುನ್ನೆಲೆಗೆ ತಂದಿಲ್ಲ. ದೆಹಲಿಯ ನರೇಂದ್ರ ಮೋದಿ ಸರ್ಕಾರ ಈ ಸಮಸ್ಯೆಯನ್ನು ನ್ಯಾಯೋಚಿತವಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದೆ.ಹೀಗಾಗಿ ಇದಕ್ಕೂ ಬಾಂಗ್ಲಾದೇಶಕ್ಕೂ ಯಾವ ಸಂಬಂಧವಿಲ್ಲ" ಎಂದಿದ್ದಾರೆ.
ಭಾರತದಲ್ಲಿ ನೆಲೆಸಿರುವ ಬಾಂಗ್ಲಾ ವಲಸಿಗರನ್ನು ಹಿಂದಕೆ ಕರೆಸಿಕೊಳ್ಳುವಿರೆ ಎಂದು ಕೇಳಿದಾಗ ಇನು "ಭಾರತ ಇದುವರೆಗೆ ನಮ್ಮೊಂದಿಗೆ ಎನ್ಆರ್ಸಿ ವರದಿಯನ್ನು ಹಂಚಿಕೊಂಡಿಲ್ಲ. ಹಗೆಯೇ ಸಮಸ್ಯೆಯನ್ನು ಕುರಿತು ಚರ್ಚಿಸಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಹಾಗೆ ಚರ್ಚೆಗೆ ಆಹ್ವಾನಿಸುವವರೆಗೆ ನಾನು ಅದರ ಕುರಿತು ಮಾತನಾಡಲಾರೆ " ಎಂದಿದ್ದಾರೆ.
ಬಂಗಾಳಿ ಮಾತನಾಡುವ ಪ್ರತಿಯೊಬ್ಬರೂ ಬಾಂಗ್ಲಾದೇಶದೊಂದಿಗೆ ಸಂಪರ್ಕಿಸಬಾರದು ಎಂದು ಅವರು ಹೇಳಿದ್ದಾರೆ.
ಅಸ್ಸಾಂನ ಎನ್ಆರ್ಸಿ ಅಂತಿಮ ಕರಡು ಸೋಮವಾರ ಪ್ರಕಟವಾದಂದಿನಿಂದ ರಾಜಕೀಯ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದೆ. ಕರಡಿನಲ್ಲಿ 3.29 ಕೋಟಿ ಅರ್ಜಿದಾರರಲ್ಲಿ ಸುಮಾರು 2.89 ಕೋಟಿ ವ್ಯಕ್ತಿಗಳ ಹೆಸರು ಉಲ್ಲೇಖವಾಗಿದೆ. ಒಟ್ಟು 40 ಲಕ್ಷಕ್ಕಿಂತ ಹೆಚ್ಚು ಜನರ ಹೆಸರು ಪ್ಟ್ಟಿಯಲ್ಲಿಲ್ಲದೆ ಇರುವುದು ಚರ್ಚೆಗೆ ಗ್ರಾಸವಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos