ಇಮ್ರಾನ್ ಖಾನ್ 
ವಿದೇಶ

ಪಾಕಿಸ್ತಾನ: ಉನ್ನತ ಅಧಿಕಾರಿಗಳಿಗೆ ಪ್ರಥಮ ದರ್ಜೆ ವಿಮಾನಯಾನಕ್ಕೆ ಇಮ್ರಾನ್ ಸರ್ಕಾರ ಕೊಕ್!

ದೇಶದ ಉನ್ನತ ಅಧಿಕಾರಿಗಳು, ಅಧ್ಯಕ್ಷರು, ಪ್ರಧಾನಿ, ಸರ್ಕಾರದ ಮುಖ್ಯಸ್ಥರು ಮತ್ತು ಉನ್ನತ ಅಧಿಕಾರಿಗಳಿಗೆ ಮೊದಲ ದರ್ಜೆಯ ವಿಮಾನಯಾನವನ್ನು ....

ಇಸ್ಲಮಾಬಾದ್ : ದೇಶದ  ಉನ್ನತ ಅಧಿಕಾರಿಗಳು, ಅಧ್ಯಕ್ಷರು, ಪ್ರಧಾನಿ, ಸರ್ಕಾರದ ಮುಖ್ಯಸ್ಥರು ಮತ್ತು ಉನ್ನತ ಅಧಿಕಾರಿಗಳಿಗೆ ಮೊದಲ ದರ್ಜೆಯ ವಿಮಾನ ಯಾನವನ್ನು  ನಿಷೇಧಿಸಿ ಪಾಕಿಸ್ತಾನ ಸಚಿವ ಸಂಪುಟ ಆದೇಶ ಹೊರಡಿಸಿದೆ. 
ಅಧಿಕಾರಕ್ಕೆ ಬಂದ ಒಂದೇ ವಾರದೊಳಗೆ ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದಲ್ಲಿ ನಡೆದಿರುವ ಎರಡನೇ ಸಚಿವ ಸಂಪುಟ ಸಭೆಯಲ್ಲಿ, ಸರ್ಕಾರಿ ಮುಖ್ಯಸ್ಥರ, ಉನ್ನತಾಧಿಕಾರಿಗಳ ಮೊದಲ ದರ್ಜೆ ವಿಮಾನ ಪ್ರಯಾಣಕ್ಕೆ ಕತ್ತರಿ ಹಾಕಲಾಗಿದೆ. 
ಮಾತ್ರವಲ್ಲದೆ ಪಾಕ್‌ ಉನ್ನತಾಧಿಕಾರಿಗಳು ಕಾರ್ಯ ವೇಳಾ ಪಟ್ಟಿಯನ್ನು ಕೂಡ ಪರಿಷ್ಕರಿಸಿದ್ದು ಹೆಚ್ಚು ಹೊತ್ತು ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಿದೆ. 
ಇದರ ಪರಿಣಾಮವಾಗಿ ಇನ್ನು ಮುಂದೆ ಪಾಕ್‌ ಪ್ರಧಾನಿ, ವರಿಷ್ಠ ನ್ಯಾಯಮೂರ್ತಿ, ಸೆನೆಟ್‌ ಅಧ್ಯಕ್ಷರು, ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್‌ ಮತ್ತು ಮುಖ್ಯ ಮಂತ್ರಿಗಳು ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಮೊದಲ ದರ್ಜೆಯಲ್ಲಿ ಪ್ರಯಾಣಿಸುವಂತಿಲ್ಲ. ಮತ್ತು ಅವರು ಇನ್ನು ಮುಂದೆ ಬ್ಯುಸಿನೆಸ್‌ ಅಥವಾ ಕ್ಲಬ್‌ ಕ್ಲಾಸ್‌ ಗಳಲ್ಲಿ ಮಾತ್ರವೇ ಪ್ರಯಾಣಿಸಬೇಕಾಗುತ್ತದೆ.
ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದ ನೂತನ ಪಾಕ್‌ ಸರ್ಕಾರದ ಈ ನಿರ್ಧಾರಕ್ಕೆ ಕಾರಣವಾಗಿರುವ ಮುಖ್ಯ ಸಂಗತಿ ಎಂದರೆ ಪಾಕಿಸ್ಥಾನದಲ್ಲಿ ಕಾರ್ಯಾಚರಿಸುತ್ತಿರುವ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಮೊದಲ ದರ್ಜೆಯ ಪ್ರಯಾಣಕ್ಕೆ ಇತರ ದರ್ಜೆಗಳಿಗಿಂತ 300 ಪಟ್ಟು ಅಧಿಕ ಶುಲ್ಕ ಇದೆ. 
ಇಮ್ರಾನ್‌ ಅವರು ಸ್ವತಃ ತಾನು ಇನ್ನು ಮುಂದೆ ವಿದೇಶಕ್ಕೆ ವಿಮಾನದಲ್ಲಿ ಪ್ರಯಾಣಿಸುವಾಗ ತನ್ನ ವಿಶೇಷ ವಿಮಾನವನ್ನು ಬಳಸದೆ, ನಿತ್ಯ ಹಾರಾಟಕ್ಕೆ ಲಭ್ಯವಿರುವ ವಿಮಾನಗಳಲ್ಲಿನ ಬ್ಯುಸಿನೆಸ್‌ ಕ್ಲಾಸ್‌ ಅಥವಾ ಕ್ಲಬ್‌ ಕ್ಲಾಸ್‌ ನಲ್ಲಿ ಮಾತ್ರವೇ ಪ್ರಯಾಣಿಸುವುದಾಗಿ ಹೇಳಿದ್ದಾರೆ. 
ಜೊತೆಗೆ ಶಿಷ್ಟಾಚಾರಕ್ಕಾಗಿ ಕೇವಲ ಎರಡು ವಾಹನಗಳು ಮತ್ತು ಇಬ್ಬರು ಸರ್ವೆಂಟ್ ಗಳನ್ನು ಇಟ್ಟುಕೊಳ್ಳುವುದಾಗಿ  ಇಮ್ರಾನ್ ಖಾನೇ ಹೇಳಿದ್ದಾರೆ. 
ವಾರದ ಆರು ದಿನಗಳಲ್ಲೂ ಅಧಿಕಾರಿಗಳೂ ಬೆಳಗ್ಗೆ 8-4ರ ಬದಲಿಗೆ 9-5 ಗಂಟೆವರೆಗೆ ಕೆಲಸ ಮಾಡಬೇಕು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT