ಸಾಂದರ್ಬಿಕ ಚಿತ್ರ 
ವಿದೇಶ

ಭಾರತದ ವಿಜ್ಞಾನಿಗಳು, ಶೈಕ್ಷಣಿಕ ತಜ್ಞರಿಗೆ ಹೊಸ ವೀಸಾ ಬಿಡುಗಡೆ ಮಾಡಿದ ಇಂಗ್ಲೆಂಡ್

ಭಾರತೀಯರು ಸೇರಿದಂತೆ ಸಾಗರೋತ್ತರ ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ಉಪಯೋಗವಾಗುವಂತೆ ...

ಲಂಡನ್: ಭಾರತೀಯರು ಸೇರಿದಂತೆ ಸಾಗರೋತ್ತರ ವಿಜ್ಞಾನಿಗಳು, ಶಿಕ್ಷಣ ತಜ್ಞರು ಮತ್ತು ಸಂಶೋಧಕರಿಗೆ ಉಪಯೋಗವಾಗುವಂತೆ ಇಂಗ್ಲೆಂಡ್ ಸರ್ಕಾರ ಹೊಸ ವೀಸಾ ಆರಂಭಿಸಿದೆ. ಇದರಿಂದ ಆ ದೇಶದ ಸಂಶೋಧನೆ ವಲಯಗಳಿಗೆ ಪ್ರಯೋಜನವಾಗಲಿದೆ.

ಇಂಗ್ಲೆಂಡಿನಲ್ಲಿ ಈಗಾಗಲೇ ಇರುವ ಟಯರ್ 5 ವೀಸಾದಡಿಯಲ್ಲಿ (ತಾತ್ಕಾಲಿಕ ಕೆಲಸಗಾರರು-ಸರ್ಕಾರಿ ಪ್ರಾಧಿಕಾರ ವಿನಿಮಯ ಕೇಂದ್ರಗಳು) ನೂತನ ವಿಜ್ಞಾನ, ಸಂಶೋಧನೆ ಮತ್ತು ಶೈಕ್ಷಣಿಕ ಯೋಜನೆಗಳಿಗೆ ಐರೋಪ್ಯ ಒಕ್ಕೂಟ ಹೊರತುಪಡಿಸಿ ಬೇರೆ ದೇಶಗಳಿಂದ ಇಂಗ್ಲೆಂಡಿಗೆ 2 ವರ್ಷಗಳ ಅವಧಿಗೆ ಬರುವವರಿಗೆ ನೆರವಾಗಲಿದೆ.

ಸಂಶೋಧನೆ, ಹೊಸ ಆವಿಷ್ಕಾರಗಳಲ್ಲಿ ಇಂಗ್ಲೆಂಡ್ ವಿಶ್ವದಲ್ಲಿಯೇ ಮುಂಚೂಣಿಯಲ್ಲಿದ್ದು ವಿದೇಶಗಳಿಂದ ಬರುವವರಿಗೆ ಇಲ್ಲಿನ ವೀಸಾ ಸುಲಭವಾಗಿ ಸಿಕ್ಕಿದರೆ ಇಲ್ಲಿಗೆ ಬರಲು ಅನುಕೂಲವಾಗುತ್ತದೆ. ಅಲ್ಲದೆ ಇಲ್ಲಿನ ಸಂಶೋಧನಾ ಮತ್ತು ವಿಜ್ಞಾನ ಉದ್ಯಮರಂಗ ಕೂಡ ಬೆಳೆಯುತ್ತದೆ ಎನ್ನುತ್ತಾರೆ ಇಂಗ್ಲೆಂಡಿನ ವಲಸೆ ಖಾತೆ ಸಚಿವೆ ಕ್ಯಾರೊಲಿನ್ ನೊಕ್ಸ್.

ನಮ್ಮಲ್ಲಿ ವಲಸೆ ವ್ಯವಸ್ಥೆಯ ಅಗತ್ಯವಿದ್ದು ಆ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಪ್ರತಿಭಾವಂತರನ್ನು ಮತ್ತು ವಿಷಯ ತಜ್ಞರನ್ನು ನಮ್ಮ ದೇಶಕ್ಕೆ ಸೆಳೆಯಲು ಅನುಕೂಲವಾಗುತ್ತದೆ ಎಂದರು.

ಸಮಾಜಕ್ಕೆ ಮತ್ತು ಇಂಗ್ಲೆಂಡಿನ ಆರ್ಥಿಕತೆಯಲ್ಲಿ ವಿಜ್ಞಾನ ಕ್ಷೇತ್ರದ ಕೊಡುಗೆಯನ್ನು ನಾವು ಗುರುತಿಸಿದ್ದೇವೆ. ವಿಶ್ವದ ಎಲ್ಲಾ ಭಾಗಗಳಿಂದ ನಾವು ಮುಂಚೂಣಿಯಲ್ಲಿರುವ ವೈಜ್ಞಾನಿಕ ಮತ್ತು ಸಂಶೋಧನಾ ರಂಗಗಳಲ್ಲಿರುವವರನ್ನು ನಾವು ಸ್ವಾಗತಿಸುತ್ತೇವೆ ಎಂದರು.

ಇತ್ತೀಚೆಗೆ ಇಂಗ್ಲೆಂಡ್ ಮಾಡಿರುವ ಕೆಲವು ವೀಸಾ ನೀತಿಗಳಲ್ಲಿ ಟಯರ್ 2 ವೀಸಾ ಕ್ಯಾಪ್ ಗಳಿಂದ ವೈದ್ಯರು ಮತ್ತು ದಾದಿಯರನ್ನು ತೆಗೆದುಹಾಕಿರುವುದು, ರಾಷ್ಟ್ರೀಯ ಆರೋಗ್ಯ ಸೇವೆಗಳಲ್ಲಿ ಹೆಚ್ಚಿನ ಭಾರತೀಯ ವೈದ್ಯರುಗಳ ಸೇರ್ಪಡೆ ಕೂಡ ಒಳಗೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT