ಜೇಮ್ಸ್ ಮ್ಯಾಟಿಸ್, ನರೇಂದ್ರ ಮೋದಿ 
ವಿದೇಶ

ಬೃಹತ್ ಸಾಲಗಳ ಅಪಾಯದ ವಾಸ್ತವತೆ ಹೇಳಿದ್ದಕ್ಕೆ ಪ್ರಧಾನಿ ಮೋದಿ ಬಗ್ಗೆ ಮ್ಯಾಟಿಸ್ ಪ್ರಶಂಸೆ

ಬೃಹತ್ ಸಾಲಗಳನ್ನು ಸ್ವೀಕರಿಸುವ ಅಪಾದಯ ಬಗ್ಗೆ ಎಚ್ಚರಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕ....

ವಾಷಿಂಗ್ಟನ್: ಬೃಹತ್ ಸಾಲಗಳನ್ನು ಸ್ವೀಕರಿಸುವ ಅಪಾದಯ ಬಗ್ಗೆ ಎಚ್ಚರಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಅವರು ಪ್ರಶಂಸಿಸಿದ್ದು, ಅವರು ನಿಜವಾಗಿಯೂ ಉತ್ತಮವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೊಗಳಿದ್ದಾರೆ.
ಕಳೆದ ಶನಿವಾರ ಸಿಂಗಾಪುರದಲ್ಲಿ ನಡೆದ ಶಾಂಗ್ರಿಲಾ ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿ ಉತ್ತಮ ವಿಚಾರವನ್ನು ಮಂಡಿಸಿದ್ದಾರೆ. ಸಾಲದ ಒತ್ತಡದಿಂದ ದೇಶಗಳು ತಮ್ಮ ಅಜೆಂಡಾವನ್ನೇ ಬದಲಿಸುವ ಒತ್ತಡಕ್ಕೆ ಸಿಲುಕುತ್ತವೆ ಎಂದು ಮ್ಯಾಟಿಸ್ ಅವರು ವರದಿಗಾರರಿಗೆ ತಿಳಿಸಿದ್ದಾರೆ.
ಭಾರತದ ಪ್ರಧಾನಿ ಮೋದಿಯವರ ಭಾಷಣವನ್ನು ನೆನಪಿಸಿಕೊಳ್ಳಲು ಬಯಸುತ್ತೇನೆ. ಅದು ಹಳೆ ತಲೆಮಾರಿನ ಜನ ಕೇಳುವಂತಹ ಭಾಷಣ. ಅವರು ನಿಜವಾಗಿಯೂ ದೊಡ್ಡ ವ್ಯಕ್ತಿ ಎಂದು ನಾನು ಭಾವಿಸಿದ್ದೇನೆ ಮತ್ತು ಬೃಹತ್ ಸಾಲಗಳ ಬಗ್ಗೆ ಅವರು ಪ್ರಸ್ತಾಪಿಸಿದ ವಿಷಯ ನನಗೆ ಇಷ್ಟವಾಯಿತು ಎಂದು ಮ್ಯಾಟಿಸ್ ತಿಳಿಸಿದ್ದಾರೆ.
ನಾನು ನನ್ನ ಕೋಣೆಗೆ ಮರಳಿದ ನಂತರ ಆ ರಾತ್ರಿ ಯೋಚಿಸುತ್ತಿದ್ದೆ, ಮತ್ತೊಂದು ದೇಶದಿಂದ ಬೃಹತ್ ಸಾಲ ಪಡೆದರೆ, ನೀವು ನಿಮ್ಮ ಸಾರ್ವಭೌಮತ್ವವನ್ನು ಕಳೆದುಕೊಳ್ಳಬಹುದು ಮತ್ತು ನಿಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬಹುದು ಎಂದು ಅಮೆರಿಕ ರಕ್ಷಣಾ ಕಾರ್ಯದರ್ಶಿ ಎಚ್ಚರಿಕೆ ನೀಡಿದ್ದಾರೆ.
ಕಳೆದ ಶನಿವಾರ ಶಾಂಗ್ರಿಲಾ ಶೃಂಗ ಸಭೆಯಲ್ಲಿ ಪ್ರಧಾನ ಭಾಷಣ ಮಾಡಿದ್ದ ಪ್ರಧಾನಿ ಮೋದಿ, ಇತರೆ ದೇಶಗಳಿಗೆ ಬೃಹತ್ ಸಾಲ ನೀಡುವ ಸರ್ಕಾರಗಳನ್ನು ಕಟುವಾಗಿ ಟೀಕಿಸಿದ್ದರು. ಈ ಮೂಲಕ ಪಾಕಿಸ್ತಾನ ಮತ್ತು ಶ್ರೀಲಂಕಾಗೆ ಬೃಹತ್ ಸಾಲಗಳನ್ನು ನೀಡುತ್ತಿರುವ ಚೀನಾಗೆ ಟಾಂಗ್ ನೀಡಿದ್ದರು. ಅಲ್ಲದೆ ಬೃಹತ್ ಸಾಲವೊಂದು ಹೇಗೆ ದೇಶಕ್ಕೆ ಹೊರೆಯಾಗುತ್ತದೆ ಮತ್ತು ಸಾಲದ ಮೊತ್ತ ಹೆಚ್ಚಿದಂತೆ ಮತ್ತೊಂದು ದೇಶಕ್ಕೂ ಯಾವ ರೀತಿ ತೊಂದರೆಯಾಗುತ್ತದೆ ಎನ್ನುವುದನ್ನು ಮೋದಿ ತಮ್ಮ ಭಾಷಣದಲ್ಲಿ ವಿವರಿಸಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಉಕ್ರೇನ್ ವಿರುದ್ಧ ರಷ್ಯಾದ ದೀರ್ಘಕಾಲ ಸಂಘರ್ಷಕ್ಕೆ ಭಾರತವೇ ಕಾರಣ, ಇದು 'ಮೋದಿ ಯುದ್ಧ': White House ವ್ಯಾಪಾರ ಸಲಹೆಗಾರ ಪೀಟರ್ ನವರೊ

ಅಮೆರಿಕದ ಸುಂಕ: ಜವಳಿ ವಲಯದ ಒತ್ತಡ ಕಡಿಮೆ ಮಾಡಲು 40 ಪ್ರಮುಖ ಆಮದು ದೇಶ ಗುರುತು

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

SCROLL FOR NEXT