ನರೇಂದ್ರ ಮೋದಿ-ಹಫೀಜ್ ಸಯೀದ್ 
ವಿದೇಶ

ಪ್ರಧಾನಿ ಮೋದಿಯನ್ನು ಕೊಂದು, ಭಾರತವನ್ನು ವಿಭಜಿಸುತ್ತೇವೆ: ಉಗ್ರ ಹಫೀಜ್ ಸಯೀದ್ ಆಪ್ತ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಂದು ಭಾರತವನ್ನು ವಿಭಜನೆ ಮಾಡುತ್ತೇವೆ ಎಂದು 2008ರ ಮುಂಬೈ ದಾಳಿ ಮಾಸ್ಟರ್ ಮೈಂಡ್ ಹಾಗೂ ನಿಷೇಧಿತ...

ರಾವಲ್ ಕೋಟ್: ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಂದು ಭಾರತವನ್ನು ವಿಭಜನೆ ಮಾಡುತ್ತೇವೆ ಎಂದು 2008ರ ಮುಂಬೈ ದಾಳಿ ಮಾಸ್ಟರ್ ಮೈಂಡ್ ಹಾಗೂ ನಿಷೇಧಿತ ಜಮಾದ್-ಉದ್-ದವಾ ಮುಖ್ಯಸ್ಥ ಹಫೀಜ್ ಸಯೀದ್ ನ ಆಪ್ತ ಹಾಗೂ ಜೆಯುಡಿ ಸಂಚಾಲಕ ಬಶೀರ್ ಅಹ್ಮದ್ ಖರ್ಘಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾನೆ. 
ಭಾರತ ಮತ್ತು ಅಮೆರಿಕದಲ್ಲಿ ಇಸ್ಲಾಮಿನ ಬಾವುಟವನ್ನು ಸ್ಥಾಪಿಸುತ್ತೇವೆ. ಭಾರತದ ಪ್ರದಾನಿ ಮೋದಿಯನ್ನು ಹತ್ಯೆ ಮಾಡುತ್ತೇವೆ. ಭಾರತ ಹಾಗೂ ಇಸ್ರೇಲ್ ಅನ್ನು ವಿಭಜನೆ ಮಾಡುತ್ತೇವೆ. ಅತೀ ಹೆಚ್ಚು ಹುತಾತ್ಮರನ್ನು ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ್ದಾನೆ. 
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪೂಂಚ್ ಜಿಲ್ಲೆಯ ಮಸೀದಿಯೊಂದರಲ್ಲಿ ನಡೆದ ರಂಜಾನ್ ನ ಶುಕ್ರವಾರದ ನಮಾಜ್ ನ ಭಾಷಣದ ವೇಳೆ ಬಶೀರ್ ನಾಲಿಗೆ ಹರಿದು ಬಿಟ್ಟಿದ್ದಾನೆ. 
ರಂಜಾನ್ ಜಿಹಾದ್ ನ ತಿಂಗಳಾಗಿದ್ದು ಈ ತಿಂಗಳಿನಲ್ಲಿ ಹುತಾತ್ಮರಾದವರಿಗೆ ಸ್ವರ್ಗದ ಬಾಗಿಲು ತೆರೆದಿರುತ್ತದೆ. ನಮ್ಮ ಸೈನಿಕರು ಕಾಶ್ಮೀರದಲ್ಲಿ ಭಾರತದ ವಿರುದ್ಧ ಹೋರಾಟ ಮಾಡಿ ಜಿಹಾದ್ ಮಾಡುತ್ತಿದ್ದಾರೆ. ನಾವು ಕಾಶ್ಮೀರಕ್ಕೆ ಸ್ವತಂತ್ರ ಕೊಡಿಸಿ ಭಾರತವನ್ನು ನಾಶ ಮಾಡುತ್ತೇವೆ ಎಂದು ಹೇಳಿದ್ದಾನೆ. 
ಇದೇ ವೇಳೆ ಭಾರತದ ವಿರುದ್ಧದ ನಮ್ಮ ಹೋರಾಟಕ್ಕೆ ನೀವು ಬೆಂಬಲ ನೀಡಬೇಕು. ನಮಗೆ ಆಹಾರ ಧಾನ್ಯ ಹಾಗೂ ಹಣವನ್ನು ದಾನ ಮಾಡಬೇಕು. ಅಲ್ಲದೆ ಮಹಿಳೆಯರು ತಮ್ಮ ಮಕ್ಕಳನ್ನು ನಮಗೆ ಅರ್ಪಿಸಬೇಕೆಂದು ಅಂಗಲಾಚಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

SCROLL FOR NEXT