ಡೊನಾಲ್ಡ್ ಟ್ರಂಪ್ 
ವಿದೇಶ

ಇಬಿ-5 ವೀಸಾ ಸುಧಾರಣೆ ಅಥವಾ ರದ್ದು ಮಾಡುವಂತೆ ಅಮೆರಿಕಾ ಕಾಂಗ್ರೆಸ್ ಗೆ ಟ್ರಂಪ್ ಆಡಳಿತ ಆಗ್ರಹ

ಇಬಿ-5 ವೀಸಾವನ್ನು ಸುಧಾರಿಸುವಂತೆ ಅಥವಾ ರದ್ದುಗೊಳಿಸುವಂತೆ ಡೊನಾಲ್ಡ್ ಟ್ರಂಪ್ ಆಡಳಿತ ಅಮೆರಿಕಾ ಕಾಂಗ್ರೆಸ್ ಒತ್ತಾಯಿಸಿದೆ.

ವಾಷಿಂಗ್ಟನ್: ವಿದೇಶಿಯರು ಅಮೆರಿಕಾದಲ್ಲಿ 1 ಮಿಲಿಯನ್ ಡಾಲರ್ ನಷ್ಟು ಹೂಡಿಕೆ ಮಾಡಲು  ಹಸಿರು  ಕಾರ್ಡ್ ಒದಗಿಸುವ 10 ಕಾಯಂ ಪೂರ್ಣವಧಿ ಕೆಲಸ ಉದ್ಯೋಗ ಸೃಷ್ಟಿಸುವ ಇಬಿ-5 ವೀಸಾವನ್ನು ಸುಧಾರಿಸುವಂತೆ ಅಥವಾ ರದ್ದುಗೊಳಿಸುವಂತೆ ಡೊನಾಲ್ಡ್ ಟ್ರಂಪ್ ಆಡಳಿತ ಅಮೆರಿಕಾ ಕಾಂಗ್ರೆಸ್ ನ್ನು ಒತ್ತಾಯಿಸಿದೆ.
ಭಾರತೀಯರು ಸೇರಿದಂತೆ ವಿದೇಶಿಯರಿಂದ ಈ ವೀಸಾ ದುರ್ಬಳಕೆ ಹೆಚ್ಚಾಗುತ್ತಿದ್ದ ವರದಿಗಳು ಕೇಳಿಬಂದ ನಂತರ ಟ್ರಂಪ್ ಆಡಳಿತ ಈ ಕ್ರಮ ತೆಗೆದುಕೊಂಡಿದೆ.
ವೀಸಾ ದುರ್ಬಳಕೆ ಪ್ರಕರಣಗಳು ಹೆಚ್ಚಾದ ನಂತರ ಅಮೆರಿಕಾದ ಉನ್ನತ ಶಾಸಕರು ಕೂಡಾ  ಹೂಡಿಕೆದಾರರ ವೀಸಾ ಯೋಜನೆಯಂತಿರುವ ಇಬಿ-5  ಹೂಡಿಕೆದಾರರ ವೀಸಾ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇಬಿ-5 ಪ್ರಾದೇಶಿಕ ಕೇಂದ್ರ ಕಾರ್ಯಕ್ರಮ ಈ ವರ್ಷದ ಸೆಪ್ಟೆಂಬರ್ 30 ರಂದು ಅಂತ್ಯಗೊಳ್ಳಲಿದೆ. ಅಮೆರಿಕಾದ ಹೂಡಿಕೆದಾರರು, ಉದ್ಯಮಿಗಳು ಹಾಗೂ ಸಮುದಾಯವನ್ನು ವಂಚನೆಯಿಂದ ರಕ್ಷಿಸಲು ಸುಧಾರಣೆ ತರಬೇಕಾಗಿದೆ ಎಂದು ಅಮೆರಿಕಾ ನಾಗರಿಕ ಮತ್ತು ವಲಸೆ ವಿಭಾಗದ ನಿರ್ದೇಶಕ ಎಲ್. ಫ್ರಾನ್ಸಿಸ್ ಸಿಸ್ನಾ ಶಾಸಕರಿಗೆ ಹೇಳಿದ್ದಾರೆ.
ಇಬಿ- 5 ಹೂಡಿಕೆದಾರರ ವೀಸಾ ಯೋಜನೆಯಲ್ಲಿ ಪ್ರತಿಯೊಂದು ರಾಷ್ಟ್ರಕ್ಕೂ ಶೇ. 7 ರಂತೆ  ಪ್ರತಿವರ್ಷ ವಿದೇಶಿಗರಿಗೆ 10 ಸಾವಿರ ವೀಸಾವನ್ನು ಹಂಚಿಕೆ ಮಾಡಲಾಗುತ್ತದೆ. ಚೀನಾ, ವಿಯಟ್ನಾಂ ಹೊರತುಪಡಿಸಿದರೆ ಭಾರತ ಅತಿ ಹೆಚ್ಚು ಇಬಿ-5 ವೀಸಾ ಅರ್ಜಿ ಪಡೆಯುವ ಮೂರನೇ ರಾಷ್ಟ್ರವಾಗಿದೆ. ಹೆಚ್ಚಿನ ವೀಸಾ ದುರ್ಬಳಕೆ ಆರೋಪ ಚೀನಾದಿಂದ ಕೇಳಿಬಂದಿದೆ.
ಕಳೆದ ವರ್ಷ 500 ಇಬಿ- 5 ಅರ್ಜಿಗಳು ಭಾರತಿಯರಿಂದ ಸಲ್ಲಿಕೆಯಾಗಿದ್ದವು. ಈ ವರ್ಷ 700 ವೀಸಾ ಅರ್ಜಿ ಸಲ್ಲಿಕೆಯಾಗುವ ಸಾಧ್ಯತೆ ಇದೆ. ಚಂಡೀಗಢ, ಪಂಜಾಬ್, ದೆಹಲಿ, ಮುಂಬೈ, ತಮಿಳುನಾಡು, ಕರ್ನಾಟಕದಿಂದ ಈ ವೀಸಾಗೆ ಹೆಚ್ಚಿನ ಬೇಡಿಕೆ ಇದೆ. ಒಂದು ವೇಳೆ ಈ ವೀಸಾ ರದ್ದುಗೊಂಡರೆ ಭಾರತೀಯರ ಮೇಲೆ ತೀವ್ರ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.
ಇಬಿ-5 ಪ್ರಾದೇಶಿಕ ಕೇಂದ್ರ ಯೋಜನೆಯ ಅವಧಿ ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಮುಕ್ತಾಯಗೊಳ್ಳಲಿದ್ದು, ಸೆನೆಟಿನ ನ್ಯಾಯಾಂಗ ಸಮಿತಿ ಮುಂದೆ ಪರಿಶೀಲನೆ ನಡೆಸಲಾಗುವುದು ಎಂದು ಸಿಸ್ನಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT