ಪಾಕಿಸ್ತಾನ ಪಿಎಂ ಅಬ್ಬಾಸಿ (ಸಂಗ್ರಹ ಚಿತ್ರ) 
ವಿದೇಶ

ಅಮೆರಿಕ ಏರ್​ಪೋರ್ಟ್​ನಲ್ಲಿ ಪಾಕ್​ ಪ್ರಧಾನಿ ಅಬ್ಬಾಸಿಗೆ ಅಪಮಾನ

ಪಾಕಿಸ್ತಾನ ಪ್ರಧಾನಿ ಶಾಹಿದ್​ ಖಾನ್​ ಅಬ್ಬಾಸಿ ಅವರು ಅಮೆರಿಕದ ನ್ಯೂಯಾರ್ತ್ ವಿಮಾನ ನಿಲ್ದಾಣದಲ್ಲಿ ಅಪಮಾನಕ್ಕೀಡಾದ ಘಟನೆ ವರದಿಯಾಗಿದೆ.

ನ್ಯೂಯಾರ್ಕ್: ಪಾಕಿಸ್ತಾನ ಪ್ರಧಾನಿ ಶಾಹಿದ್​ ಖಾನ್​ ಅಬ್ಬಾಸಿ ಅವರು ಅಮೆರಿಕದ ನ್ಯೂಯಾರ್ತ್ ವಿಮಾನ ನಿಲ್ದಾಣದಲ್ಲಿ ಅಪಮಾನಕ್ಕೀಡಾದ ಘಟನೆ ವರದಿಯಾಗಿದೆ.
ಮೂಲಗಳ ಪ್ರಕಾರ ಅಮೆರಿಕಕ್ಕೆ ತೆರಳಿದ್ದ ಅಬ್ಬಾಸಿ ಅವರನ್ನು ನ್ಯೂಯಾರ್ಕ್ ನ ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣದಲ್ಲಿ ಸಾಮಾನ್ಯ ಪ್ರಯಾಣಿಕರಂತೆ ನಡೆಸಿಕೊಂಡಿದ್ದು, ಅವರ ಬ್ಯಾಗ್ ಮತ್ತು ಅವರನ್ನು ತೀವ್ರ ಶೋಧ ನಡೆಸಲಾಗಿದೆ. ಅಮೆರಿಕ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಈ ಪ್ರಮಾದ ಎಸಗಿದ್ದು, ಇದರಿಂದ ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗವಾಗಿದೆ.
ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವಿಡಿಯೋದಲ್ಲಿ ಶಾಹಿದ್​ ಅಬ್ಬಾಸಿ ಅವರು ತಾವು ಧರಿಸಿದ್ದ ಕೋಟ್​ ಅನ್ನು ತಮ್ಮ ತೋಳ ಮೇಲೆ ಹಾಕಿಕೊಂಡು ಒಂದು ಕೈಯಲ್ಲಿ ಸೂಟ್​ಕೇಸ್​ ಹಿಡಿದು ತಪಾಸಣೆ ನಡೆದ ಬಳಿಕ ಹೊರಬರುತ್ತಿದ್ದಾರೆ.
ಈ ಬಗ್ಗೆ ವರದಿ ಮಾಡಿರುವ ಪಾಕ್​ ಮಾಧ್ಯಮಗಳು ಪ್ರಧಾನಿ ಅಬ್ಬಾಸಿ ಅವರನ್ನು ಅಮೆರಿಕ ಸರ್ಕಾರ ಅವಮಾನಿಸಿದ್ದು, ಅನುಚಿತವಾಗಿ ನಡೆದುಕೊಂಡಿದೆ ಎಂದು ವರದಿ ಬಿತ್ತರಿಸಿವೆ. ಅಮೆರಿಕ ಅಧ್ಯಕ್ಷ ಟ್ರಂಪ್ ಆಡಳಿತವು ಪಾಕಿಸ್ತಾನಿ ಸರ್ಕಾರದ ವ್ಯಕ್ತಿಗಳ ಮೇಲೆ ವೀಸಾ ನಿಷೇಧ ಮತ್ತು ಇತರ ನಿರ್ಬಂಧಗಳನ್ನು ವಿಧಿಸುತ್ತಿದೆ ಎಂದು ವರದಿ ಮಾಡಿವೆ. 
ಡೊನಾಲ್ಡ್​ ಟ್ರಂಪ್​ ಅಧ್ಯಕ್ಷರಾಗಿ ಆಯ್ಕೆಯಾದ ನಂತರದ ದಿನಗಳಲ್ಲಿ ಪಾಕಿಸ್ತಾನ ಮತ್ತು ಅಮೆರಿಕ ನಡುವಿನ ಸಂಬಂಧ ಹದಗೆಟ್ಟಿದೆ. ಈ ಹಿಂದೆಯೇ ಪಾಕ್​ ವಿರುದ್ಧ ಟ್ರಂಪ್​ ಗುಡುಗಿದ್ದರು. ಪಾಕ್​ ಉಗ್ರರಿಗೆ ನೆರವು ನೀಡುತ್ತಿದ್ದು, ಅವರಿಗೆ ಸರ್ಕಾರದ ನೆರವನ್ನು ನಿಲ್ಲಿಸುವುದಾಗಿ ಎಚ್ಚರಿಸಿದ್ದರು.
ಪಾಕ್ ಮಾಜಿ ಅಧ್ಯಕ್ಷ ಶರೀಫ್ ಅವರು ಭ್ರಷ್ಟಾಚಾರ ಪ್ರಕರಣ ಸಂಬಂಧ ಪ್ರಧಾನಿ ಹುದ್ದೆ ತೊರೆದ ಬಳಿಕ ಅವರ ಸಹೋದರ ಅಬ್ಬಾಸಿ ಅಧಿಕಾರಕ್ಕೇರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

SCROLL FOR NEXT