ಬೆಳಗಾವಿ ಸವಿತಾ ಸಾವಿಗೆ ನ್ಯಾಯ: ಐರ್ಲೆಂಡಿನಲ್ಲಿ ಗರ್ಭಪಾತ ನಿಷೇಧ ಕಾನೂನು ರದ್ದು 
ವಿದೇಶ

ಬೆಳಗಾವಿ ಸವಿತಾ ಸಾವಿಗೆ ನ್ಯಾಯ: ಐರ್ಲೆಂಡಿನಲ್ಲಿ ಗರ್ಭಪಾತ ನಿಷೇಧ ಕಾನೂನು ರದ್ದು

ಬೆಳಗಾವಿಯ ದಂತವೈದ್ಯೆ ಸವಿತಾ ಹಾಲಪ್ಪನವರ್ ಸಾವು ಸಂಭವಿಸಿದ ವರ್ಷಗಳ ಬಳಿಕ ಐರ್ಲೆಂಡ್ ಮಹಿಳೆಯರಿಗೆ ಗರ್ಭಪಾತ ಮಾಡಿಸಿಕೊಳ್ಳುವುದಕ್ಕೆ ........

ಡಬ್ಲಿನ್‌ ಬೆಳಗಾವಿಯ ದಂತವೈದ್ಯೆ ಸವಿತಾ ಹಾಲಪ್ಪನವರ್ ಸಾವು ಸಂಭವಿಸಿದ ವರ್ಷಗಳ ಬಳಿಕ ಐರ್ಲೆಂಡ್ ಮಹಿಳೆಯರಿಗೆ ಗರ್ಭಪಾತ ಮಾಡಿಸಿಕೊಳ್ಳುವುದಕ್ಕೆ ಅನುಮತಿಸುವ ಕಾನೂನು ಜಾರಿಗೆ  ತರುತ್ತಿದೆ.
ಸಂಪ್ರದಾಯವಾದಿ ರಾಷ್ಟ್ರವಾದ ಐರ್ಲೆಂಡಿನ ಈ ಕಾನೂನು ತಿದ್ದುಪಡಿಯಿಂದ ನೂತನ ಇತಿಹಾಸ ನಿರ್ಮಾಣವಾಗಲಿದೆ.ಶನಿವಾರ ನಡೆದ ಜನಮತ ಗಣನೆ ಪ್ರಕಾರ ಗರ್ಭಪಾತಕ್ಕೆ ಅವಕಾಶ ಕಲ್ಪಿಸುವಂತೆ  ಶೇ 68ರಷ್ಟು ಮತಗಳು ಲಭಿಸಿದೆ.
ಸವಿತಾ ಸಾವಿಗೆ ನ್ಯಾಯ ದಕ್ಕಿತು
ಬೆಳಗಾವಿಯ ಡಾ.ಸವಿತಾ ಐರ್ಲೆಂಡಿನಲ್ಲಿದ್ದು ಗರ್ಭ ಧರಿಸಿದ ವೇಳೆ ಕೆಲ ಆರೋಗ್ಯ ಸಮಸ್ಯೆಯಿಂದ ಬಳಲಿದ್ದರು. ಆಗ ಅವರು ಗರ್ಭಪಾತ ಮಾಡಿಸಿಕೊಳ್ಳುವುದಕ್ಕೆ ಮುಂದಾದಾಗ ಆ ದೇಶದ ಕಾನೂನಿನಲ್ಲಿ ಅದಕ್ಕೆ ಅವಕಾಶವಿರದ ಕಾರಣ ವೈದ್ಯರು ಆಕೆಯ ಗರ್ಭಪಾತ ಮಾಡಲು ನಿರಾಕರಿಸಿದ್ದರು.
ಗರ್ಭಪಾತ ಮಾಡಿಸಿಕೊಳ್ಳುವುದಕ್ಕೆ ವಿಫಲವಾದ ಸವಿತಾ ಅಕ್ಟೋಬರ್ 2012ರಲ್ಲಿ ಸಾವನ್ನಪ್ಪಿದ್ದರು.ವೈದ್ಯರ ನಿರ್ಲಕ್ಷವೇ ಸವಿತಾ ಸಾವಿಗೆ ಕಾರಣವೆಂದು ತಿಳಿದುಬಂದಿದೆ. ಸವಿತಾ ಸಾವನ್ನು ಖಂಡಿಸಿ ಅಲ್ಲಿ ನೆಲೆಸಿರುವ ಭಾರತೀಯರು ಸೇರಿ ಐರ್ಲೆಂಡ್ ಮಹಿಳೆಯರು ಕಳೆದ ಆರು ವರ್ಷದಿಂದ ಪ್ರತಿಭಟಿಸುತ್ತಿದ್ದರು. 
ಈ ಸಂಬಂಧ ಐರ್ಲೆಂಡ್ ಸಂಸತ್ತಿನಲ್ಲಿ ಚರ್ಚೆ ನಡೆದಿದ್ದು ಗರ್ಭಪಾತ ಕುರಿತ ವಿಶೇಷ ಮಸೂದೆಯೂ ಅಂಗೀಕಾರವಾಗಿತ್ತು 2013ರಲ್ಲೇ ಅಂಗೀಕರಿಸಲ್ಪಟ್ಟ ಮಸೂದೆಗೆ ಕಾನೂನು ಮಾನ್ಯತೆ ಮಾತ್ರ ದೊರಕಿರಲಿಲ್ಲ.
ಈ ಕುರಿತಂತೆ ಪ್ರತಿಕ್ರಯಿಸಿರುವ ಸವಿತಾ ತಂದೆ ಅಂದಾನಪ್ಪ ಝಳಗಿ ಪ್ರತಿಕ್ರಯಿಸಿದ್ದು "ಕಡೆಗೂ ನಮಗೆ ನ್ಯಾಯ ದಕ್ಕಿದೆ,  ಐರ್ಲೆಂಡ್ ಕಡೆಗೂ ತನ್ನ ಕರಾಳ ನೀತಿಯನ್ನು ಬದಲಿಸಲು ಮುಂದಾದದ್ದು ಸಂತಸ ತಂದಿದೆ.ನನ್ನ ಪುತ್ರಿಗೆ ಒದಗಿದ ಸ್ಥಿತಿ ಇನ್ನಾರಿಗೂ ಬರಬಾರದು.ಕಾನೂನು ತಿದ್ದುಪಡಿ ವಿಧೇಯಕಕ್ಕೆ ನನ್ನ ಪುತ್ರಿಯ ಹೆಸರಿಡಬೇಕು.ಈ ಪ್ರಕಾರ ಸವಿತಾ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕು." ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

BJP, RSS ನಡುವೆ ಭಿನ್ನಾಭಿಪ್ರಾಯ ಇರಬಹುದು, ಆದರೆ ಸಂಘರ್ಷ ಇಲ್ಲ: ಮೋಹನ್ ಭಾಗವತ್

Nation survey: ಇಂದೇ ಲೋಕಸಭೆ ಚುನಾವಣೆ ನಡೆದರೆ NDA ಎಷ್ಟು ಸ್ಥಾನ ಗೆಲ್ಲುತ್ತೆ ಗೊತ್ತಾ?

SCO summit: ಟ್ರಂಪ್ ಗೆ ಸೆಡ್ಡು; ಚೀನಾ, ರಷ್ಯಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಭೆಗೆ ಪ್ರಧಾನಿ ಮೋದಿ ಸಜ್ಜು; ದಿಗ್ಗಜರ ಸಮಾಗಮದ ಮೇಲೆ ಜಗತ್ತಿನ ಕಣ್ಣು!

"ಭಾರತೀಯರು ಬಗ್ಗದೇ ಹೋದರೆ...": ಹತಾಶಗೊಂಡ ಟ್ರಂಪ್ ಸಲಹೆಗಾರನಿಂದ ನೇರಾನೇರ ಬೆದರಿಕೆ!

ಯಾವುದೇ ವ್ಯಕ್ತಿ 75 ವರ್ಷಗಳಿಗೆ ನಿವೃತ್ತಿಯಾಗಬೇಕು ಎಂದು ಎಂದಿಗೂ ಹೇಳಿಲ್ಲ: RSS ಮುಖ್ಯಸ್ಥ Mohan bhagwat ಸ್ಪಷ್ಟನೆ

SCROLL FOR NEXT