ಚೀನಾ ದೂತವಾಸ ಕಚೇರಿಯಿಂದ ಭಯೋತ್ಪಾದಕರರನ್ನು ಹಿಮ್ಮೆಟ್ಟಿಸಿದ ಕರಾಚಿ ಮಹಿಳಾ ಪೊಲೀಸ್ ಅಧಿಕಾರಿ 
ವಿದೇಶ

ಚೀನಾ ದೂತವಾಸ ಕಚೇರಿಯಿಂದ ಉಗ್ರರನ್ನು ಹಿಮ್ಮೆಟ್ಟಿಸಿದ ಕರಾಚಿ ಮಹಿಳಾ ಪೊಲೀಸ್ ಅಧಿಕಾರಿ

ಕರಾಚಿಯ ಮಹಿಳಾ ಪೊಲೀಸ್ ಅಧಿಕಾರಯೊಬ್ಬರು ಚೀನಾ ದೂತವಾಸ ಸಿಬ್ಬಂದಿಗಳನ್ನು ಭಯೋತ್ಪಾದಕರಿಂದ ರಕ್ಷಿಸಿದ್ದಾರೆ.

ಕರಾಚಿ: ಕರಾಚಿಯ ಮಹಿಳಾ ಪೊಲೀಸ್ ಅಧಿಕಾರಯೊಬ್ಬರು ಚೀನಾ ದೂತವಾಸ ಸಿಬ್ಬಂದಿಗಳನ್ನು ಭಯೋತ್ಪಾದಕರಿಂದ ರಕ್ಷಿಸಿದ್ದಾರೆ. 
ಸುಹೈ ಅಜೀಜ್ ತಾಲ್ಪುರ್  ಭಯೋತ್ಪಾದಕರನ್ನು ಚೀನಾ ದೂತವಾಸ ಕಚೇರಿಯಿಂದ ಹಿಮ್ಮೆಟ್ಟಿಸಿದ್ದ ದಿಟ್ಟ ಅಧಿಕಾರಿಯಾಗಿದ್ದು, ಹಿಂದೊಮ್ಮೆ ಖಾಸಗಿ ಶಾಲೆಗೆ ಸೆರಿದ್ದಕ್ಕಾಗಿ ಕುಟುಂಬ ಸಂಬಂಧಿಕರು ಹಾಗೂ ಗ್ರಾಮಸ್ಥರಿಂದ ಪರಿತ್ಯಕ್ತರಾಗಿದ್ದರು. ಆದರೆ ಅದೇ  ಮಹಿಳಾ ಅಧಿಕಾರಿ ನೇತೃತ್ವದಲ್ಲಿ ಇಂದು ಪಾಕಿಸ್ತಾನ ಪೊಲೀಸರು ಬಲೂಚ್ ಲಿಬರೇಷನ್ ಆರ್ಮಿ ಸದಸ್ಯರ ದಾಳಿಯನ್ನು ವಿಫಲಗೊಳಿಸಿದ್ದಾರೆ. 
9 ಹ್ಯಾಂಡ್ ಗ್ರೆನೇಡ್, ದಾಳಿ ಬಂದೂಕುಗಳು, ಸ್ಫೋಟಕಗಳನ್ನು ಹೊಂದಿದ್ದ ಭಯೋತ್ಪಾದಕರು ಚೀನಾ ದೂತವಾಸ ಕಚೇರಿಗೆ ನುಗ್ಗಲು ಯತ್ನಿಸಿದರು. ಆದರೆ ಶಸ್ತ್ರಧಾರಿಗಳು ಚೀನಾ ದೂತವಾಸ ಕಚೇರಿಯನ್ನು ಪ್ರವೇಶಿಸದಂತೆ ತಡೆಯುವಲ್ಲಿ ಸುಹೈ ಅಜೀಜ್ ತಾಲ್ಪುರ್ ತಂಡ ಯಶಸ್ವಿಯಾಗಿದೆ. 
ಚೀನಾ ದೂತವಾಸ ಕಚೇರಿಗೆ ನುಗ್ಗಿ ಅಲ್ಲಿರುವವರನ್ನು ಒತ್ತೆಯಾಳುಗಳಾಗಿ ಇಟ್ಟುಕೊಳ್ಳುವ ಉದ್ದೇಶದಿಂದ ಮಾತ್ರೆಗಳು, ಆಹಾರ ಪದಾರ್ಥಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಹೊಂದಿದ್ದರು. ಆದರೆ ಗೇಟ್ ಬಳಿ ಆಗಮಿಸುತ್ತಿದ್ದಂತೆಯೇ ಪೊಲೀಸ್ ಅಧಿಕಾರಿಗಳು ಪ್ರತಿ ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಭಯೋತ್ಪಾದಕರು ಹಗಊ ಇಬ್ಬರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ.
ಸಿಂಧ್ ಪ್ರಾಂತ್ಯದ ಭಾಯ್ ಖಾನ್ ಎಂಬ ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ಸುಹೈ ಅವರನ್ನು ಪೋಷಕರು ಖಾಸಗಿ ಶಾಲೆಗೆ ಸೇರಿಸಿದ್ದರು. ಆದರೆ ಇದನ್ನು ಮೂದಲಿಸಿದ್ದ ಸಂಬಂಧಿಕರು ಹಾಗೂ ಮುಹಮ್ಮದ್ ಖಾನ್ ಜಿಲ್ಲೆಯ ತಲ್ಪುರ್ ಗ್ರಾಮಸ್ಥರು ಆಕೆ ಹಾಗೂ ಆಕೆಯ ಕುಟುಂಬ ಸದಸ್ಯರಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ  ಎಲ್ಲಾ ಸವಾಲುಗಳನ್ನು ಎದುರಿಸಿದ್ದ ಸುಹೈ 2013 ರಲ್ಲಿ ಪ್ರತಿಷ್ಠಿತ ಸೆಂಟ್ರಲ್ ಸುಪೀರಿಯರ್ ಸರ್ವೀಸಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪೊಲೀಸ್ ಇಲಾಖೆ ಸೇರಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪರೀಕ್ಷಾ ವ್ಯವಸ್ಥೆ ಸುಧಾರಣೆ, ನಂದನ್ ನಿಲೇಕಣಿ ನೇತೃತ್ವದಲ್ಲಿ ಉನ್ನತ ಮಟ್ಟದ ಟಾಸ್ಕ್ ಫೋರ್ಸ್ ರಚನೆ- ಪ್ರಧಾನಿ ಮೋದಿ ಘೋಷಣೆ! Video

ಕಲ್ಯಾಣ ಕರ್ನಾಟಕ ಮಂದಿಗೆ ಸಿಹಿ ಸುದ್ದಿ: ಅಗ್ನಿಶಾಮಕ ಇಲಾಖೆಯಲ್ಲಿ 490 ಹುದ್ದೆಗಳ ನೇಮಕಾತಿಗೆ ಸಚಿವ ಪ್ರಿಯಾಂಕ್ ಸೂಚನೆ

CWG 2026: ಕ್ರೀಡಾಕೂಟದಲ್ಲಿ ಹ್ಯಾಟ್ರಿಕ್ ಸಾಧನೆ; ಚಿನ್ನದ ಪದಕ ಗೆದ್ದ ಮೀರಾಬಾಯಿ ಚಾನು, ಭಾರತಕ್ಕೆ ಮೊದಲ ಚಿನ್ನ ಪದಕ!

PoK ಮರಳಿ ಪಡೆಯುವುದೇ ಭಾರತ-ಪಾಕ್ ನಡುವೆ ಬಾಕಿ ಇರುವ ಏಕೈಕ ಸಮಸ್ಯೆ: ಕೇಂದ್ರ ಸಚಿವ ಜಿತೇಂದ್ರ ಸಿಂಗ್

ಭಾರತದಲ್ಲಿ ಮುಸ್ಲಿಮರು PM, CM ಆಗದಿರುವುದಕ್ಕೆ ಕಾರಣ ಏನು ಗೊತ್ತ? Owaisi ಮುಸ್ಲಿಮರ ದೊಡ್ಡ ಶತ್ರು: ಮೌಲಾನಾ ಸಾಜಿದ್