ಚೀನಾ ದೂತವಾಸ ಕಚೇರಿಯಿಂದ ಭಯೋತ್ಪಾದಕರರನ್ನು ಹಿಮ್ಮೆಟ್ಟಿಸಿದ ಕರಾಚಿ ಮಹಿಳಾ ಪೊಲೀಸ್ ಅಧಿಕಾರಿ 
ವಿದೇಶ

ಚೀನಾ ದೂತವಾಸ ಕಚೇರಿಯಿಂದ ಉಗ್ರರನ್ನು ಹಿಮ್ಮೆಟ್ಟಿಸಿದ ಕರಾಚಿ ಮಹಿಳಾ ಪೊಲೀಸ್ ಅಧಿಕಾರಿ

ಕರಾಚಿಯ ಮಹಿಳಾ ಪೊಲೀಸ್ ಅಧಿಕಾರಯೊಬ್ಬರು ಚೀನಾ ದೂತವಾಸ ಸಿಬ್ಬಂದಿಗಳನ್ನು ಭಯೋತ್ಪಾದಕರಿಂದ ರಕ್ಷಿಸಿದ್ದಾರೆ.

ಕರಾಚಿ: ಕರಾಚಿಯ ಮಹಿಳಾ ಪೊಲೀಸ್ ಅಧಿಕಾರಯೊಬ್ಬರು ಚೀನಾ ದೂತವಾಸ ಸಿಬ್ಬಂದಿಗಳನ್ನು ಭಯೋತ್ಪಾದಕರಿಂದ ರಕ್ಷಿಸಿದ್ದಾರೆ. 
ಸುಹೈ ಅಜೀಜ್ ತಾಲ್ಪುರ್  ಭಯೋತ್ಪಾದಕರನ್ನು ಚೀನಾ ದೂತವಾಸ ಕಚೇರಿಯಿಂದ ಹಿಮ್ಮೆಟ್ಟಿಸಿದ್ದ ದಿಟ್ಟ ಅಧಿಕಾರಿಯಾಗಿದ್ದು, ಹಿಂದೊಮ್ಮೆ ಖಾಸಗಿ ಶಾಲೆಗೆ ಸೆರಿದ್ದಕ್ಕಾಗಿ ಕುಟುಂಬ ಸಂಬಂಧಿಕರು ಹಾಗೂ ಗ್ರಾಮಸ್ಥರಿಂದ ಪರಿತ್ಯಕ್ತರಾಗಿದ್ದರು. ಆದರೆ ಅದೇ  ಮಹಿಳಾ ಅಧಿಕಾರಿ ನೇತೃತ್ವದಲ್ಲಿ ಇಂದು ಪಾಕಿಸ್ತಾನ ಪೊಲೀಸರು ಬಲೂಚ್ ಲಿಬರೇಷನ್ ಆರ್ಮಿ ಸದಸ್ಯರ ದಾಳಿಯನ್ನು ವಿಫಲಗೊಳಿಸಿದ್ದಾರೆ. 
9 ಹ್ಯಾಂಡ್ ಗ್ರೆನೇಡ್, ದಾಳಿ ಬಂದೂಕುಗಳು, ಸ್ಫೋಟಕಗಳನ್ನು ಹೊಂದಿದ್ದ ಭಯೋತ್ಪಾದಕರು ಚೀನಾ ದೂತವಾಸ ಕಚೇರಿಗೆ ನುಗ್ಗಲು ಯತ್ನಿಸಿದರು. ಆದರೆ ಶಸ್ತ್ರಧಾರಿಗಳು ಚೀನಾ ದೂತವಾಸ ಕಚೇರಿಯನ್ನು ಪ್ರವೇಶಿಸದಂತೆ ತಡೆಯುವಲ್ಲಿ ಸುಹೈ ಅಜೀಜ್ ತಾಲ್ಪುರ್ ತಂಡ ಯಶಸ್ವಿಯಾಗಿದೆ. 
ಚೀನಾ ದೂತವಾಸ ಕಚೇರಿಗೆ ನುಗ್ಗಿ ಅಲ್ಲಿರುವವರನ್ನು ಒತ್ತೆಯಾಳುಗಳಾಗಿ ಇಟ್ಟುಕೊಳ್ಳುವ ಉದ್ದೇಶದಿಂದ ಮಾತ್ರೆಗಳು, ಆಹಾರ ಪದಾರ್ಥಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ಹೊಂದಿದ್ದರು. ಆದರೆ ಗೇಟ್ ಬಳಿ ಆಗಮಿಸುತ್ತಿದ್ದಂತೆಯೇ ಪೊಲೀಸ್ ಅಧಿಕಾರಿಗಳು ಪ್ರತಿ ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಭಯೋತ್ಪಾದಕರು ಹಗಊ ಇಬ್ಬರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ.
ಸಿಂಧ್ ಪ್ರಾಂತ್ಯದ ಭಾಯ್ ಖಾನ್ ಎಂಬ ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ಸುಹೈ ಅವರನ್ನು ಪೋಷಕರು ಖಾಸಗಿ ಶಾಲೆಗೆ ಸೇರಿಸಿದ್ದರು. ಆದರೆ ಇದನ್ನು ಮೂದಲಿಸಿದ್ದ ಸಂಬಂಧಿಕರು ಹಾಗೂ ಮುಹಮ್ಮದ್ ಖಾನ್ ಜಿಲ್ಲೆಯ ತಲ್ಪುರ್ ಗ್ರಾಮಸ್ಥರು ಆಕೆ ಹಾಗೂ ಆಕೆಯ ಕುಟುಂಬ ಸದಸ್ಯರಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ  ಎಲ್ಲಾ ಸವಾಲುಗಳನ್ನು ಎದುರಿಸಿದ್ದ ಸುಹೈ 2013 ರಲ್ಲಿ ಪ್ರತಿಷ್ಠಿತ ಸೆಂಟ್ರಲ್ ಸುಪೀರಿಯರ್ ಸರ್ವೀಸಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪೊಲೀಸ್ ಇಲಾಖೆ ಸೇರಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT