ಪಾಕ್ ವಿರುದ್ಧ ಮುನಿಸು: ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ್ದು ಎಂದ ಚೀನಾ! 
ವಿದೇಶ

ಪಾಕ್ ವಿರುದ್ಧ ಮುನಿಸು: ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ್ದು ಎಂದ ಚೀನಾ!

ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತದ ಭಾಗ ಎಂದು ತೋರಿಸುವ ನಕಾಶೆಯೊಂದನ್ನು ಚೀನಾ ಸರ್ಕಾರಿ ಮಾದ್ಯಮವೊಂದು ಪ್ರಸಾರ ಮಾಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.

ಬೀಜಿಂಗ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತದ ಭಾಗ ಎಂದು ತೋರಿಸುವ ನಕಾಶೆಯೊಂದನ್ನು ಚೀನಾ ಸರ್ಕಾರಿ ಮಾದ್ಯಮವೊಂದು ಪ್ರಸಾರ ಮಾಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗೆ ಪಾಕಿಸ್ತಾನದ ಕರಾಚಿಯಕ್ಕುಇನ ಚೀನಾ ರಾಯಭಾರ ಕಛೇರಿ ಮೇಲೆ ಭಯೋತ್ಪಾದಕ ದಾಳಿ ನಡೆಇದ್ದು ಆ ಸಂಬಂಧ ವರದಿ ಪ್ರಸಾರ ಮಾಡುವ ಸಮಯದಲ್ಲಿ ಚೀನಾ ಸರ್ಕಾರಿ ಸ್ವಾಮ್ಯದ ಸಿಜಿಟಿಎನ್‌ ಸುದ್ದಿವಾಹಿನಿ ಪಿಓಕೆಯನ್ನು ಭಾರತದ ಭಾಗ ಎಂದು ತೋರಿಸುವ ನಕ್ಷೆ ಯನ್ನು ಪ್ರಸಾರ ಮಾಡಿದೆ.
ಜಮ್ಮು ಕಾಶ್ಮೀರ ನಖ್ಷೆಯೊಡನೆ ಪಾಕ್ ಆಕ್ರಮಿತ ಕಾಶ್ಮೀರವನ್ನೂ ತೋರಿಸಿ ಇದು ಭಾರತ ಆಡಳಿತ ಪ್ರದೇಶ ಎಂದು ಸುದ್ದಿ ವಾಹಿನಿ ಹೇಳಿದೆ.
ಚೀನಾ ರಾಯಭಾರಿ ಕಛೇರಿ ಮೇಲಿನ ದಾಳಿಯ ವೇಳೆ ತನ್ನ ನಾಗರಿಕರ ರಕ್ಷಣೆಗೆ ಪಾಕಿಸ್ತಾನ ವಿಫಲವಾಗಿದ್ದು ಈ ಸಂಬಂಧ ಚೀನಾ ಪಾಕ್ ವಿರುದ್ಧ ಮುನಿಸಿಕೊಂಡಿದೆ ಎನ್ನಲಾಗುತ್ತಿದೆ.
ಡಿಸೆಂಬರ್ ೧೦ಕ್ಕೆ ಭಾರತ-ಚೀನಾ ಸೇನಾ ಸಮರಾಭ್ಯಾಸವಿದೆ, ಅಲ್ಲದೆ ಕರ್ತಾರ್ ಪುರ್ ಕಾರಿಡಾರ್ ಸಂಬಂಧ ಸಹ ಚರ್ಚೆ ನಡೆಯುತ್ತಿದೆ. ಈ ವೇಳೆ ಚೀನಾ ಪಿಓಕೆಯನ್ನು ಭಾರತದ ಭಾಗವೆಂದು ತೋರಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ.
ಇನ್ನು ಸಿಜಿಟಿಎನ್ ನಲ್ಲಿ ಇದಾಗಲೇ ಸಿದ್ದವಾಗಿರುವ ನಕಾಶೆಗಳಿರುತ್ತದೆ. ಅದನ್ನು ಬದಲಿಸಲು ವಾಹಿನಿ ಸಿಬ್ಬಂದಿಗಳಿಗೆ ಸಾಧ್ಯವಿಲ್ಲ ಎನ್ನಲಾಗಿದೆ.ಉನ್ನತಾಧಿಕಾರಿಗಳ ಸೂಚನೆ ಇಲ್ಲದೆ ಪ್ರೊಡಕ್ಷನ್ ಸಿಬ್ಬಂದಿಗಳು ಈ ಸಂಬಂಧ ನಿರ್ಧಾರ ಕೈಗೊಳ್ಳುವಂತಿಲ್ಲ ಎಂದು ಮೂಲಗಳು ಹೇಳಿದೆ.
ಇನ್ನೂ ವಿಶೇಷವೆಂದರೆ ಚೀನಾ ತನ್ನ ರಾಷ್ಟ್ರೀಯ, ಅಂತರಾಷ್ಟ್ರೀಯ ನೀತಿ ಬದಲಾಯಿಸುವ ಮುನ್ನ ದೇಶದ ಅಧಿಕೃತ ಮಾದ್ಯಮಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಬಳಸುತ್ತಾರೆ.ಆದರೆ ಈಗ ಮಾಡಿದ ಬದಆವಣೆ ಅದೇನೂ ಅಧಿಕೃತ ಎನ್ನಲಾಗುವುದಿಲ್ಲ  ಆದರೆ ಚೀನಾ ಈ ಹಿಂದೆ ಎಂದೂ ಈ ರೀತಿಯಾಗಿ ಪಿಓಕೆಯನ್ನು ಭಾರತದ್ದೆಂದು ತೋರಿಸುವ ನಕ್ಷೆ ಪ್ರಸಾರ ಮಾಡಿರಲಿಲ್ಲ ಎಂಬ ಅಂಶ ಗಮನಾರ್ಹ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT