ಇಮ್ರಾನ್ ಖಾನ್ 
ವಿದೇಶ

ಪಾಕಿಸ್ತಾನ: ಪ್ರಧಾನಿ ನಿವಾಸದಲ್ಲಿ ನವಾಜ್ ಶರೀಫ್ ಇಟ್ಟುಕೊಂಡಿದ್ದ 8 'ಎಮ್ಮೆಗಳ' ಹರಾಜು !

ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ತೀವ್ರ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದು, ಪ್ರಧಾನಿ ನಿವಾಸದಲ್ಲಿ ಮಾಜಿ ಪ್ರಧಾನಿ ನವಾಜ್ ಶರೀಫ್ ಇಟ್ಟುಕೊಂಡಿದ್ದ 8 ಎಮ್ಮೆಗಳನ್ನು ಮಾರಾಟ ಮಾಡಿ, 23 ಲಕ್ಷ ರೂಪಾಯಿಯನ್ನು ಸಂಪಾದಿಸಿದೆ.

ಇಸ್ಲಾಮಬಾದ್ :ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ತೀವ್ರ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದು, ಪ್ರಧಾನಿ ನಿವಾಸದಲ್ಲಿ ಮಾಜಿ ಪ್ರಧಾನಿ ನವಾಜ್ ಶರೀಫ್  ಇಟ್ಟುಕೊಂಡಿದ್ದ 8 ಎಮ್ಮೆಗಳನ್ನು ಮಾರಾಟ ಮಾಡಿ, 23 ಲಕ್ಷ ರೂಪಾಯಿಯನ್ನು ಸಂಪಾದಿಸಿದೆ.

ಬೃಹತ್ ಪ್ರಮಾಣದ ಸಾಲದಿಂದಾಗಿ  ಇಮ್ರಾನ್ ಖಾನ್  ದೊಡ್ಡ ಮಟ್ಟದ ಆರ್ಥಿಕ ಕೊರತೆ ಅನುಭವಿಸುತ್ತಿದ್ದು, ಕಳೆದ ವಾರ 61 ಸರ್ಕಾರದ ಲಕ್ಸುರಿ ಕಾರುಗಳನ್ನು  ಹರಾಜು ಮಾಡಿತ್ತು. ಇದರಿಂದಾಗಿ 200 ಮಿಲಿಯನ್ ಹಣ ಗಳಿಸಿತ್ತು.

ಬುಲೆಟ್ ಪ್ರೂಪ್ ವಾಹನಗಳು, ನಾಲ್ಕು  ಹೆಲಿಕಾಪ್ಟರ್ ಸೇರಿದಂತೆ 102 ಸರ್ ಪ್ಲಸ್  ಕಾರುಗಳನ್ನು  ಹರಾಜು ಹಾಕುವ ಚಿಂತನೆ ನಡೆಸಲಾಗಿದೆ. ಇಸ್ಲಾಮಾಬಾದಿನಲ್ಲಿ ನಡೆದ ಹರಾಜಿನಲ್ಲಿ ಮೂರು ಎಮ್ಮೆಗಳು ಹಾಗೂ ಐದು ಮರಿಗಳನ್ನು 2, 302, 000 ರೂ. ಗೆ ಹರಾಜು ಹಾಕಲಾಗಿದೆ. ಇವುಗಳನ್ನು ನವಾಜ್ ಷರೀಪ್  ಅವರ ಬೆಂಬಲಿಗರೇ ಕೊಂಡು ಕೊಂಡಿದ್ದಾರೆ ಎಂದು  ಡಾನ್   ಪತ್ರಿಕೆ ವರದಿ ಮಾಡಿದೆ.

8 ಎಮ್ಮೆಗಳಲ್ಲಿ ಒಂದನ್ನು  385,000 ರೂ.ಗೆ  ನವಾಜ್ ಷರೀಪ್ ಬೆಂಬಲಿಗ ಕ್ವಾಲಬ್ ಆಲಿ ಎಂಬವರು ಹರಾಜು ಕೂಗಿದ್ದಾರೆ. ಶರೀಫ್  ಮೇಲಿನ ಅಭಿಮಾನದಿಂದಾಗಿ ಮೂರು ಪಟ್ಟು ಹೆಚ್ಚಿನ ಬೆಲೆ ನೀಡಿ ಕೊಂಡುಕೊಳ್ಳಲಾಗಿದೆ . ನಾಲ್ಕು ಮರಿ ಎಮ್ಮೆಗಳಲ್ಲಿ ಎರಡನ್ನು ಪಿಎಂಎಲ್ -ಎನ್  ಪಕ್ಷದ ಕಾರ್ಯಕರ್ತ ಪಾಖರ್  ವಾರ್ಯಾಚಿ  215, 000 ಹಾಗೂ 270,000ಕ್ಕೆ  ಮತ್ತೊಬ್ಬರು ಮೂರನೇ ಮರಿಯನ್ನು 182,000 ಗೆ ಕೊಂಡುಕೊಂಡಿದ್ದಾರೆ ಎಂದು ಜಿಯೊ ನ್ಯೂಸ್ ವರದಿ ಮಾಡಿದೆ.

68 ವರ್ಷದ ಶರೀಫ್  ಭ್ರಷ್ಟಾಚಾರ ಪ್ರಕರಣದಲ್ಲಿ  10 ವರ್ಷ ಜೈಲುಶಿಕ್ಷೆಗೊಳಗಾಗಿದ್ದರು. ಉನ್ನತ ನ್ಯಾಯಾಲಯ ಶಿಕ್ಷೆಯನ್ನು ರದ್ದುಗೊಳಿಸಿದ ನಂತರ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT