ಉಗ್ರ ದಾಳಿ ನಡೆದ ಚರ್ಚ್ ಗೆ ಭೇಟಿ ನೀಡಿದ್ದ ಶ್ರೀಲಂಕಾ ಅಧ್ಯಕ್ಷ 
ವಿದೇಶ

ಶ್ರೀಲಂಕಾದಲ್ಲಿ ಮತ್ತೆ ಉಗ್ರ ದಾಳಿ: ರಕ್ಷಣೆ, ಪೊಲೀಸ್ ಮುಖ್ಯಸ್ಥರ ತಲೆದಂಡ

ಶ್ರೀಲಂಕಾದಲ್ಲಿ ಸಂಭವಿಸುತ್ತಿರುವ ಸರಣಿ ಉಗ್ರ ದಾಳಿ ಅಲ್ಲಿನ ಸರ್ಕಾರ ಕಂಗೆಡಿಸಿದ್ದು, ಪರಿಣಾಮ ಶ್ರೀಲಂಕಾ ರಕ್ಷಣಾ ಮುಖ್ಯಸ್ಥರು ಹಾಗೂ ಪೊಲೀಸ್ ಮುಖ್ಯಸ್ಥರ ತಲೆದಂಡವಾಗಿದೆ.

ಕೊಲಂಬೋ: ಶ್ರೀಲಂಕಾದಲ್ಲಿ ಸಂಭವಿಸುತ್ತಿರುವ ಸರಣಿ ಉಗ್ರ ದಾಳಿ ಅಲ್ಲಿನ ಸರ್ಕಾರ ಕಂಗೆಡಿಸಿದ್ದು, ಪರಿಣಾಮ ಶ್ರೀಲಂಕಾ ರಕ್ಷಣಾ ಮುಖ್ಯಸ್ಥರು ಹಾಗೂ ಪೊಲೀಸ್ ಮುಖ್ಯಸ್ಥರ ತಲೆದಂಡವಾಗಿದೆ.
ಈ ಬಗ್ಗೆ ಸ್ವತಃ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಶ್ರೀಲಂಕಾದಲ್ಲಿ ಸಂಭವಿಸುತ್ತಿರುವ ಸರಣಿ ಉಗ್ರ ದಾಳಿ ಸರ್ಕಾರದ ಕಂಗೆಡಿಸಿದೆ. ರಕ್ಷಣಾ ವಿಚಾರದಲ್ಲಿ ಗಭೀರ ಕರ್ತವ್ಯಲೋಪ ಆರೋಪದ ಮೇರೆಗೆ ಶ್ರೀಲಂಕಾ ರಕ್ಷಣಾ ಕಾರ್ಯದರ್ಶಿ ಹೇಮಸಿರಿ ಫರ್ನಾಂಡೋ ಅವರ ರಾಜಿನಾಮೆ ಪಡೆಯಲಾಗಿದೆ. ಅಂತೆಯೇ ಶ್ರೀಲಂಕಾ ಪೊಲೀಸ್ ಮುಖ್ಯಸ್ಥರೂ ಕೂಡ ರಾಜಿನಾಮೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಉಗ್ರ ದಾಳಿ ಕುರಿತು ಭಾರತ ನೀಡಿದ್ದ ಎಚ್ಚರಿಕೆಯನ್ನು ಅಧಿಕಾರಿಗಳು ಅಧ್ಯಕ್ಷರಿಗೆ ನೀಡಿರಲಿಲ್ಲ. ರಕ್ಷಣಾ ವಿಚಾರದಲ್ಲಿ ಆದ ಗಂಭೀರ ಲೋಪವಾಗಿದೆ ಎಂದು ಅಧ್ಯಕ್ಷ ಸಿರಿಸೇನಾ ಹೇಳಿದ್ದಾರೆ.
ಇನ್ನು 'ಕಳೆದ ಈಸ್ಟರ್ ಸಂಡೆ ದಿನದಂದು ನಡೆದಿದ್ದ ಭೀಕರ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ದಾಳಿ ನಡೆಸಿದ್ದ 8 ಮಂದಿ ದಾಳಿಕೋರರ ಗುರುತು ಪತ್ತೆ ಮಾಡಲಾಗಿದ್ದು, ದಾಳಿಕೋರರ ಪೈಕಿ ಓರ್ವ ಮಹಿಳೆ ಕೂಡ ಸೇರಿದ್ದಾರೆ. ದಾಳಿಕೋರರೆಲ್ಲರೂ ಶ್ರೀಲಂಕಾ ನಿವಾಸಿಗಳು ಎಂದು ತಿಳಿದುಬಂದಿದ್ದು, ದಾಳಿಯಲ್ಲಿ ಇಸಿಸ್ ನೊಂದಿಗೆ ಎರಡು ಸ್ಥಳೀಯ ಉಗ್ರ ಸಂಘಟನೆಗಳಾದ ನ್ಯಾಷನಲ್ ಥೌವೀದ್ ಜಮಾತ್ ಮತ್ತು ಜಮಾಯತುಲ್ ಮಿಲಾಥು ಇಬ್ರಾಹಿಂ ಸಂಘಟನೆ ಕೂಡ ಕೈ ಜೋಡಿಸಿವೆ. ಈ  ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ ಎಂದು ಸಿರಿಸೇನಾ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT